ಸೂರಿ “ಪಾಪ್ಕಾರ್ನ್’ನಿಂದ ನಿರ್ಮಾಪಕ ಶ್ರೀಕಾಂತ್ ಔಟ್
Team Udayavani, Feb 18, 2019, 5:26 AM IST
ಶಿವರಾಜಕುಮಾರ್ ಅಭಿನಯದ “ಟಗರು’ ಯಶಸ್ಸಿನ ನಂತರ ನಿರ್ದೇಶಕ ಸೂರಿ “ಪಾಪ್ಕಾನ್ ಮಂಕಿ ಟೈಗರ್’ ಚಿತ್ರಕ್ಕೆ ಅಣಿಯಾಗಿದ್ದು ಎಲ್ಲರಿಗೂ ಗೊತ್ತು. ಆ ಚಿತ್ರದ ಚಿತ್ರೀಕರಣ ಕೂಡ ಜೋರಾಗಿಯೇ ನಡೆಯುತ್ತಿದೆ ಎಂಬುದು ಸಹ ಗೊತ್ತಿದೆ. ಅಂದಹಾಗೆ, “ಟಗರು’ ಚಿತ್ರವನ್ನು ನಿರ್ಮಿಸಿದ್ದ ಕೆ.ಪಿ.ಶ್ರೀಕಾಂತ್ ಅವರೇ ಸೂರಿ ಜೊತೆಗೆ “ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ.
ಆದರೆ, ಈಗ ಹೊಸ ಸುದ್ದಿಯೆಂದರೆ, “ಪಾಪ್ಕಾರ್ನ್ ಮಂಕಿ ಟೈಗರ್’ ಚಿತ್ರದಿಂದ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಹೊರಬಂದಿದ್ದಾರೆ. ಹಾಗಂತ, ಸೂರಿ ಜೊತೆಗೆ ಕೆ.ಪಿ.ಶ್ರೀಕಾಂತ್ ಅವರು ಮುನಿಸಿಕೊಂಡು ಹೊರಬಂದಿದ್ದಾರೆ ಎಂದು ನೀವಂದುಕೊಳ್ಳುವಂತಿಲ್ಲ. ಯಾವುದೇ ಮುನಿಸು ಇಲ್ಲದೆ, ಕೆ.ಪಿ.ಶ್ರೀಕಾಂತ್ ಅವರು “ಪಾಪ್ಕಾರ್ನ್ ಮಂಕಿ ಟೈಗರ್’ ಚಿತ್ರ ನಿರ್ಮಾಣದಿಂದ ಹೊರಬಂದಿದ್ದಾರೆ. ಈ ಬಗ್ಗೆ ಸ್ವತಃ, ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಅವರೇ ಸ್ಪಷ್ಟಡಿಸುವುದು ಹೀಗೆ.
“ಆರಂಭದಲ್ಲಿ ಸೂರಿ ಅವರ ನಿರ್ದೇಶನದ “ಪಾಪ್ಕಾರ್ನ್ ಮಂಕಿ ಟೈಗರ್’ ಚಿತ್ರವನ್ನು ನಾನು ನಿರ್ಮಾಣ ಮಾಡುತ್ತಿದ್ದದ್ದು ನಿಜ. ಕಾರಣಾಂತರಗಳಿಂದ ಈಗ ನಾನು ಹೊರಬಂದಿದ್ದೇನೆ. ಆದರೆ, ಹೊರಬಂದಿದ್ದಕ್ಕೆ ಯಾವುದೇ ಮುನಿಸು ಇಲ್ಲ. ಮುಂದಿನ ದಿನಗಳಲ್ಲಿ ನಿರ್ದೇಶಕ “ದುನಿಯಾ’ ಸೂರಿ ಅವರೊಂದಿಗೆ ನಾನು ದೊಡ್ಡ ಪ್ರಾಜೆಕ್ಟ್ ಮಾಡುತ್ತಿದ್ದೇನೆ. ಆ ಬಗ್ಗೆ ತಯಾರಿಯೂ ನಡೆಯುತ್ತಿದೆ’ ಎಂದಷ್ಟೇ ಹೇಳುತ್ತಾರೆ ಕೆ.ಪಿ.ಶ್ರೀಕಾಂತ್.
“ಟಗರು’ ಚಿತ್ರದ ಬೆನ್ನಲ್ಲೇ “ಟಗರು-2′ ಚಿತ್ರಕ್ಕೆ ಚಿತ್ರತಂಡ ಸದ್ದಿಲ್ಲದೇ ಮುಹೂರ್ತ ಮಾಡಿತ್ತು. “ಟಗರು’ ಮುಂದುವರಿದ ಮಾಡುವುದಾಗಿಯೂ ಹೇಳಿತ್ತು. ಹಾಗಾದರೆ, ಸೂರಿ ಹಾಗೂ ಶ್ರೀಕಾಂತ್ “ಟಗರು-2′ ಮಾಡುತ್ತಾರಾ ಎಂಬ ಪ್ರಶ್ನೆ ಈಗ ಎದ್ದಿದೆ. ಕಳೆದ ವರ್ಷ ದೊಡ್ಡ ಮಟ್ಟದಲ್ಲಿ ಹಿಟ್ ಆದ “ಟಗರು’ ಚಿತ್ರದ ಮುಂದುವರಿದ ಭಾಗ ಅಭಿಮಾನಿಗಳಿಗೆ ಖುಷಿಕೊಡಬಹುದೆಂಬ ಕಾರಣಕ್ಕೆ ಆ ಚಿತ್ರದ ತಯಾರಿಯೂ ನಡೆಯುತ್ತಿದೆ ಎನ್ನಲಾಗಿದೆ.
ಅಂದಹಾಗೆ, ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಯುವ ಹಂತ ತಲುಪಿರುವ “ಪಾಪ್ಕಾರ್ನ್ ಮಂಕಿ ಟೈಗರ್’ ಚಿತ್ರವನ್ನು ಸುಧೀರ್ ಎನ್ನುವವರು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಸೂರಿ ಈ ಚಿತ್ರ ಕೈಗೆತ್ತಿಕೊಳ್ಳಲು ಕಾರಣ, ಅವರು ಕುಸಿದು ಹೋಗುತ್ತಿರುವ ಸಂಬಂಧಗಳ ಮೌಲ್ಯ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದಾಗ ಈ ಕಥೆ ಹುಟ್ಟುಕೊಂಡಿತಂತೆ. ಹಾಗಾದರೆ, ಈ ಚಿತ್ರದಲ್ಲೂ ಸೂರಿ ಅವರು ಮಾಫಿಯಾ ಶೇಡ್ ಇಟ್ಟಿರುತ್ತಾರಾ? ಎಂಬ ಪ್ರಶ್ನೆಗೆ ಚಿತ್ರ ಬರುವವರೆಗೆ ಕಾಯಲೇಬೇಕು. ಈ ಚಿತ್ರದಲ್ಲಿ ಧನಂಜಯ್, ನಿವೇದಿತಾ, ಅಮೃತಾ ಸೇರಿದಂತೆ ಹಲವು ನಟರು ಅಭಿನಯಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ