ನಿರ್ದೇಶಕ ಪವನ್ ಒಡೆಯರ್ ನಿಶ್ಚಿತಾರ್ಥ
Team Udayavani, Dec 7, 2017, 3:31 PM IST
ನಿರ್ದೇಶಕ ಪವನ್ ಒಡೆಯರ್ ನಟಿ ಆಪೇಕ್ಷಾ ಪುರೋಹಿತ್ ಅವರ ಕೈ ಹಿಡಿಯಲಿದ್ದಾರೆ ಹಾಗೂ ಸದ್ಯದಲ್ಲೇ ಅವರ ನಿಶ್ಚಿತಾರ್ಥ ನಡೆಯಲಿದೆ ಎಂಬ ಸುದ್ದಿ ನಿಮಗೆ ಗೊತ್ತೇ ಇದೆ. ಈಗ ಪವನ್ ಒಡೆಯರ್ ನಿಶ್ಚಿತಾರ್ಥ ನಡೆದಿದೆ. ಗುರುವಾರ ಪವನ್ ಒಡೆಯರ್ ನಿಶ್ಚಿತಾರ್ಥ ಬಾಗಲಕೋಟೆಯಲ್ಲಿ ನಡೆದಿದೆ.
ಎರಡು ಕುಟುಂಬಗಳ ಆಪ್ತೆಷ್ಟರಷ್ಟೇ ಭಾಗಿಯಾಗಿದ್ದ ಈ ಸರಳ ಸಮಾರಂಭದಲ್ಲಿ ಅಪೇಕ್ಷಾ ಅವರಿಗೆ ಪವನ ಉಂಗುರು ತೊಡಿಸಿದರು. ಅಪೇಕ್ಷಾ ಪುರೋಹಿತ್ ಅವರದು ಮೂಲತಃ ಬಾಗಲಕೋಟೆ. ಫ್ಯಾಷನ್ ಡಿಸೈನರ್ ಆಗಿರುವ ಅಪೇಕ್ಷಾ, ಸೀತಾರಾಮ್ ನಿರ್ದೇಶನದ “ಕಾಫಿ ತೋಟ’ ಚಿತ್ರದ ನಾಯಕಿಯಾಗಿ ನಟಿಸಿದ್ದರು.
ಇಬ್ಬರು ಉತ್ತರ ಕರ್ನಾಟಕದವರಾಗಿದ್ದು, ಪವನ್ಗೆ ಉತ್ತರ ಕರ್ನಾಟಕದ ಹುಡುಗಿಯನ್ನೇ ಮದುವೆಯಾಗಬೇಕೆಂಬ ಆಸೆ ಇತ್ತಂತೆ. ಅದರಂತೆ ಈಗ ಅಪೇಕ್ಷಾ ಅವರ ಕೈ ಹಿಡಿಯುತ್ತಿದ್ದಾರೆ. ಮುಂದಿನ ವರ್ಷ ಆಗಸ್ಟ್ನಲ್ಲಿ ಇವರ ಮದುವೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ