ನಿರ್ಭಯವಾಗಿ ಚುನಾವಣೆ ಎದುರಿಸಿ: ಖೂಬಾ
Team Udayavani, Aug 28, 2018, 11:53 AM IST
ಹುಮನಾಬಾದ: ಯಾರೂ ಯಾರಿಗೂ ಹೆದರದೇ ನಿರ್ಭಯವಾಗಿ ಚುನಾವಣೆ ಎದುರಿಸಿ, ಯಾವತ್ತೂ ನಾನು ನಿಮ್ಮೊಂದಿಗಿದ್ದೇನೆ. ಯಾವುದೇ ಕಾರಣಕ್ಕೂ ಹಿಂದೆ ನೋಡದೆ ಯಶಸ್ಸಿಗಾಗಿ ಮುನ್ನಡೆಯಬೇಕು ಎಂದು ಸಂಸದ ಭಗವಂತ ಖೂಬಾ ಸಲಹೆ ನೀಡಿದರು.
ಆ.31ರಂದು ನಡೆಯಲಿರುವ ಹಳ್ಳಿಖೇಡ(ಬಿ)ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಳ್ಳಿಖೇಡ(ಬಿ)ಪಟ್ಟಣದಲ್ಲಿ ಸೋಮವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ವಿಪಕ್ಷದವರಿಂದ ಹೆದರಿಕೆ, ಬೆದರಿಕೆ ಬರುತ್ತವೆ.
ಅದ್ಯಾವುದಕ್ಕೂ ಕಿವಿಗೊಡದೇ ಗೆಲುವಿಗಾಗಿ ಶ್ರಮಿಸಬೇಕು. ಗೆಲುವು ಯಾವತ್ತಾದರೂ ನಮ್ಮದೆ. ಗುರಿ ತಲುಪುವ ತನಕ
ಹಿಂತಿರುಗಿ ನೋಡದೇ ಆತ್ಮವಿಶ್ವಾಸದಿಂದ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.
ಮಾಜಿ ಶಾಸಕ ಸುಭಾಷ ಕಲ್ಲೂರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುನಿತಾ ಸಗರ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ
ಡಾ| ಶೈಲೇಂದ್ರ ಬೆಲ್ದಾಳೆ, ಉಪಾಧ್ಯಕ್ಷ ಶಿವಾನಂದ ಕೆ.ಮಂಠಾಳ್ಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮನಾಥ ಪಾಟೀಲ, ಈಶ್ವರಸಿಂಗ್ ಠಾಕೂರ್, ಪ್ರವೀಣ ಸಿರಂಜಿ, ನರಸಿಂಗ್ ಸಗರ್, ತಾಲೂಕು ಘಟಕ ಅಧ್ಯಕ್ಷ ವಿಶ್ವನಾಥ ಪಾಟೀಲ ಮಾಡುಳ್, ಮಹ್ಮದ್ ಇಲಿಯಾಸ್, ಶಾಂತಕುಮಾರ ಚಾಳಕಿ, ಮಲ್ಲಿಕಾರ್ಜುನ ಕುಂಬಾರ, ಸೂರ್ಯಕಾಂತ ಮಠಪತಿ, ಬಸವರಾಜ ಆರ್ಯ, ಮಲ್ಲಿಕಾರ್ಜುನ ಪ್ರಭಾ, ಬಾಬು ಕಾರಭಾರಿ, ಪ್ರಭಾಕರ ನಾಗರಾಳೆ, ನಸ್ರಿನ್ ತರನ್ನು, ಅಭಿಮನ್ಯೂ ನಿರಗುಡಿ, ಕರಬಸಪ್ಪ ಮುಸ್ತಾಪುರ, ವಕೀಲ ರವಿಕಾಂತರಾವ್ ಹೂಗಾರ ಮೊದಲಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
MUST WATCH
ಹೊಸ ಸೇರ್ಪಡೆ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ