ಸೀತಾರಾಮನ ಕಲ್ಯಾಣಕ್ಕಾಗಿ ಬಣ್ಣ ಬಣ್ಣದ ಲೋಕ…
Team Udayavani, Apr 4, 2018, 2:04 PM IST
ನಿಖೀಲ್ ಕುಮಾರಸ್ವಾಮಿ ಅಭಿನಯದ “ಸೀತರಾಮ ಕಲ್ಯಾಣ’ ಚಿತ್ರಕ್ಕೆ ಇತ್ತೀಚೆಗೆ ಅದ್ಧೂರಿ ಹೊಡೆದಾಟದ ದೃಶ್ಯಗಳನ್ನು ಚಿತ್ರೀಕರಿಸಿದ್ದು ನಿಮಗೆ ಗೊತ್ತೇ ಇದೆ. ಈಗ ಚಿತ್ರಕ್ಕೆ ಸಖತ್ ವರ್ಣರಂಜಿತ ಸೆಟ್ ಹಾಕಲಾಗಿದೆ. ಕಂಠೀರವ ಸ್ಟುಡಿಯೋದೊಳಗೆ ಹೋದರೆ ಯಾವುದೋ ಹೊಸ ಬಡಾವಣೆ ತಲೆ ಎತ್ತಿದ್ದಂತೆ ಭಾಸವಾಗುವುದರಲ್ಲಿ ಅನುಮಾನವಿಲ್ಲ. ಆ ಮಟ್ಟಕ್ಕೆ “ಸೀತಾರಾಮ ಕಲ್ಯಾಣ’ ಚಿತ್ರಕ್ಕೆ ಅದ್ಧೂರಿಯಾಗಿರುವ ಸೆಟ್ ಹಾಕಲಾಗಿದೆ. ಇದು ಕಾಲೇಜ್ ಹಾಸ್ಟೆಲ್ ವೊಂದರ ಸೆಟ್ ಹಾಕಿದ್ದು, ಇಲ್ಲಿ ಸಾಕಷ್ಟು ಸನ್ನಿವೇಶಗಳನ್ನು ಚಿತ್ರೀಕರಿಸಲಾಗುತ್ತದೆ.
ಕಾಲೇಜು ಹುಡುಗನ ತರೆಲ, ತುಂಟಾಟ ಸೇರಿದಂತೆ ಹಲವು ಅಂಶಗಳು ಈ ಸೆಟ್ನಲ್ಲಿ ನಡೆಯಲಿದೆ. ಸುಮಾರು 15ಕ್ಕೂ ಹೆಚ್ಚು ದಿನಗಳ ಕಾಲ ಸೆಟ್ನಲ್ಲಿ ಚಿತ್ರೀಕರಣ ಮಾಡುವ ಉದ್ದೇಶ ಚಿತ್ರತಂಡಕ್ಕಿದೆ. ಚಿತ್ರವನ್ನು ಹರ್ಷ ನಿರ್ದೇಶನ ಮಾಡುತ್ತಿದ್ದು, ಕುಮಾರಸ್ವಾಮಿ ಬ್ಯಾನರ್ನಲ್ಲೇ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ರಚಿತಾ ರಾಮ್ ನಾಯಕಿ.