ಭಟ್ಟರ ಮತ್ತೊಂದು ರೊಮ್ಯಾಂಟಿಕ್ ಹಾಡು
Team Udayavani, Sep 18, 2018, 11:29 AM IST
ಯೋಗರಾಜ್ ಭಟ್ ನಿರ್ದೇಶನದ “ಪಂಚತಂತ್ರ’ ಚಿತ್ರ ಏನಾಯಿತು, ಯಾವ ಹಂತದಲ್ಲಿದೆ ಎಂದು ಸಿನಿಪ್ರೇಮಿಗಳು ಪ್ರಶ್ನಿಸುತ್ತಿರುವಾಗಲೇ ಭಟ್ರಾ, ಚಿತ್ರದ ಸ್ಟಿಲ್ ಬಿಟ್ಟಿದ್ದಾರೆ. ಅದು ಅಂತಿಂಥ ಸ್ಟಿಲ್ ಅಲ್ಲ, ಸಖತ್ ರೊಮ್ಯಾಂಟಿಕ್ ಸ್ಟಿಲ್. ಹೌದು, ಯೋಗರಾಜ್ ಭಟ್ ತಮ್ಮ “ಪಂಚತಂತ್ರ’ ಚಿತ್ರಕ್ಕಾಗಿ ರೊಮ್ಯಾಂಟಿಕ್ ಹಾಡೊಂದನ್ನು ಚಿತ್ರೀಕರಿಸಿದ್ದಾರೆ.
ನಾಯಕ ವಿಹಾನ್ ಹಾಗೂ ನಾಯಕಿ ಸೋನಾಲ್ ಮೊಂತೆರೋ ಈ ಹಾಡಿನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. “ಶೃಂಗಾರದ ಹೊಂಗೆಮರ ಹೂಬಿಟ್ಟಿದೆ, ನಾಚಿಕೆ ನಮ್ಮ ಜೊತೆ ಠೂ ಬಿಟ್ಟಿದೆ, ಕಳ್ಳಾಟಕೆ ಮಳ್ಳಾ ಮನ ಛೀ ಎಂದಿದೆ, ಚೆಲ್ಲಾಟಕೆ ಚೆಲುವು ಹೂ ಎಂದಿದೆ …’ ಎಂದು ಆರಂಭವಾಗುವ ಈ ಹಾಡನ್ನು ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಿದ್ದಾರೆ.
ಮಿನರ್ವ ಮಿಲ್ನಲ್ಲಿ ಹಾಕಲಾದ ಕಲರ್ಫುಲ್ ಸೆಟ್ನಲ್ಲಿ ಎರಡು ದಿನಗಳ ಕಾಲ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಈ ಹಾಡಿಗೂ ಮುಂಚೆ ನಾಯಕ-ನಾಯಕಿ ರಿಹರ್ಸಲ್ ಮಾಡುವ ಮೂಲಕ ಹಾಡಿಗೆ ಸಿದ್ಧರಾಗಿದ್ದಾರೆ. ಹಾಗಾಗಿ, ಚಿತ್ರೀಕರಣದ ವೇಳೆ ಸುಲಭವಾಗಿ ಚಿತ್ರೀಕರಿಸಲಾಯಿತಂತೆ.
ಅಂದಹಾಗೆ, ಇದೊಂದು ಯೂಥ್ಫುಲ್ ಕಥೆಯಾಗಿದ್ದು, ಹಾಸ್ಯದೊಂದಿಗೆ ನವಿರಾದ ಪ್ರೇಮಕಥೆ ಇದೆ. ಸಾಕಷ್ಟು ನೈಜತೆಗೆ ಹತ್ತಿರವಾಗಿರುವ ಅಂಶಗಳು ಚಿತ್ರದ ಮತ್ತೊಂದು ಹೈಲೈಟ್. ಮುಖ್ಯವಾಗಿ ಯುವಪೀಳಿಗೆಯನ್ನು ಮನಸ್ಸಲಿಟ್ಟುಕೊಂಡೇ ಭಟ್ಟರು ಕಥೆ ಹೆಣೆದಿದ್ದಾರೆ. ಈಗಿನ ವಾಸ್ತವತೆಯ ಸಾರ ಚಿತ್ರದುದ್ದಕ್ಕೂ ಕಾಣಸಿಗಲಿದೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?