ಮಳೆಗೆ ಹದಿನೈದು ಮರಗಳು ಧರೆಗೆ
Team Udayavani, Apr 21, 2017, 11:34 AM IST
ಬೆಂಗಳೂರು: ನಗರದ ಕೆಲವು ಪ್ರದೇಶಗಳಲ್ಲಿ ಗುರುವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಹದಿನೈದಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು ಕೆಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನಗರದ ಮೆಜೆಸ್ಟಿಕ್, ರೇಸ್ಕೋರ್ಸ್ ರಸ್ತೆ, ಬಸವೇಶ್ವರನಗರ, ಕೆಂಗೇರಿ ಸೇರಿದಂತೆ ವಿವಿಧೆಡೆ ಗಾಳಿಸಹಿತ ಮಳೆಯಾಗಿದ್ದು, ಆರು ಮರಗಳು ಮತ್ತು 12 ಮರದ ಕೊಂಬೆಗಳು ಮುರಿದುಬಿದ್ದವು. ಇದರಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿ ವಾಹನಸವಾರರು ಪರದಾಡುವಂತಾಯಿತು.
ಸಂಜೆ 3.30ರಿಂದ 6.30 ಅವಧಿಯಲ್ಲಿ ಮಳೆ ಸುರಿದ ಕಾರಣ ಕೆಲಸ ಮುಗಿಸಿ ಮನೆಗಳತ್ತ ಹೊರಟಿದ್ದವರು ಮಳೆಯಲ್ಲಿ ಸಿಲುಕಿಕೊಂಡರು. ಬೈಕ್ ಸವಾರರು ಮಳೆಯಲ್ಲಿ ತೊಯ್ದುತೊಪ್ಪೆಯಾದರು. ಮರ ಮತ್ತು ಮರದ ರೆಂಬೆಗಳು ಬಿದ್ದ ಕಡೆಗಳಲ್ಲಿ ವಾಹನಗಳು ಪರ್ಯಾಯ ಮಾರ್ಗಗಳತ್ತ ಮುಖಮಾಡಿದ್ದರಿಂದ ವಾಹನದಟ್ಟಣೆ ಎಂದಿಗಿಂತ ತುಸು ಹೆಚ್ಚಿತ್ತು. ಬಸ್ಗಳ ಕಾರ್ಯಾಚರಣೆಯಲ್ಲೂ ವಿಳಂಬವಾಯಿತು. ಇದರಿಂದ ಪ್ರಯಾಣಿಕರಿಗೂ ಇದರ ಬಿಸಿತಟ್ಟಿತು.
ಕೊಟ್ಟಿಗೆಪಾಳ್ಯ, ಆರ್.ಆರ್. ನಗರದ ಎಚ್ಎಂಟಿ ವಾರ್ಡ್, ಹಂಪಿನಗರ, ಕೊಡಿಗೇಹಳ್ಳಿ, ಮೆಜೆಸ್ಟಿಕ್ ಮತ್ತಿತರ ಕಡೆಗಳಲ್ಲಿ 13ರಿಂದ 18 ಮೀ.ಮೀ. ಮಳೆ ದಾಖಲಾಗಿದೆ. ಬಸವೇಶ್ವರನಗರದ 4 ಮತ್ತು ವಿಜಯನಗರ 3 ಕಡೆ ಸೇರಿದಂತೆ ಬಿಎನ್ಎಸ್ ಕಾಲೇಜು, ಎನ್.ಆರ್. ಕಾಲೊನಿ, ಬಸವನಗುಡಿ, ಸುಂಕದಕಟ್ಟೆ ಪೈಪ್ಲೈನ್, ನಾಗರಬಾವಿ, ರಾಜಕುಮಾರ್ ಸಮಾಧಿ ಬಳಿ, ಎಂ.ಸಿ. ಲೇಔಟ್, ಎಚ್ಎಎಲ್ ಮೂರನೇ ಹಂತ, ಶ್ರೀನಗರ, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ ಬಳಿ ಮರ ಮತ್ತು ಮರದ ಕೊಂಬೆಗಳು ಬಿದ್ದ ಬಗ್ಗೆ ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ