ಕೆರೆಗಳಿಗೆ ನೀರು ತುಂಬಿಸಲು ಮನವಿ
Team Udayavani, Sep 1, 2018, 11:05 AM IST
ಆಲಮಟ್ಟಿ: ಚಿಮ್ಮಲಗಿ ಹಾಗೂ ಮುಳವಾಡ ಏತ ನೀರಾವರಿ ಯೋಜನೆ ವ್ಯಾಪ್ತಿಯ ದೇವರಹಿಪ್ಪರಗಿ ತಾಲೂಕಿಗೊಳಪಟ್ಟಿರುವ ಎಲ್ಲ ಕೆರೆಗಳನ್ನು ಕಾಲುವೆಗಳ ಮೂಲಕ ತುಂಬಿಸಬೇಕೆಂದು ಒತ್ತಾಯಿಸಿ ದೇವರಹಿಪ್ಪರಗಿ ತಾಲೂಕು ನೀರಾವರಿ ರೈತ ಹೋರಾಟ ಸಮಿತಿ ವತಿಯಿಂದ ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಶುಕ್ರವಾರ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ರೈತರ ಮುಖಂಡರು ಸ್ಥಳೀಯ ಕೃಷ್ಣಾಭಾಗ್ಯಜಲನಿಗಮದ ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಿ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕಾಗಿ ಅಖಂಡ ವಿಜಯಪುರ ಜಿಲ್ಲೆಯ ಲಕ್ಷಾಂತರ ಎಕರೆ ಜಮೀನುಗಳನ್ನು ಕಳೆದುಕೊಂಡು ಲಕ್ಷಾಂತರ ಕುಟುಂಬಗಳು ನಿರಾಶ್ರಿತರಾಗಿದ್ದಾರೆ. ಆದರೆ ಇದೇ ಜಿಲ್ಲೆಯ ದೇವರಹಿಪ್ಪರಗಿ ಭಾಗದಲ್ಲಿನ ವಿವಿಧ ಕೆರೆಗಳನ್ನು, ಚಿಮ್ಮಲಗಿ ಏತ ನೀರಾವರಿ ಹಾಗೂ ಮುಳವಾಡ ಏತ ನೀರಾವರಿಯ ಮುಖ್ಯ ಕಾಲುವೆಯ ಮೂಲಕ ದೇವರಹಿಪ್ಪರಗಿ ಪಟ್ಟಣ ಹಾಗೂ ತಾಲೂಕಿನ ದೇವೂರ, ಮಣೂರ, ಜಾಲವಾದ, ಇಬ್ರಾಹಿಂಪುರ, ಬೊಮ್ಮನಜೋಗಿ, ಕೊಕಟನೂರ, ಕನ್ನೊಳ್ಳಿ, ಪಡಗಾನೂರ, ಇಂಗಳಗಿ, ಹರನಾಳ, ನಿವಾಳಖೇಡ, ಮುಳಸಾವಳಗಿ, ಕಡ್ಲೆವಾಡ, ಚಿಕ್ಕರೂಗಿ ಸೇರಿದಂತೆ ಸುಮಾರು 50ಕ್ಕೂ ಅಧಿಕ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸಬೇಕಿದೆ. ಈ ಯೋಜನೆ ರೂಪಗೊಂಡರೂ ಕಳೆದ ನಾಲ್ಕೈದು ತಿಂಗಳಿಂದ ಕಾಮಗಾರಿ ಕಾರ್ಯಗತಗೊಳ್ಳದೇ ನನೆಗುದಿಗೆ ಬಿದ್ದಿದೆ ಎಂದು ಆರೋಪಿಸಿದರು.
ಕೆಬಿಜೆಎನ್ಎಲ್ ಅಣೆಕಟ್ಟು ವಲಯದ ಮುಖ್ಯ ಅಭಿಯಂತರ ಎಸ್.ಎಚ್. ಮಂಜಪ್ಪ ಮನವಿ ಸ್ವೀಕರಿಸಿ ಮಾತನಾಡಿ, ಯೋಜನೆ ಯಶಸ್ವಿಗೊಳಿಸಲು ಸರ್ಕಾರ ಬದ್ಧವಾಗಿದೆ. ಅದರನ್ವಯ ಈಗಾಗಲೇ ಚಿಮ್ಮಲಗಿ ಏತ ನೀರಾವರಿ ಯೋಜನೆಯ 137 ಕಿ.ಮೀ.ವರೆಗೂ ಪ್ರಾಯೋಗಿಕ ನೀರು ಹರಿದಿದೆ. ಆದರೆ ಆ ಕಾಲುವೆಯಿಂದ ಕೆರೆ ತುಂಬಿಸಲು ಭೂಸ್ವಾಧೀನಕ್ಕೆ ಅಲ್ಲಿಯ ರೈತರು ಅಡ್ಡಿಪಡಿಸಿದ್ದರ ಪರಿಣಾಮ ತೊಂದರೆಯಾಗಿದೆ. ರೈತರು ಸಹಕರಿಸಿದರೆ ಎರಡೇ ತಿಂಗಳಲ್ಲಿ ಆ ಎಲ್ಲ ಕೆರೆಗಳಿಗೂ ಸಮೀಪದ ಕಾಲುವೆಯಿಂದ ವಿತರಣಾ ಕಾಲುವೆ ನಿರ್ಮಿಸಿ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದರು.
ಮುಳವಾಡ ಏತ ನೀರಾವರಿ ಯೋಜನೆಯಲ್ಲಿ ವಿಜಯಪುರ, ಗದಗ ಮಾರ್ಗದ ರೈಲ್ವೆ ಹಳಿ ದಾಟಿಸುವ ಕಾಮಗಾರಿ ಭರದಿಂದ ಸಾಗಿದೆ. ಪೂರ್ಣಗೊಂಡ ನಂತರ ಅಲ್ಲಿಂದಲೂ ನೀರು ಹರಿಸಲಾಗುವುದು ಎಂದರು.
ಎಸ್.ಎ. ಮಸಬಿನಾಳ, ಎ.ಎಸ್.ಪಾಟೀಲ, ಎಂ.ಡಿ. ಕೋನಸಿರಸಗಿ, ಸಿದ್ದಪ್ಪ, ಶರಣಗೌಡ ಕೊಲ್ಹಾರ, ಬಿ.ಬಿ. ಪಾಟೀಲ, ಫಯಾಜ್ ಯಲಗಾರ, ಡಾ.ಎಂ. ರಾಮಚಂದ್ರ, ಸಂತೋಷ ಬಿರಾದಾರ, ಮಂಜುನಾಥ ಕೊಕಟನೂರ, ಶ್ರೀಶೈಲ ಇಂಡಿ, ಬಸವರಾಜ ಮಂಗಳೂರ, ಬಾಬುಸಾಬ್ ಬೇವೂರ, ಸಿದ್ದು ಪಡಗಾನೂರ, ದೇಸು ಚವ್ಹಾಣ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ