ಕದ್ದುಮುಚ್ಚಿ: ಮನಸಿಗೆ ಹತ್ತಿರಾಗೋ ಕಥೆಗೆ ಮಲೆನಾಡ ನಂಟು!
Team Udayavani, Feb 21, 2019, 4:56 AM IST
ವಸಂತ್ ರಾಜಾ ನಿರ್ದೇಶನದ ಕದ್ದುಮುಚ್ಚಿ ಚಿತ್ರ ಟ್ರೈಲರ್, ಹಾಡುಗಳ ಮೂಲಕ ಬರ್ಜರಿಯಾಗಿಯೇ ಸದ್ದು ಮಾಡುತ್ತಿದೆ. ಇನ್ನ ಏನು ತೆರೆಗಾಣಲಿರುವ ಈ ಸಿನಿಮಾ ಬಗ್ಗೆ ಒಂದರ ಹಿಂದೊಂದರಂತೆ ಆಸಕ್ತಿಕರವಾದ ಸುದ್ದಿಗಳೇ ಹೊರ ಬೀಳುತ್ತಿವೆ.
ಕದ್ದುಮುಚ್ಚಿ ಎಲ್ಲರ ಮನಸಿಗೂ ಹತ್ತಿರಾಗೋ ಕಥಾ ಹಂದರ ಹೊಂದಿರೋ ಚಿತ್ರ ಅನ್ನೋದು ಈಗಾಗಲೇ ಗೊತ್ತಾಗಿದೆ. ಟ್ರೈಲರಿನಲ್ಲಿಯೇ ಅಂಥಾ ಸ್ಪಷ್ಟ ಸೂಚನೆಯೂ ಸಿಕ್ಕಿದೆ. ವಿಶೇಷ ಅಂದರೆ ಪ್ರೇಕ್ಷಕರ ಕಣ್ಣುಗಳ ಸದಾ ಅರಸೋ ಮಲೆನಾಡಿನ ಸೌಂದರ್ಯವೂ ಕೂಡಾ ಈ ಸಿನಿಮಾದಲ್ಲಿ ಯಥೇಚ್ಚವಾಗಿಯೇ ತುಂಬಿಕೊಂಡಿದೆ.
ಈ ಚಿತ್ರದ ನಾಯಕ ಸ್ಥಿತಿವಂತ ಮನೆತನದ ಹುಡುಗ. ಆದರೆ ದುಡ್ಡು ಕಾಸು ದಂಡಿ ದಂಡಿ ಇದ್ದರೂ ಪ್ರೀತಿಗೆ ಮಾತ್ರವೇ ಬರಗಾಲ. ಕಡೆಗೂ ಆತ ಪ್ರೀತಿಯನ್ನು ಮಾತ್ರ ಅರಸುತ್ತಾ ಹೊರಡೋದು ಮಲೆನಾಡಿನ ದಿಕ್ಕಿಗೆ. ಹಾಗೆ ಹೋಗೋ ನಾಯಕನಿಗೆ ಮಿಂಚುಳ್ಳಿಯಂಥಾ ನಾಯಕಿ ಎದುರಾಗ್ತಾಳೆ. ಆ ನಂತರದ ಮಜವಾದ ವಿಚಾರಗಳೆಲ್ಲವೂ ಮಲೆನಾಡ ಸೌಂದರ್ಯದ ಜೊತೆಗೇ ಅನಾವರಣಗೊಳ್ಳುತ್ತವೆ. ಅದು ಪ್ರೇಕ್ಷಕರೆದುರು ಜಾಹೀರಾಗೋ ಕ್ಷಣಗಳೂ ಸಮೀಪಿಸುತ್ತಿವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?