ಹಿಂದು ಧರ್ಮವೂ ಅಲ್ಲ, ಸಂಸ್ಕೃತಿಯೂ ಅಲ್ಲ


Team Udayavani, Sep 12, 2018, 12:28 PM IST

hindu.jpg

ಬೆಂಗಳೂರು: ಧರ್ಮ ಅನ್ನುವುದು ನಂಬಿಕೆ. ಭಾರತ ಅನುಯಾಯಿಗಳದ್ದು ಅಲ್ಲ, ಅನ್ವೇಷಕರ ನೆಲ. ಹಾಗಾಗಿ ಇಲ್ಲಿ ಕೋಟ್ಯಂತರ ದೇವರನ್ನು ಆರಾಧಿಸಲಾಗುತ್ತದೆ ಎಂದು ಈಶ ಪ್ರತಿಷ್ಠಾನದ ಸದ್ಗುರು ಜಗ್ಗಿ ವಾಸುದೇವ ತಿಳಿಸಿದರು. ಈಶ ಪ್ರತಿಷ್ಠಾನದ “ಯೂತ್‌ ಆ್ಯಂಡ್‌ ಟ್ರಾತ್‌’ ಅಭಿಯಾನದ ಅಂಗವಾಗಿ ಪ್ರಸ್‌ ಕ್ಲಬ್‌ ಆಫ್ ಬೆಂಗಳೂರು ವತಿಯಿಂದ ಮಂಗಳವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು. 

ಧರ್ಮ ಮತ್ತು ನಂಬಿಕೆ ವಿಚಾರದಲ್ಲಿ ಮನುಷ್ಯ ಯಾವತ್ತೂ ಅನ್ವೇಷಕ ಆಗಿರಬೇಕು. ಆ ಅನ್ವೇಷಣೆ ಮೂಲಕ ಆತ ತನ್ನದೇ ಆದ ಸತ್ಯ ಕಂಡುಕೊಳ್ಳಬೇಕು. ಸತ್ಯದ ಅನ್ವೇಷಣೆಗಾಗಿಯೇ ಭಾರತದಲ್ಲಿ ಕೋಟ್ಯಂತರ ದೇವರನ್ನು ಆರಾಧಿಸಲಾಗುತ್ತದೆ. ನಂಬಿಕೆ ಸಂಘಟಿತ ರೂಪ ಪಡೆದುಕೊಂಡರೆ, ಧರ್ಮವಾಗಿ ಪರಿವರ್ತನೆಗೊಳ್ಳುತ್ತದೆ. ಇದು ಸಂಖ್ಯಾಬಲದ ಪ್ರತಿಷ್ಠೆಯ ಹಂತಕ್ಕೆ ಬಂದಾಗ ರಾಜಕೀಯ ದಾಳವಾಗುತ್ತದೆ ಎಂದರು. 

ಹಿಂದುತ್ವ ಅನ್ನುವುದು ಭಾರತೀಯ ವ್ಯಾಖ್ಯಾನ ಅಲ್ಲ, ಅದೊಂದು ವಿದೇಶಿ ಪರಿಭಾಷೆ. ಹಿಂದು ಪದ ಹುಟ್ಟಿಕೊಂಡಿದ್ದು ಹಿಮಾಲಯ ಪರ್ವತ ಹಾಗೂ ಹಿಂದೂ ಮಹಾಸಾಗರದಿಂದ. ಇವೆರೆಡರ ನಡುವಿನ ಭೂಪ್ರದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬನೂ ಹಿಂದು. ವಾಸ್ತವದಲ್ಲಿ ಹಿಂದು ಎಂಬುದು ಧರ್ಮವೂ ಅಲ್ಲ, ಸಂಸ್ಕೃತಿಯೂ ಅಲ್ಲ. ಅದೊಂದು ಭೌಗೋಳಿಕ ಗುರುತು ಅಷ್ಟೇ ಎಂದರು.

ಯುವಕರ ಪ್ರಶ್ನೆಗೆ ಉತ್ತರ: ಯುವಕರ ಪ್ರಶ್ನೆಗಳಿಗೆ ಇಂದು ಉತ್ತರ ಸಿಗುತ್ತಿಲ್ಲ. ಹಾಗಾಗಿ ಅವರಲ್ಲಿ ಹತಾಶೆ, ಆಕ್ರೋಶ ಮನೆ ಮಾಡಿದೆ. ಶೇ.52 ಯುವಜನರನ್ನು ಹೊಂದಿರುವ ದೇಶ ನಮ್ಮದು. ಇವರನ್ನು ದೇಶದ ಆಸ್ತಿಯನ್ನಾಗಿ ಪರಿವರ್ತಿಸಿದರೆ ಪವಾಡ ಸೃಷ್ಟಿಸಬಹುದು. ತಮ್ಮ ಪ್ರಶ್ನೆಗಳಿಗೆ ಧರ್ಮ, ರಾಜಕೀಯ ವ್ಯಕ್ತಿಗಳು, ಶಿಕ್ಷಕರು, ಧರ್ಮ ಗುರುಗಳು ಉತ್ತರ ಕೊಡುತ್ತಿಲ್ಲ ಎಂಬ ಭಾವನೆ ಯುವಕರಲ್ಲಿದೆ. ಇದನ್ನು ಹೊಗಲಾಡಿಸಲು ಅವರ ಚಿಂತನೆಗಳಲ್ಲಿ ಸ್ಪಷ್ಟತೆ ಹಾಗೂ ಸಮತೋಲನ ತರಲು ಅಭಿಯಾನ ಆರಂಭಿಸಲಾಗಿದೆ. ಇದರಲ್ಲಿ ಯುವಕರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲಾಗುವುದು ಎಂದರು.

“ಗುಂಪು ಥಳಿತ’ಕ್ಕೆ ಧರ್ಮ ಬೆರೆಸುವುದು ಸರಿಯಲ್ಲ: “ಗುಂಪು ಥಳಿತ’ ಪ್ರಕರಣಗಳಿಗೆ (ಲಿಂಚಿಂಗ್‌) ಧರ್ಮದ ಉನ್ಮಾದ ಕಾರಣ ಅನ್ನುವುದು ಸರಿಯಲ್ಲ. ಅಭದ್ರತೆ, ಆತಂಕ , ಆವಿಶ್ವಾಸ ಮತ್ತು ಹತಾಶೆ ಇದಕ್ಕೆ ಕಾರಣವಾಗಿದೆ. ಗೋವನ್ನುಧರ್ಮದ ಆಧಾರದಲ್ಲಿ ನೋಡುವುದಕ್ಕಿಂತ ಬದುಕು ಮತ್ತು ಆರ್ಥಿಕತೆಯ ದೃಷ್ಟಿಯಿಂದ ನೋಡಲಾಗುತ್ತದೆ. ಗೋವು ಕಳ್ಳರಿಂದ ತನ್ನ ಬದುಕು ಮತ್ತು ಆರ್ಥಿಕತೆ ಕಳೆದು ಹೋಗುತ್ತದೆ ಎಂಬ ಅಭದ್ರತೆ ಕಾಡುತ್ತದೆ.

ಒಂದು ಮಗು ಅಥವಾ ಗೋವು ಕಳೆದುಕೊಂಡವನು ಈಗಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ತ್ವರಿತ ನ್ಯಾಯ ಪಡೆದುಕೊಳ್ಳಲು ಸಾಧ್ಯವೇ?. ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಈ ಘಟನೆಗಳು ವಿಮರ್ಶಿಸಬೇಕಾಗಿದೆ. ಹಾಗಂತ ನಾನು ಲಿಂಚಿಂಗ್‌ ಸಮರ್ಥಿಸುವುದಿಲ್ಲ. ಇವುಗಳನ್ನು ತಡೆಗಟ್ಟಲು ನಮ್ಮಲ್ಲಿನ ಕಾನೂನು ವ್ಯವಸ್ಥೆ ದುರ್ಬಲ ಆಗಿರುವುದೂ ಸಹ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ ಎಂದು ಸದ್ಗುರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಸಲಿಂಗಕಾಮ ದೈಹಿಕ, ಸಾಮಾಜಿಕ ವಿದ್ಯಮಾನ: ದೇಶಕ್ಕೆ ಸಂವಿಧಾನವೇ ಗ್ರಂಥ. ಸಾರ್ವತ್ರಿಕ ಮತ್ತು ಸಾರ್ವಜನಿಕ ಬದುಕಿನಲ್ಲಿ ಈ ಗ್ರಂಥದ ಪ್ರಕಾರವೇ ನಡೆದುಕೊಳ್ಳಬೇಕು. ಧಾರ್ಮಿಕ ಗ್ರಂಥಗಳನ್ನು ತಮ್ಮ ವೈಯುಕ್ತಿಕ ಪಾಂಡಿತ್ಯ ಹೆಚ್ಚಿಸಿಕೊಳ್ಳಲು, ಆ ಮೂಲಕ ಜೀವನದಲ್ಲಿ ಅಧ್ಯಾತ್ಮಿಕತೆ ಪಡೆದುಕೊಳ್ಳಲು ಮನೆಗಳಲ್ಲೇ ಅಧ್ಯಯನ ಮಾಡಬೇಕು.

ತಾನು ಓದುವ ಧರ್ಮ ಗ್ರಂಥ ಇನ್ನೊಬ್ಬರೂ ಓದಬೇಕು ಅದರಂತೆ ನಡೆದುಕೊಳ್ಳಬೇಕು ಎಂದು ವಾದಿಸುವುದು ಸರಿಯಲ್ಲ. ಸಲಿಂಗಕಾಮ ದೈಹಿಕ ವಿದ್ಯಮಾನ ಹೌದು. ಆದರೆ, ಸಾಮಾಜಿಕ ವಿದ್ಯಮಾನ ಅನ್ನುವುದನ್ನೂ ಅಲ್ಲಗಳೆಯುವಂತಿಲ್ಲ. ಚುನಾವಣೆಗಳು 3 ತಿಂಗಳು ಇರುವರೆಗೆ ಯಾರೂ ಚುನಾವಣೆಗಳ ಬಗ್ಗೆ ಮಾತನಾಡದಂತಹ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸಂವಾದದಲ್ಲಿ ಸದ್ಗುರು ಪ್ರಶ್ನೆಗಳಿಗೆ ಉತ್ತರಿಸಿದರು. 

ತನ್ನ ಕುಟುಂಬಕ್ಕಿಂತ ತನ್ನ ರಾಜ್ಯದ ಜನರ ಕ್ಷೇಮ ಮತ್ತು ಕಲ್ಯಾಣ ಮುಖ್ಯ ಎಂದು ತಿಳಿದು ಅದಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ ರಾಜನೊಬ್ಬನ ಉದಾತ್ತ ಮಾದರಿಯನ್ನು ರಾಮನ ಬದುಕಿನಲ್ಲಿ ನಾವು ಕಾಣಬಹುದು. ದೇವರು ಎಂಬ ಕಾರಣಕ್ಕೆ ಅಲ್ಲ, ಮಾನವೀಯತೆಯನ್ನೂ ಮೀರಿದ ಗುಣಗಳಿಗಾಗಿ ರಾಮನನ್ನು ಆರಾಧಿಸಲಾಗುತ್ತದೆ. ಸ್ವಾರ್ಥ ಬಿಟ್ಟು ಜನರ ಕ್ಷೇಮ ಬಯಸುವ ರಾಜಕೀಯ ನಾಯಕರು ಇಂದು ನಮಗೆ ಬೇಕಾಗಿದ್ದಾರೆ.
-ಸದ್ಗುರು ಜಗ್ಗಿ ವಾಸುದೇವ

ಟಾಪ್ ನ್ಯೂಸ್

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.