ಟ್ರಾಫಿಕ್ಗೆ ಬ್ರೇಕ್ ಹಾಕಲು ಐದು ಕಡೆ ಗ್ರೇಡ್ ಸಪರೇಟರ್
Team Udayavani, Jan 21, 2018, 11:43 AM IST
ಬೆಂಗಳೂರು: ರಾಜಧಾನಿಯ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಗರದ ಐದು ಪ್ರಮುಖ ಜಂಕ್ಷನ್ಗಳಲ್ಲಿ, 165 ಕೋಟಿ ರೂ. ವೆಚ್ಚದಲ್ಲಿ ಗ್ರೇಡ್ ಸೆಪರೇಟರ್ ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ.
ತೀವ್ರ ಸಂಚಾರ ದಟ್ಟಣೆಗೆ ಹೆಸರಾಗಿರುವ 12 ಜಂಕ್ಷನ್ಗಳಲ್ಲಿ ಗ್ರೇಡ್ ಸೆಪರೇಟರ್ ನಿರ್ಮಿಸಲು ಅನುದಾನ ನೀಡುವುದಾಗಿ ರಾಜ್ಯ ಸರ್ಕಾರ ಬಜೆಟ್ನಲ್ಲಿ ಘೋಷಿಸಿದೆ. ಅದರಂತೆ ಪಾಲಿಕೆ ಅಧಿಕಾರಿಗಳು ಮೊದಲ ಹಂತದಲ್ಲಿ ಐದು ಜಂಕ್ಷನ್ಗಳನ್ನು ಆಯ್ಕೆ ಮಾಡಿದ್ದು, ಯಲಹಂಕ ವಲಯದಲ್ಲಿ ಮೂರು ಹಾಗೂ ಬೊಮ್ಮನಹಳ್ಳಿ, ಮಹದೇವಪುರದಲ್ಲಿ ತಲಾ ಒಂದು ಗ್ರೇಡ್ ಸೆಪರೇಟರ್ ನಿರ್ಮಾಣವಾಗಲಿದೆ.
ಥಣಿಸಂದ್ರ ಮುಖ್ಯರಸ್ತೆಯ ರಾಷ್ಟ್ರೋತ್ಥಾನ ಸಿಗ್ನಲ್, ಯಲಹಂಕದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆಯ ಅರೋಮ ಬೇಕರಿ ವೃತ್ತ, ಸರ್ಜಾಪುರ-ಹರಳೂರು ಜಂಕ್ಷನ್ಗಳಲ್ಲಿ ಈಗಾಗಲೇ ಕಾಮಗಾರಿ ಆರಂಭವಾಗಿದೆ ಎಂದು ಪಾಲಿಕೆಯ ರಸ್ತೆ ಮೂಲ ಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಸೋಮಶೇಖರ್ ಮಾಹಿತಿ ನೀಡಿದ್ದಾರೆ.
ಜಂಕ್ಷನ್: ಸುರಂಜನ್ದಾಸ್ ಜಂಕ್ಷನ್ – ಎನ್ಜಿಇಎಫ್ ರಸ್ತೆ ಜಂಕ್ಷನ್
ಗುತ್ತಿಗೆದಾರರು: ಪಿಜೆಪಿ ಎಂಜಿನಿಯರ್ ಪ್ರೈ. ಲಿ.
ಯೋಜನಾ ವೆಚ್ಚ: 52.65 ಕೋಟಿ ರೂ.
ಕಾಮಗಾರಿ ಅವಧಿ: 18 ತಿಂಗಳು
ಒಟ್ಟು ಉದ್ದ: 460 ಮೀ.
ಪಥಗಳು: 6
ಯಾರಿಗೆ ಅನುಕೂಲ: ಕೆ.ಆರ್.ಪುರ, ಹಲಸೂರು, ಎಚ್ಎಎಲ್ ಕಡೆಗೆ ಹೋಗುವವರು ದಟ್ಟಣೆ ಮುಕ್ತವಾಗಿ ಸಂಚರಿಸಬಹುದು
ಜಂಕ್ಷನ್: ಸರ್ಜಾಪುರ – ಹರಳೂರು ಜಂಕ್ಷನ್
ಗುತ್ತಿಗೆದಾರರು: ಪಿಜೆಪಿ ಎಂಜಿನಿಯರ್ ಪ್ರೈ. ಲಿ.
ಯೋಜನಾ ವೆಚ್ಚ: 23.08ಕೋಟಿ ರೂ.
ಕಾಮಗಾರಿ ಅವಧಿ: 18 ತಿಂಗಳು
ಒಟ್ಟು ಉದ್ದ: 410 ಮೀ.
ಪಥಗಳು: 4
ಯಾರಿಗೆ ಅನುಕೂಲ: ಹರಳೂರು, ಬೆಳ್ಳಂದೂರು, ಸರ್ಜಾಪುರ, ಬೊಮ್ಮನಹಳ್ಳಿ ಕಡೆ ಹೋಗುವವರಿಗೆ
ಜಂಕ್ಷನ್: ಗಂಗಮ್ಮ ಸರ್ಕಲ್
ಗುತ್ತಿಗೆದಾರರು: ಪಿಜೆಪಿ ಎಂಜಿನಿಯರ್ ಪ್ರೈ. ಲಿ.
ಯೋಜನಾ ವೆಚ್ಚ: 22.64 ಕೋಟಿ ರೂ.
ಕಾಮಗಾರಿ ಅವಧಿ: 12 ತಿಂಗಳು
ಒಟ್ಟು ಉದ್ದ: 375 ಮೀ.
ಪಥಗಳು: 2
ಯಾರಿಗೆ ಅನುಕೂಲ: ಮತ್ತಿಕೆರೆ, ಜಾಲಹಳ್ಳಿ ಪೂರ್ವ, ಜಾಲಹಳ್ಳಿ 2ನೇ ಹಂತ, ದೊಡ್ಡಬೊಮ್ಮಸಂದ್ರದ ಕಡೆ ಹೋಗುವವರಿಗೆ
ಜಂಕ್ಷನ್: ಮೇಜರ್ ಸಂದೀಪ್ ಉನ್ನೀಕೃಷ್ಣನ್ ರಸ್ತೆಯ ಅರೋಮ ಬೇಕರಿ ವೃತ್ತ
ಗುತ್ತಿಗೆದಾರರು: ಪಿಜೆಪಿ ಎಂಜಿನಿಯರ್ ಪ್ರೈ. ಲಿ.
ಯೋಜನಾ ವೆಚ್ಚ: 34 ಕೋಟಿ ರೂ.
ಕಾಮಗಾರಿ ಅವಧಿ: 12 ತಿಂಗಳು
ಒಟ್ಟು ಉದ್ದ: 440 ಮೀ.
ಪಥಗಳು: 4
ಯಾರಿಗೆ ಅನುಕೂಲ: ದೊಡ್ಡಬಳ್ಳಾಪುರ ಮುಖ್ಯರಸ್ತೆ, ಅಲ್ಲಾಲಸಂದ್ರ, ಪುಟ್ಟೇನಹಳ್ಳಿ, ವಿದ್ಯಾರಣ್ಯಪುರ ಕಡೆ ದಟ್ಟಣೆ ಮುಕ್ತ ಸಂಚಾರ
ಜಂಕ್ಷನ್: ಥಣಿಸಂದ್ರ ಮುಖ್ಯರಸ್ತೆಯ ರಾಷ್ಟ್ರೋತ್ಥಾನ ಸಿಗ್ನಲ್
ಗುತ್ತಿಗೆದಾರರು: ಪಿಜೆಪಿ ಎಂಜಿನಿಯರ್ ಪ್ರೈ. ಲಿ.
ಯೋಜನಾ ವೆಚ್ಚ: 24.68 ಕೋಟಿ ರೂ.
ಕಾಮಗಾರಿ ಅವಧಿ: 12 ತಿಂಗಳು
ಒಟ್ಟು ಉದ್ದ: 390 ಮೀ.
ಪಥಗಳು: 4
ಯಾರಿಗೆ ಅನುಕೂಲ: ಬೆಳ್ಳಹಳ್ಳಿ, ಜಕ್ಕೂರು ಮುಖ್ಯರಸ್ತೆ, ನಾರಾಯಣಪುರ ಮುಖ್ಯರಸ್ತೆ, ಥಣಿಸಂದ್ರ ಮುಖ್ಯರಸ್ತೆಗಳಲ್ಲಿ ಸಂಚರಿಸುವವರಿಗೆ
* ವೆಂ. ಸುನೀಲ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು