ದೇವನಹಳ್ಳಿಯಲ್ಲಿ ಅಪಘಾತ ; ಗ್ಯಾಸ್ ಸಿಲಿಂಡರ್ಗಳಿದ್ದ ಲಾರಿಗೆ ಬೆಂಕಿ
Team Udayavani, Oct 24, 2018, 11:26 AM IST
ಬೆಂಗಳೂರು: ದೇವನಹಳ್ಳಿಯ ಕಟ್ಟುಗೊಲ್ಲನ ಹಳ್ಳಿ ಬಳಿ ಗ್ಯಾಸ್ ಸಿಲಿಂಡರ್ಗಳನ್ನು ಸಾಗಿಸುತ್ತಿದ್ದ ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು,ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಲಾರಿ ಹೊತ್ತಿ ಉರಿದಿದೆ.
ಅಪಘಾತದ ತೀವ್ರತೆಗೆ ಲಾರಿಯ ಡಿಸೇಲ್ ಟ್ಯಾಂಕ್ಗೆ ಬೆಂಕಿ ಹೊತ್ತಿಕೊಂಡಿದ್ದು , ಕ್ಷಣದಲ್ಲಿ ಸಿಲಿಂಡರ್ಗಳಿಗೂ ತಗುಲಿದೆ. ಕೆಲ ಸಿಲಿಂಡರ್ಗಳು ಸ್ಫೋಟಗೊಂಡಿರುವ ಬಗ್ಗೆ ವರದಿಯಾಗಿದೆ.
ಸ್ಥಳದಲ್ಲಿ 4 ಅಗ್ನಿ ಶಾಮಕ ದಳದ ವಾಹನಗಳು ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಆವಲಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.