STARS ಎಫೆಕ್ಟ್


Team Udayavani, Jul 4, 2018, 11:50 AM IST

stars-effect.jpg

“ದಿ ವಿಲನ್‌’, “ಅಂಬಿ ನಿಂಗೆ ವಯಸ್ಸಾಯ್ತೋ’, “ಕುರುಕ್ಷೇತ್ರ’ ….. ನೀವು ಒಮ್ಮೆ ಆಗಸ್ಟ್‌ನತ್ತ ಕಣ್ಣು ನೆಟ್ಟರೆ ಈ ಮೂರು ಸಿನಿಮಾಗಳು ನಿಮ್ಮ ಕಣ್ಣ ಮುಂದೆ ಹಾದು ಹೋಗುತ್ತವೆ. ಅದಕ್ಕೆ ಕಾರಣ ಈ ಸಿನಿಮಾಗಳ ಬಿಡುಗಡೆ. ವರಮಹಾಲಕ್ಷ್ಮೀ ಹಬ್ಬದಂದು ಸಿನಿಮಾ ಬಿಡುಗಡೆ ಮಾಡಬೇಕೆಂದು “ದಿ ವಿಲನ್‌’ ತಂಡ ಇನ್ನಿಲ್ಲದಂತೆ ಕೆಲಸ ಮಾಡುತ್ತಿದೆ. ನಿರ್ದೇಶಕ ಪ್ರೇಮ್‌ ಚೆನ್ನೈ-ಬೆಂಗಳೂರು ಮಧ್ಯೆ ಓಡಾಡುತ್ತಾ “ವಿಲನ್‌’ಗೆ ಅಂತಿಮ ರೂಪ ಕೊಡುತ್ತಿದ್ದಾರೆ.

ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿರುವ ಸಿನಿಮಾ ವಿಲನ್‌. ಇತ್ತ ಕಡೆ ಅಂಬರೀಶ್‌ ಹಾಗೂ ಸುದೀಪ್‌ ಅವರ “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರ ಕೂಡಾ ಆಗಸ್ಟ್‌ನಲ್ಲಿ ಬರುವುದಾಗಿ ಹೇಳಿಕೊಂಡಿದೆ. ಇನ್ನು, ಕನ್ನಡ ಚಿತ್ರರಂಗದ ಅದ್ಧೂರಿ ಹಾಗೂ ಬಹುತಾರಾಗಣದ “ಕುರುಕ್ಷೇತ್ರ’ ಚಿತ್ರ ಕೂಡಾ ಆಗಸ್ಟ್‌ ಅಥವಾ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ.

ಇದಲ್ಲದೇ, ಇನ್ನೂ ಒಂದಷ್ಟು ನಿರೀಕ್ಷಿತ ಚಿತ್ರಗಳು ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ ಬರಲು ಪ್ಲ್ರಾನ್‌ ಮಾಡಿಕೊಂಡಿವೆ. ಒಂದರ್ಥದಲ್ಲಿ ಅದು ಸಿನಿಹಬ್ಬ ಎಂದರೆ ತಪ್ಪಲ್ಲ. ಆರು ತಿಂಗಳು ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ಗಳ ಸಿನಿಮಾಗಳು ಬಿಡುಗಡೆಯಾಗಿದ್ದು ಕಡಿಮೆ. ಆದರೆ, ಮುಂದಿನ ಆರು ತಿಂಗಳು ಸ್ಟಾರ್‌ಗಳು ಫೀಲ್ಡ್‌ಗೆ ಇಳಿಯುತ್ತಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳ ಎಫೆಕ್ಟ್ ಈಗಿನಿಂದಲೇ ಶುರುವಾಗಿದೆ.

ಅದು ಹೊಸಬರ ಮೇಲೆ. ಕಳೆದ ವಾರದಿಂದಲೇ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಬಿಡುಗಡೆಯ ಆ ಭರಾಟೆ ಈ ವಾರವೂ ಮುಂದುವರೆದಿದ್ದು, ಆಗಸ್ಟ್‌ ಎರಡನೇ ವಾರದವರೆಗೆ ಮುಂದುವರೆಯುವ ಸಾಧ್ಯತೆ ಇದೆ. ಸ್ಟಾರ್‌ಗಳ ಸಿನಿಮಾ ಬಿಡುಗಡೆಯಾದರೆ ಮುಂದೆ ಥಿಯೇಟರ್‌ ಸಿಗೋದಿಲ್ಲ ಎಂಬುದು ಒಂದು ಸಮಸ್ಯೆಯಾದರೆ, ಸ್ಟಾರ್‌ಗಳ ಅಬ್ಬರದ ಮಧ್ಯೆ ಕಳೆದು ಹೋಗುತ್ತೇವೆ ಎಂಬ ಭಯ ಮತ್ತೂಂದು ಕಡೆ.

ಈ ಕಾರಣದಿಂದಲೇ ಸಾಲು ಸಾಲು ಹೊಸಬರ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ವಾರ ವಾರ ಕಲರ್‌ಫ‌ುಲ್‌: ನೀವು ಕಳೆದ ವಾರದಿಂದಲೇ ಸಿನಿಮಾ ಬಿಡುಗಡೆಯ ಭರಾಟೆಯನ್ನು ತೆಗೆದುಕೊಂಡರೆ ಕಳೆದ ವಾರ ನಾಲ್ಕು ಸಿನಿಮಾಗಳು ಬಿಡುಗಡೆಯಾಗಿದ್ದವು. ಆದರೆ ಈ ವಾರ ಅದರ ಸಂಖ್ಯೆ ಹೆಚ್ಚಿದೆ. ಬರೋಬ್ಬರಿ 9 ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ.

“6ನೇ ಮೈಲಿ’, “ಕನ್ನಡಕ್ಕಾಗಿ ಒಂದನ್ನು ಒತ್ತಿ’, “ಕುಚ್ಚಿಕು ಕುಚ್ಚಿಕು’, “ಪರಸಂಗ’, “ಧಾಂಗಡಿ’, “ಅಸತೋಮ ಸದ್ಗಮಯ’, “ಹಸಿರು ರಿಬ್ಬನ್‌’, “ವಜ್ರ’, “ಕ್ರಾಂತಿವೀರ ಮಹಾಯೋಗ’ ಚಿತ್ರಗಳು ಈ ವಾರ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಇದು ಈ ವಾರದ ಕಥೆಯಾದರೆ, ಜುಲೈ ಹಾಗೂ ಆಗಸ್ಟ್‌ ಎರಡನೇ ವಾರದವರೆಗೆ ಬಿಡುಗಡೆಯ ಭರಾಟೆ ಜೋರಾಗಿದೆ. “ಕರಾಳ ರಾತ್ರಿ’, “ಡಬಲ್‌ ಇಂಜಿನ್‌’, “ಟ್ರಂಕ್‌’, “ಅಥರ್ವ’ ಚಿತ್ರಗಳು ಮುಂದಿನ ವಾರ ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ.

ಇದರಲ್ಲದೇ ಜುಲೈನಲ್ಲಿ “ವಾಸು ಪಕ್ಕಾ ಕಮರ್ಷಿಯಲ್‌’, “ಸಂಕಷ್ಟಹರ ಗಣಪತಿ’, “ನವೋದರ ಡೇಸ್‌’, “ಮೊಗ್ಯಾಂಬೋ’, “ಆದಿ ಪುರಾಣ’, “ಲವ್‌ ಯೂ 2′, “ಕುಮಾರಿ 21 ಎಫ್’, “ಮಟಾಶ್‌’,”ಕರ್ಷಣಂ’, “ಗೋಸಿ ಗ್ಯಾಂಗ್‌’, “ಅಂತ್ಯವಲ್ಲ ಆರಂಭ’, “ಮೂರ್ಕಲ್‌ ಎಸ್ಟೇಟ್‌’  ಹೀಗೆ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈ ಎಲ್ಲಾ ಸಿನಿಮಾಗಳು ಆಗಸ್ಟ್‌ ಕೊನೆ ವಾರದ ಒಳಗೆ ಬಿಡುಗಡೆಯಾಗಲಿದೆ. 

ಸ್ಟಾರ್‌ ಧಮಕಾ: ಮೊದಲೇ ಹೇಳಿದಂತೆ ಈ ಬಿಡುಗಡೆಯ ಭರಾಟೆಗೆ ಕಾರಣ ಸ್ಟಾರ್‌ ಸಿನಿಮಾಗಳು. ವರಮಹಾಲಕ್ಷ್ಮೀ ಹಬ್ಬದಿಂದ ಸ್ಟಾರ್‌ಗಳ ಸಿನಿಮಾಗಳ ಬಿಡುಗಡೆ ಆರಂಭವಾಗಲಿದೆ. ಸಹಜವಾಗಿಯೇ ಸ್ಟಾರ್‌ ಸಿನಿಮಾ ಎಂದಾಗ ನಿರೀಕ್ಷೆ ಹೆಚ್ಚಿರುತ್ತದೆ. ಜೊತೆಗೆ ಆರು ತಿಂಗಳಿನಿಂದ ಹೆಚ್ಚೇನು ಸ್ಟಾರ್‌ಗಳ ಸಿನಿಮಾಗಳು ಕೂಡಾ ಬಿಡುಗಡೆಯಾಗಿಲ್ಲ.

ಈ ಕಾರಣದಿಂದ ಸ್ಟಾರ್‌ಗಳ ಹವಾ ಜೋರಾಗಿರುತ್ತದೆ. ಈ ಹವಾದ ಮುಂದೆ ಹೊಸಬರು ಬಂದರೆ ಕಳೆದು ಹೋಗೋದು ಗ್ಯಾರಂಟಿ. ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾದರೂ ಅದು ಸ್ಟಾರ್‌ಗಳ ಅಬ್ಬರದ ಮುಂದೆ ಜನರಿಗೆ ತಲುಪದೇ ಹೋಗಬಹುದು, ಜೊತೆಗೆ ಸ್ಟಾರ್‌ ಸಿನಿಮಾಗಳು 300ಕ್ಕೂ ಹೆಚ್ಚು ಚಿತ್ರಮಂದಿರಗಳನ್ನು ಆಕ್ರಮಿಸಿಕೊಂಡು ಮುಂದುವರೆಯುವುದರಿಂದ ಚಿತ್ರಮಂದಿರಗಳ ಕೊರತೆ ಕೂಡಾ ಕಾಡುತ್ತದೆ.

ಅವಸರಕ್ಕೆ ಬಿದ್ದು ಬಿಡುಗಡೆ ಮಾಡಿದರೆ ಒಂದು ವಾರಕ್ಕೆ ಚಿತ್ರಮಂದಿರದಿಂದ ಎತ್ತಂಗಡಿಯಾಗಬಹುದೆಂಬ ಭಯ ಕೂಡಾ ಹೊಸಬರನ್ನು ಕಾಡುತ್ತಿದೆ.  ಈ ಎಲ್ಲಾ ಕಾರಣದಿಂದ ಸ್ಟಾರ್‌ಗಳ ಹವಾ ಶುರುವಾಗುವ ಮುನ್ನವೇ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದಾರೆ. 

ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ: 6ನೇ ಮೈಲಿ, ಕನ್ನಡಕ್ಕಾಗಿ ಒಂದನ್ನು ಒತ್ತಿ, ಕುಚ್ಚಿಕು ಕುಚ್ಚಿಕು, ಪರಸಂಗ, ಧಾಂಗಡಿ, ಅಸತೋಮ ಸದ್ಗಮಯ, ಹಸಿರು ರಿಬ್ಬನ್‌, ವಜ್ರ, ಕರಾಳ ರಾತ್ರಿ, ಡಬಲ್‌ ಇಂಜಿನ್‌, ಟ್ರಂಕ್‌, ಅಥರ್ವ, ವಾಸು ಪಕ್ಕಾ ಕಮರ್ಷಿಯಲ್‌, ಸಂಕಷ್ಟಹರ ಗಣಪತಿ, ನವೋದರ ಡೇಸ್‌, ಮೊಗ್ಯಾಂಬೋ, ಆದಿ ಪುರಾಣ, ಲವ್‌ ಯೂ 2, ಕುಮಾರಿ 21 ಎಫ್, ಮಟಾಶ್‌, ಕರ್ಷಣಂ, ಗೋಸಿ ಗ್ಯಾಂಗ್‌, ಅಂತ್ಯವಲ್ಲ ಆರಂಭ, ಮೂರ್ಕಲ್‌ ಎಸ್ಟೇಟ್‌, ಲೈಫ್ ಜೊತೆಗೊಂದ್‌ ಸೆಲ್ಫಿ

ಟಾಪ್ ನ್ಯೂಸ್

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.