ಮನೆಗಳ್ಳತನ: 7 ಆರೋಪಿಗಳ ಸೆರೆ15 ಲಕ್ಷ ಮೌಲ್ಯದ ಚಿನ್ನಾಭರಣ ವಶ
Team Udayavani, Aug 14, 2018, 11:50 AM IST
ವಿಜಯಪುರ: ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಪತ್ತೆ ಹಚ್ಚಿರುವ ಜಿಲ್ಲೆಯ ಪೊಲೀಸರು ಎರಡು ಬೇರೆ ತಂಡಗಳಲ್ಲಿ 3 ಅಪ್ರಾಪ್ತರು ಸೇರಿ 7 ಆರೋಪಿಗಳನ್ನು ಬಂಧಿಸಿ 15.66 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕರಣದ ಕುರಿತು ಮಾಹಿತಿ ನೀಡಿದ ಎಸ್ಪಿ ಪ್ರಕಾಶ ನಿಕ್ಕಂ, ವಿಜಯಪುರ ನಗರ ಹಾಗೂ ಅರಕೇರಿ, ಸೇನಾನಗರ, ಕವಲಗಿ, ತಿಕೋಟಾ ಪಟ್ಟಣ, ಬಾಬಾನಗರ, ಹೊನ್ನೂಟಗಿ, ಕನ್ನೂರ, ಕನ್ನಾಳ ತಾಂಡಾ ಸೇರಿದಂತೆ ವಿವಿಧೆಡೆ ನಡೆದಿದ್ದ 13 ಮನೆಗಳ್ಳತನ ಪ್ರಕರಣ ಪತ್ತೆ ಹಚ್ಚಿ, ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಓರ್ವ ಅಪ್ರಾಪ್ತನೂ ಸೇರಿದ್ದು, ಉಳಿದಂತೆ ಸಲ್ಮಾನ್ ಖಾನ್ ಇಜಾಜ್ ಖಾನ್, ಸದ್ದಾಂ ಜಬ್ಟಾರ ದಫೇದಾರ, ಆಕೀಬ ಜಾವೇದ ಹಬಿಬ್ ಉಲ್ಲಾ ಮಹಲ್ದಾರ ಉರ್ಫ್ ಕೂಡಗಿ, ಶ್ರೀಶೈಲ ಉರ್ಫ್ ಶಿರಸು ರಾಯಪ್ಪ ಬಿರಾದಾರ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ 36,500 ರೂ. ನಗದು, 2 ಲಕ್ಷ ರೂ. ಮೌಲ್ಯದ 4.5 ಕೆಜಿ. ಬೆಳ್ಳಿ ಆಭರಣಗಳು, 7 ಲಕ್ಷ ರೂ. ಮೌಲ್ಯದ 240 ಗ್ರಾಂ ಚಿನ್ನಾಭರಣ, 15 ಸಾವಿರ ರೂ. ಮೌಲ್ಯದ 1 ಎಲ್ಇಡಿ ಟಿವಿ, 15 ಸಾವಿರ ರೂ. ಮೌಲ್ಯದ
ಸ್ಯಾಮಸಂಗ್ ಮೊಬೈಲ್ ಸೇರಿದಂತೆ ಒಟ್ಟು 9,66,500 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಕಳ್ಳತನ ಪ್ರಕರಣಗಳನ್ನು ಬೇಧಿ ಸುವಲ್ಲಿ ಡಿವೈಎಸ್ಪಿ ಡಿ.ಅಶೋಕ ನೇತೃತ್ವದಲ್ಲಿ ರಚಿಸಲಾಗಿದ್ದ ಗ್ರಾಮೀಣ ಸಿಪಿಐ ಶಂಕರಗೌಡ ಬಸನಗೌಡರ, ಬಬಲೇಶ್ವರ ಪಿಎಸ್ಐ ಮಲ್ಲಿಕಾರ್ಜುನ ಬಿರಾದಾರ, ಸಿಬ್ಬಂದಿಗಳಾದ ಬಿ.ಐ. ಹಿರೇಮಠ, ಎಲ್.ಎಸ್.ಹಿರೇಗೌಡ, ಎಂ.ಎನ್. ಮುಜಾವರ, ಜಿ.ವೈ. ಹಡಪದ, ಆರ್.ಡಿ. ಅಂಜುಟಗಿ, ಅಜೀತ ಬಿರಾದಾರ, ವಿ.ಪಿ. ಕುಂಬಾರ, ಬಿ.ಟಿ. ಹೊಸಮನಿ, ಎಂ.ಎಚ್. ಇಚೂರ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿ ಸುವಲ್ಲಿ ಯಶಸ್ವಿಯಾಗಿದೆ. ಖಚಿತ ಮಾಹಿತಿ ಮೇರೆಗೆ ಈ ತಂಡ ಅಲ್-ಅಮೀನ್ ಬಳಿ ಆರೋಪಿತರನ್ನು ಬಂಧಿಸಿದೆ. ಉತ್ತಮವಾಗಿ ಕಾರ್ಯ ನಿರ್ವಹಿಸಿರುವ ತಂಡಕ್ಕೆ ಬಹುಮಾನ ಘೋಷಣೆ ಮಾಡಲಾಗಿದೆ ಎಂದರು.
ಇಬ್ಬರು ಅಪ್ರಾಪ್ತರು ಇದ್ದ ಮತ್ತೂಂದು ತಂಡವನ್ನೂ ಖಚಿತ ಮಾಹಿತಿ ಆಧರಿಸಿ ಬಂಧಿಸಿದ್ದಾರೆ. ನಸುಕಿನಲ್ಲಿ ದಾಳಿ ನಡೆಸಿದ್ದ ಪೊಲೀಸರ ತಂಡ ರೈಲ್ವೇ ಸ್ಟೇಶನ್ ಬಳಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಅಪ್ರಾಪ್ತ ಬಾಲಕರಿಂದ 6 ಲಕ್ಷ ರೂ. ಮೌಲ್ಯದ 200 ಗ್ರಾಂ ಚಿನ್ನಾಭರಣ ಜಫ್ತು ಮಾಡಿಕೊಳ್ಳಲಾಗಿದೆ. ಬಂಧಿತ ಅಪ್ರಾಪ್ತರು ಜಲನಗರ ಪೊಲೀಸ್ ಠಾಣೆಯಲ್ಲಿ 1, ಗೋಲಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾಗಿ ಬಾಯಿ ಬಿಟ್ಟಿದ್ದರು. ಇದನ್ನು ಆಧರಿಸಿ ಕಳ್ಳತನ ಮಾಡಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು. ಡಿಎಸ್ಪಿ ಡಿ.ಅಶೋಕ, ಸಿಪಿಐ ಶಂಕರಗೌಡ ಬಸನಗೌಡರ್, ಸುನೀಲ ಕಾಂಬಳೆ, ವಿಶೇಷ ವಿಭಾಗದ ಸಿಪಿಐ ಚೌಧರಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು
600 ಹೆಲ್ಮೆಟ್ ಪ್ರಕರಣ: 7 ಲಕ್ಷ ರೂ. ದಂಡ ವಸೂಲಿ
ವಿಜಯಪುರ: ನಗರದಲ್ಲಿ ಹೆಲ್ಮೆಟ್ ಧರಿಸದ ಬೈಕ್ ಸವಾರರಿಂದ ಕಳೆದ 14 ದಿನಗಳಲ್ಲಿ 600ಕ್ಕೂ ಹೆಚ್ಚು ಪ್ರಕರಣ ದಾಖಲಿಸಿ 7 ಲಕ್ಷ ರೂ. ದಂಡ ವಿಧಿಸಲಾಗಿದೆ. ಭವಿಷ್ಯದಲ್ಲಿ ವಿಮೆ ಸೇರಿದಂತೆ ವಾಹನಗಳ ಇತರೆ ದಾಖಲೆಗಳ ಪರಿಶೀಲನೆಗೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ಪ್ರಕಾಶ ನಿಕ್ಕಂ ತಿಳಿಸಿದರು. ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಅಪಘಾತದ ಸಂದರ್ಭದಲ್ಲಿ ದ್ವಿಚಕ್ರ ವಾಹನ
ಸವಾರರ ಸಾವು ಸಂಭವಿಸುವ ಪ್ರಕರಣ ಹಿನ್ನೆಲೆಯಲ್ಲಿ ಸಾರ್ವಜನಿಕರು ಸುರಕ್ಷತೆಗಾಗಿ ಕಡ್ಡಾಯವಾಗಿ ಹೆಲ್ಮೆಟ್
ಧರಿಸುವುದು ಸೂಕ್ತ. ಈ ಕಾರಣಕ್ಕಾಗಿಯೇ ಜಿಲ್ಲೆಯಲ್ಲಿ ಸೂಕ್ತ ಜಾಗೃತಿ ಬಳಿಕ ಬೈಕ್ ಸವಾರರ ಹೆಲ್ಮೆಟ್ ಧಾರಣೆ
ಕಡ್ಡಾಯಗೊಳಿಸಲಾಗಿದೆ ಎಂದರು.
ಅಲ್ಲದೇ ಭವಿಷ್ಯದಲ್ಲಿ ವಾಹನ ಚಾಲನಾ ಪರವಾನಿಗೆ, ವಿಮೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸುವ, ದಂಡ ವಿಧಿಸುವ ಯೋಜನೆಯೂ ಜಾರಿಗೆ ಬರಲಿದೆ. ಇಂಥ ಸಂದರ್ಭದಲ್ಲಿ ವಾಹನ ಸವಾರರ ಜೊತೆ ಅಸಭ್ಯವಾಗಿ ವರ್ತಿಸುವ, ಅಶ್ಲೀಲ ನಿಂದನೆ ಮಾಡುವ ಅಥವಾ ಬೈಕ್ ಕೀ ಕಿತ್ತುಕೊಳ್ಳುವಂಥ ಯಾವ ಅಧಿಕಾರ ಇಲ್ಲ. ಈ ರೀತಿ ವರ್ತಿಸದಂತೆ ಸಬಂಧಿಸಿದ ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡಲಾಗುತ್ತದೆ ಎಂದರು.
ಕಳ್ಳನಿಂದ 6 ಬೈಕ್ ಜಪ್ತಿ
ವಿಜಯಪುರ: ನಗರದಲ್ಲಿ ಓರ್ವ ಆರೋಪಿಯನ್ನು ಬಂಧಿಸಿರುವ ಗಾಂಧಿಚೌಕ್ ಠಾಣೆ ಪೊಲೀಸರು 1.20 ಲಕ್ಷ ರೂ. ಮೌಲ್ಯದ 6 ಬೈಕ್ ವಶಕ್ಕೆ ಪಡೆದಿದ್ದಾರೆ. ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಸ್ಪಿ ಪ್ರಕಾಶ ನಿಕ್ಕಂ, ಬಂಧಿತ ಆರೋಪಿ ಬಸವನಬಾಗೇವಾಡಿ ತಾಲೂಕಿನ ಮನಗೂಳಿಯ ಸತೀಶ ಶಿವಪ್ಪ ಬಡಿವಡ್ಡರ (22) ಎಂದು ಗುರುತಿಸಲಾಗಿದೆ. ಪಿಎಸ್ಐ ಆರೀಫ್ ಮುಶಾಪುರಿ ನೇತೃತ್ವದ ತಂಡ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಸರ್ಕಾರಿ ಆಸ್ಪತ್ರೆ ಬಳಿ ಆರೋಪಿ ಬೈಕ್ ತೆಗೆದುಕೊಂಡು ಹೋಗುತ್ತಿದ್ದ. ಗಸ್ತು ಪೊಲೀಸರು ನಿಲ್ಲಲು ಸೂಚಿಸಿದರೂ ಓಡಿ ಹೋಗಲು ಯತ್ನಿಸಿದಾಗ, ಅನುಮಾನ ಬಂದು ಆರೋಪಿಯನ್ನು ಬೆನ್ನತ್ತಿ ಬಂಧಿಸಿದ್ದಾರೆ.
ಬಂಧಿತನನ್ನು ವಿಚಾರಣೆ ನಡೆಸಿದಾಗ ನಗರದಲ್ಲಿ ತಾನು ಬೈಕ್ ಕಳ್ಳತನ ಮಾಡಿದ್ದನ್ನು ಬಾಯಿ ಬಿಟ್ಟಿದ್ದಾನೆ. ಕೂಡಲೇ ಆರೋಪಿ ಕಳ್ಳತನ ಮಾಡಿದ್ದ ಬೈಕ್ಗಳನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಪಿಎಸ್ಐ ಆರೀಫ್ ಮುಶಾಪುರಿ, ಪೇದೆಗಳಾದ ಎಂ.ಎನ್. ಜಾಧವ, ಎಸ್.ಎಸ್. ಕೆಂಪೇಗೌಡ, ಸುರೇಶ ಅಡಕಿ, ಆರ್.ಎಸ್. ಪೂಜಾರಿ
ಮೊದಲಾದವರ ಕಾರ್ಯವನ್ನು ಶ್ಲಾಘಿಸಿ ಬಹುಮಾನ ನೀಡಲಾಗಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ