ನಾಟಕ ಕಂಪನಿಗಳಿಗೆ ಚುನಾವಣಾ ಆಯೋಗದಿಂದ ನೋಟಿಸ್ ಜಾರಿ
Team Udayavani, Mar 18, 2019, 7:53 AM IST
ಕೊಟ್ಟೂರು: ನಾಟಕ ಕಂಪನಿಗಳಿಗೆ ರಾತ್ರಿ ವೇಳೆ ಪ್ರದರ್ಶನ ನಡೆಸದಂತೆ ಚುನಾವಣೆ ಆಯೋಗ ಸಮಿತಿ ನೋಟಿಸ್ ಜಾರಿ ಮಾಡಿದೆ. ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ನಿಮಿತ್ತ ವಿವಿಧ ಊರುಗಳಿಂದ ಬಂದಿರುವ ನಾಟಕ ಕಂಪನಿಗಳು ಕೊಟ್ಟೂರಿನಲ್ಲಿ ಬೀಡು ಬೀಟು ಬಿಟ್ಟಿವೆ. ಈ ಕಂಪನಿಗಳು ತಮ್ಮ ಹೊಟ್ಟೆ ಹೊರೆಯಲು ನಾಟಕದಿಂದ ಜೀವನ ವೃತ್ತಿ ನಡೆಸಿಕೊಂಡು ಹೋಗುತ್ತಿರುವ ಬಡ ಕಲಾವಿದರು ಲೋಕಸಭಾ ಚುನಾವಣೆ ಜಾರಿಯಾದ ನಿಮಿತ್ತ ನಾಟಕ ಕಂಪನಿಗಳಿಗೆ ರಾತ್ರಿ ವೇಳೆ ಪ್ರದರ್ಶನ ನಡೆಸದಂತೆ ಚುನಾವಣೆ ಆಯೋಗ ಸಮಿತಿಯ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಇಂದರಿಂದಾಗಿ ನಾಟಕ ಕಂಪನಿಗಳ ಕಲಾವಿದರು ಪಾಡು ಹೇಳತೀರದಾಗಿದೆ. ರಾತ್ರಿ ಷೋ ನಡೆದರೆ ಮಾತ್ರ ಬಡ ಕಲಾವಿದರಿಗೆ ದುಡಿಮೆಯಾಗಿ ಹೊಟ್ಟೆಗೆ ಅನ್ನವಾಗುತ್ತದೆ. ಹೀಗಾಗಿ ದಿನ ನಿತ್ಯ ನಡೆಯುವ ಷೋಗಳ ಸಮಯವನ್ನು ಮಧ್ಯಾಹ್ನ 3:30 ಮತ್ತು ಸಂಜೆ 6:15 ಕ್ಕೆ ನಡೆಸುವಂತಾಗಿದೆ.
ಇದರಿಂದ ಅವರಿಗೆ ಬರುವ ಆದಾಯ ಕಡಿಮೆಯಾಗಿದೆ. 2 ಷೋ ನಡೆದರು ಕೇವಲ 10 ಸಾವಿರ ರೂ. ಸಂಗ್ರಹವಾಗುತ್ತದೆ. ಅವರಿಗೆ ಒಂದು ದಿನಕ್ಕೆ 25 ಸಾವಿರ ರೂ. ಖರ್ಚಿದೆ. ಈ ನೀತಿ ಸಂಹಿತೆ ಜಾರಿಯಿಂದಾಗಿ ಖರ್ಚು ಜಾಸ್ತಿಯಾಗಿ ಆದಾಯವಿಲ್ಲದಂತಾಗಿದೆ.
ಇಲ್ಲಿನ ಹೊಟೇಲ್ಗಳನ್ನು ರಾತ್ರಿ 10 ಗಂಟೆಯೊಳಗಡೆ ಮುಚ್ಚಬೇಕೆಂದಿರುವುದು ಬಡ ಹೊಟೇಲ್ ಮಾಲೀಕರ ಪರಿಸ್ಥಿತಿ ನಾಟಕ ಕಂಪನಿಗಳಿಗಿಂತೇನು ಭಿನ್ನವಾಗಿಲ್ಲ. ರಾತ್ರಿ ವೇಳೆ ಪ್ರಯಾಣಿಸುವ ಪ್ರಯಾಣಿಕರಿಗೆ ಉಪವಾಸವೇ ಗತಿಯಾಗಿದೆ. ಈಗಿರುವ ಬರಗಾಲದ ಜತೆಗೆ ಅದೇ ವೃತ್ತಿಯಿಂದ ಜೀವನ ನಡೆಸುವ ಬಡ ಬಗ್ಗರಿಗೆ ನೀತಿ ಸಂಹಿತೆ ಜಾರಿಯಾಗಿರುವುದು ಬಿಸಿತುಪ್ಪವಾಗಿದೆ.
ಬೇರೆ ಜಿಲ್ಲೆಗಳಲ್ಲಿ ಇಲ್ಲದ ನೀತಿ ಸಂಹಿತೆ ಕಾನೂನು ಬಳ್ಳಾರಿ ಜಿಲ್ಲೆ ಹಾಗೂ ಕೊಟ್ಟೂರಿನಲ್ಲಿ ಜಾರಿಯಾಗಿರುವುದು ವಿಷಾದಕರ. ಅನತಿ ದೂರದಲ್ಲಿರುವ ದಾವಣಗೆರೆಯಲ್ಲಿ ಸಿನಿಮಾಗಳು ಈಗಲು ರಾತ್ರಿ 12 ರವರೆಗೆ ನಡೆಯುತ್ತವೆ. ನಮ್ಮಂತ ಬಡವರ ಹೊಟ್ಟೆಯ ಮೇಲೆ ಹೊಡೆಯುವುದು ಎಷ್ಟು ಸರಿ? ನಾವು ದುಡಿಯುವುದು ನೀತಿ ಸಂಹಿತೆಯಿಂದ ಕೇವಲ 10 ಸಾವಿರ. ಆದರೆ, ದಿನಕ್ಕೆ ಖರ್ಚಾಗುವುದು 20 ಸಾವಿರ ರೂ.. ಹೀಗಾದರೆ ನಮ್ಮ ಜೀವನ ನಡೆಸುವುದು ಹೇಗೆ? ಗುಬ್ಬಿ ಕಂಪನಿ ಮಾಲೀಕ ಜ್ಯೋತಿ ಮಂಗಳೂರು.
ನೀತಿ ಸಂಹಿತೆ ಜಾರಿಯಾಗಿರುವುದರಿಂದ ಬಡವರಿಗೆ ತುಂಬಾನೇ ಕಷ್ಟಕರವಾಗಿದೆ. ನೀತಿ ಸಂಹಿತೆ ರಾಜಕಾರಣಿಗಷ್ಟೇ ಸೀಮಿತವಾಗಿರಬೇಕು. ಬಡವರ ಜೀವನ ಜೊತೆ ಆಟವಾಡುವಂತಾಗಬಾರದು. ಮುಂದಿನ ದಿನಗಳಲ್ಲಿ ಬಡವರ ಮೇಲೆ ಈ ನೀತಿ ಸಂಹಿತೆ ಜಾರಿಯಾದರೆ ನಾನು ಹೋರಾಟಕ್ಕಿಳಿವೆ.
ಅಂಚೆ ಕೊಟ್ರೇಶ್, ಕೊಟ್ಟೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ