ಕೆಲವರಿಗೆ ಪ್ಲಸ್‌; ಕೆಲವರಿಗೆ ಮೈನಸ್‌


Team Udayavani, Mar 13, 2018, 11:06 AM IST

plus-minus.jpg

ಯುಎಫ್ಓ ಮತ್ತು ಕ್ಯೂಬ್‌ ಸಂಸ್ಥೆಗಳ ವಿರುದ್ಧ ಸಿಡಿದೆದ್ದಿರುವ ದಕ್ಷಿಣ ಭಾರತದ ಚಲನಚಿತ್ರರಂಗ, ಚಿತ್ರಗಳನ್ನು ಬಿಡುಗಡೆ ಮಾಡದಿರುವುದಕ್ಕೆ ತೀರ್ಮಾನಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗಾಗಲೇ ಬೇರೆ ರಾಜ್ಯಗಳಲ್ಲಿ ಮಾರ್ಚ್‌ 2ರಿಂದ ಹೊಸ ಚಿತ್ರಗಳ ಬಿಡುಗಡೆ ರದ್ದಾದರೆ, ಕರ್ನಾಟಕದಲ್ಲಿ ಕಳೆದ ಶುಕ್ರವಾರದಿಂದ (ಮಾರ್ಚ್‌ 9ರಿಂದ) ಯಾವುದೇ ಹೊಸ ಕನ್ನಡ ಚಿತ್ರವೂ ಬಿಡುಗಡೆಯಾಗಿಲ್ಲ.

ಅಷ್ಟೇ ಅಲ್ಲ, ಸಮಸ್ಯೆ ಬಗೆಹರಿಯುವವರೆಗೂ ಅನಿರ್ಧಿಷ್ಟ ಕಾಲ ಚಿತ್ರಗಳನ್ನು ಬಿಡುಗಡೆ ಮಾಡದಿರುವುದಕ್ಕೆ ತೀರ್ಮಾನಿಸಲಾಗಿದೆ. ಮುಂದಿನ ವಾರ ಹೇಗೋ ಗೊತ್ತಿಲ್ಲ. ಆದರೆ, ಈ ವಾರ ಯಾವುದೇ ಚಿತ್ರ ಬಿಡುಗಡೆಯಾಗುತ್ತಿಲ್ಲ. ಕಳೆದ ವಾರ ಯಾವುದೇ ಚಿತ್ರ ಬಿಡುಗಡೆಯಾಗದ ಕಾರಣ, ತಮ್ಮ ಚಿತ್ರಕ್ಕೆ ಪ್ಲಸ್‌ ಆಯಿತು ಎನ್ನುತ್ತಾರೆ “ಪ್ರೀತಿಯ ರಾಯಭಾರಿ’ ಚಿತ್ರದ ನಿರ್ದೇಶಕ ಮುತ್ತು.

“ನಮ್ಮ ಚಿತ್ರ ಸುಮಾರು 80 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಮೊದಲ ವಾರ ನಿಧಾನವಾಗಿಯೇ ಜನರ ಬರತೊಡಗಿದರು. ಎರಡನೇ ವಾರ ಯಾವ ಚಿತ್ರಗಳೂ ಬಿಡುಗಡೆಯಾಗದ ಕಾರಣ, ನಮ್ಮ ಚಿತ್ರದ ಬಗ್ಗೆ ಅದಾಗಲೇ ಒಂದಷ್ಟು ಉತ್ತುಮ ಪ್ರತಿಕ್ರಿಯೆ ಹರಿದಾಡಿತ್ತು. ಜನರಿಗೂ ಬೇರೆ ಸಿನಿಮಾ ನೋಡಲು ಬೇರೆ ಆಯ್ಕೆ ಇರಲಿಲ್ಲ. ಅನಿವಾರ್ಯ ಎಂಬಂತೆ “ಪ್ರೀತಿಯ ರಾಯಭಾರಿ’ ಚಿತ್ರ ವೀಕ್ಷಿಸಲು ಬಂದರು.

ಬಂದವರೆಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಾ ಹೋಯ್ತು. ಜನರಿಗೂ ಕೂಡ ಚಿತ್ರ ತಲುಪಿತು. ಮೊದಲ ವಾರದಲ್ಲಿ ಹೇಳಿಕೊಳ್ಳುವಂತಹ ಗಳಿಕೆ ಇರಲಿಲ್ಲ. ಎರಡನೇ ವಾರದಿಂದ ಮೆಲ್ಲನೆ ಹೆಚ್ಚಳವಾಗಿದೆ. ಮುಂದಿನ ವಾರದಿಂದ 16 ಚಿತ್ರಮಂದಿರಗಳನ್ನು ಹೆಚ್ಚಿಸುವ ಯೋಚನೆ ಇದೆ. ಹೊಸ ಚಿತ್ರಗಳು ಬಿಡುಗಡೆಯಾಗದಿರುವುದರಿಂದ ನಮಗೆ ಸ್ವಲ್ಪ ಒಳ್ಳೆಯದಾಗಿದೆ.

ಯಾವುದೇ ಹೊಸಬರ ಚಿತ್ರವಿರಲಿ, ಒಂದು ವಾರದವರೆಗೆ ಬೇಗನೆ ಪಿಕಪ್‌ ಆಗೋದಿಲ್ಲ. ಈಗ ಎರಡನೇ ವಾರ ಚೆನ್ನಾಗಿ ಹೋಗುತ್ತಿದೆ. ಮೂರನೆ ವಾರ ಇನ್ನೂ ಚೆನ್ನಾಗಿ ಪ್ರದರ್ಶನ ಕಾಣುತ್ತೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಮುತ್ತು. ಹಾಗಂತ ಎಲ್ಲರಿಗೂ ಈ ಗ್ಯಾಪ್‌ ಅನುಕೂಲವಾಯಿತು ಎಂದು ಹೇಳುವುದು ಕಷ್ಟ. “ಪ್ರೀತಿಯ ರಾಯಭಾರಿ’ ಚಿತ್ರತಂಡದವರಿಗೆ ಇದು ಪ್ಲಸ್‌ ಆದರೆ, ಬೇರೆ ಚಿತ್ರತಂಡದವರಿಗೆ ಮೈನಸ್‌ ಆಗಿದೆ.

ಉದಾಹರಣೆಗೆ, “3000′ ಎಂಬ ಚಿತ್ರವು ರಾಜ್ಯಾದ್ಯಂತ ಸುಮಾರು 110 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಮೊದಲ ವಾರದ ಗಳಿಕೆ ಕಡಿಮೆಯಾಗಿತ್ತು. ಎರಡನೇ ವಾರ ಸರಿ ಹೋಗಬಹುದು ಎಂಬ ಚಿತ್ರತಂಡದವರ ಆಸೆ ನಿರಾಸೆಯಾಯಿತು. ಅದಕ್ಕೆ ಕಾರಣವೂ ಇದೆ. “ಕಳೆದ ವಾರ ಚಿತ್ರ ಬಿಡುಗಡೆಯಾಗದಿದ್ದ ಕಾರಣ, ನಮಗೆ ಯಾವ ಅನುಕೂಲವೂ ಆಗಲಿಲ್ಲ.

ಏಕೆಂದರೆ, ಕಲೆಕ್ಷನ್‌ ಕಡಿಮೆ ಇತ್ತು. ಕಲೆಕ್ಷನ್‌ ಕಡಿಮೆ ಇದ್ದುದರಿಂದ ಬಾಡಿಗೆ ಕಟ್ಟಲು ಆಗಲಿಲ್ಲ. ಹಾಗಾಗಿ ಒಂದೇ ವಾರಕ್ಕೆ ಚಿತ್ರವನ್ನು ತೆಗೆಯಬೇಕಾಯಿತು. ಚಿತ್ರಮಂದಿರದ ಬಾಡಿಗೆ ಹಣವೂ ಬಂದಿಲ್ಲ’ ಎನ್ನುತ್ತಾರೆ “3000′ ಚಿತ್ರದ ತಂಡದವರು. ಇನ್ನು “ಚಿನ್ನದ ಗೊಂಬೆ’ ತಂಡದವರೂ ಇದೇ ಸಮಸ್ಯೆಯನ್ನು ಎದುರಿಸಿದ್ದಾರೆ. “ಇದು ನಮಗೆ ಪ್ಲಸ್‌ ಆಗುತ್ತೆ ಅಂದುಕೊಂಡರೆ, ಅದು ಮೈನಸ್‌ ಆಯ್ತು.

ಸ್ವಪ್ನ ಚಿತ್ರಮಂದಿರಕ್ಕೆ ಚಿತ್ರವನ್ನು ಶಿಫ್ಟ್ ಮಾಡಿದರೂ ಪ್ರಯೋಜನವಾಗಿಲ್ಲ. ಒಂದು ಕೋಟಿ ಖರ್ಚು ಮಾಡಿದ್ದೇವೆ. ಯುಎಫ್ಓ, ಕ್ಯೂಬ್‌ಗ ಹಾಕಿರುವ ಸುಮಾರು 8 ಲಕ್ಷ ರೂ ಕೂಡ ಹಿಂದಿರುವುದಿಲ್ಲ. ಆಗಿರುವ ಗಳಿಕೆಯಲ್ಲಿ ಥಿಯೇಟರ್‌ಗೆ ಪರ್ಸಂಟೇಜ್‌ ಕೊಟ್ಟರೆ, ಉಳಿಯೋ ಹಣವೂ ಕೈಗೆ ಸಿಗೋದಿಲ್ಲ’ ಎಂದು ಬೇಸರದಿಂದಲೇ ಹೇಳಿಕೊಳ್ಳುತ್ತಾರೆ ನಿರ್ಮಾಪಕ ಕೃಷ್ಣಪ್ಪ.

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.