ವ್ಯಂಗ್ಯ ಚಿತ್ರದಲ್ಲಿ ಅಡಗಿದೆ ಕುಶಲತೆ: ಇಂದ್ರಮ್ಮ
Team Udayavani, Dec 1, 2018, 4:58 PM IST
ಹೊಸಪೇಟೆ: ಕರ್ನಾಟಕ ಲಲಿತಕಲಾ ಅಕಾಡೆಮಿ ವತಿ ಯಿಂದ ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದಲ್ಲಿ ಶುಕ್ರ ವಾರ ಏರ್ಪಡಿಸಿದ್ದ ವ್ಯಂಗ್ಯಚಿತ್ರ ಕಾರ್ಯಾಗಾರಕ್ಕೆ ಇಂದ್ರಮ್ಮ ಎಚ್.ವಿ. ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಲಲಿತಕಲಾ ಅಕಾಡೆಮಿಯಿಂದ ಕಿನ್ನಾಳ ಕಲೆ, ಡಿಜಿಟಲ್ ಕಾರ್ಯಾಗಾರ, ಇದೀಗ ಕನ್ನಡ ವಿವಿಯಲ್ಲಿ ವ್ಯಂಗ್ಯಚಿತ್ರ ಕಾರ್ಯಾಗಾರ ಹಮ್ಮಿಕೊಂಡಿದ್ದು, ಇದರ ಲಾಭ ಪಡೆಯಬೇಕು ಎಂದರು.
ವಿಶ್ವವಿದ್ಯಾಲಯದ ಚಿತ್ರಕಲಾ ವಿದ್ಯಾಲಯಗಳ ನಿರ್ವಹಣಾ ಕೇಂದ್ರದ ನಿರ್ದೇಶಕ ಡಾ| ಮಲ್ಲಿಕಾರ್ಜುನ ವಣೇನೂರ ಮಾತನಾಡಿ, ಚಿತ್ರಕಲೆಯು ಭಾಷೆಯನ್ನೂ ಮೀರಿದ ಅಭಿವ್ಯಕ್ತಿಯಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ ವಿ.ಆರ್. ಮಾತನಾಡಿ, ಈ ಮೊದಲು ವ್ಯಂಗ್ಯಚಿತ್ರವನ್ನು ಕಲಿಕೆಗೆ ಯಾವುದೇ ಶಾಲೆಗಳು ಇರಲಿಲ್ಲ. ಆರ್.ಕೆ. ಲಕ್ಷ್ಮಣ್, ಮೂರ್ತಿ, ಎಫ್.ಟಿ. ಆಚಾರ್ ಸೇರಿದಂತೆ ಅನೇಕರು ಸ್ವತಂತ್ರವಾಗಿ ವ್ಯಂಗ್ಯ ಚಿತ್ರ ಕಲಿತಿದ್ದಾರೆ. 1977ರಲ್ಲಿ ವ್ಯಂಗ್ಯಚಿತ್ರ ಕಲಾವಿದರ ಸಕ್ಷಿಂಘ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ದೃಶ್ಯಕಲಾ ವಿಭಾಗದ ಮುಖ್ಯಸ್ಥರು ಹಾಗೂ ಲಲಿತಕಲಾ ನಿಕಾಯದ ಡೀನ್ ಡಾ| ಅಶೋಕಕುಮಾರ ರಂಜೇರೆ ಮಾತ ನಾಡಿ, ಅಭಿವ್ಯಕ್ತಿ ಮಾಧ್ಯಮಗಳಲ್ಲಿ ವ್ಯಂಗ್ಯಚಿತ್ರಕಲೆಯು ಒಂದಾಗಿದೆ. ದೀರ್ಘವಾದ ಲೇಖನ ಅಥವಾ ಇಡೀ ಒಂದು ಪುಸ್ತಕದ ಆಶಯಗಳನ್ನು ಒಂದೇ ಒಂದು ವ್ಯಂಗ್ಯಚಿತ್ರದ ಮೂಲಕ ಕಲಾವಿದರು ಕಟ್ಟಿಕೊಡುತ್ತಾರೆ ಎಂದರು.
ಕುಲಸಚಿವ ಡಾ| ಮಂಜುನಾಥ ಬೇವಿನಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ವಿಶ್ವವಿದ್ಯಾಲಯವು ಆರಂಭದಿಂದಲೂ ಚಿತ್ರಕಲೆ, ಶಿಲ್ಪಕಲೆಗೆ ಪ್ರೋತ್ಸಹ ನೀಡುತ್ತಾ ಬಂದಿದೆ. ಈಗ ವಿದ್ಯಾರ್ಥಿಗಳಿಗಾಗಿ ವ್ಯಂಗ್ಯಚಿತ್ರ ಕಾರ್ಯಾಗಾರ ಹಮ್ಮಿಕೊಂಡಿದೆ. ಸಮಕಾಲೀನ ಜಗತ್ತಿಗೆ ವ್ಯಂಗ್ಯಚಿತ್ರ ಕಲಾವಿದರ ಕೊಡುಗೆ ಅಪಾರವಾಗಿದೆ. ಕಾಲಗತಿಯಲ್ಲಿ ನಡೆದ ಘಟನೆಗಳನ್ನು ವ್ಯಂಗ್ಯಚಿತ್ರದ ಮೂಲಕ ಅಭಿವ್ಯಕ್ತಿಸುವುದುಬಹಳ ದೊಡ್ಡ ಕಲಾಮಾಧ್ಯಮವಾಗಿದೆ. ವ್ಯಂಗ್ಯ ಚಿತ್ರ ಕಲಾವಿದರು ಸಮಾಜ ವಿಜ್ಞಾನಿಗಳು, ಮನಃಶಾಸ್ತ್ರ ವಿಜ್ಞಾನಿಗಳು, ಹೃದಯವಂತ ಮನಸ್ಸಿನ ವ್ಯಕ್ತಿಗಳು ಆಗಿರುತ್ತಾರೆ ಎಂದರು. ಏಕಕಾಲದಲ್ಲಿ ಸಾರ್ವತ್ರಿಕ ಪ್ರಚಲಿತ ಸಂಗತಿಗಳನ್ನು ಹಾಗೂ ಭೂತಕಾಲದ ಸಂಗತಿಗಳನ್ನು ವ್ಯಂಗ್ಯಚಿತ್ರ ಮಾಧ್ಯಮದ ಮೂಲಕ ಪರಿಣಾಮಕಾರಿಯಾಗಿ ಹೇಳಬಹುದು. ಗೆರೆಗಳ ಮೂಲಕ ವ್ಯಂಗ್ಯಚಿತ್ರಗಳು ಅನೇಕ ಅರ್ಥಗಳನ್ನು ಹೇಳುತ್ತವೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಗುಜಾರಪ್ಪ ಬಿ.ಜಿ., ಬಾಬು ಜತ್ತಕರ್, ನಾಗನಾಥ್ ಜಿ.ಎಸ್. ಉಪಸ್ಥಿತರಿದ್ದರು. ಸಂಗೀತ ವಿಭಾಗದ ವಿದ್ಯಾರ್ಥಿನಿ ಶರಣಮ್ಮ ಪ್ರಾರ್ಥಿಸಿದರು. ದೃಶ್ಯಕಲಾ ವಿಭಾಗದ ವಿದ್ಯಾರ್ಥಿನಿ ನಯನಾ ನಿರೂಪಿಸಿದರು. ದೃಶ್ಯಕಲಾ ವಿಭಾಗದ ಅಧ್ಯಾಪಕ ಡಾ| ಶಿವಾನಂದ ಬಂಟನೂರ ಸ್ವಾಗತಿಸಿದರು. ದೃಶ್ಯಕಲಾ ವಿಭಾಗದ ಅಧ್ಯಾಪಕ ಡಾ| ಮೋಹನರಾವ್ ಬಿ. ಪಂಚಾಳ ವಂದಿಸಿದರು. ಡಾ| ಡಿ. ಪಾಂಡುರಂಗಬಾಬು, ಡಾ| ಪಿ. ಮಹಾದೇವಯ್ಯ, ಡಾ| ಸಾಂಬಮೂರ್ತಿ, ಡಾ| ಶಿವಾನಂದ ವಿರಕ್ತಮಠ, ಡಾ| ಡಿ. ಮೀನಾಕ್ಷಿ, ಡಾ| ಎ ವೆಂಕಟೇಶ, ಕೆ.ಕೆ. ಮಕಾಳಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ