ಕಳ್ಳತನಕ್ಕೆ ಹೋಗಿ ಹೊಟ್ಟೆ ಬಿರಿಯುವಂತೆ ತಿಂದರು!
Team Udayavani, Sep 1, 2018, 5:14 AM IST
ದೆಹಲಿಯ ರಾಜು ಸಿಂಗ್ ಹಾಗೂ ಬಾಬಿ ಸಿಂಗ್, ಸರಿತಾ ವಿಹಾರದಲ್ಲಿರುವ ರೆಸ್ಟೋರೆಂಟ್ ನಿತ್ಯ ಗ್ರಾಹಕರು. ಅಲ್ಲಿನ ಬಿರಿಯಾನಿ ಅವರ ನಾಲಿಗೆಗೆ ರುಚಿ ಹತ್ತಿಸಿತ್ತು. ಇಷ್ಟೆಲ್ಲ ಬಿರಿಯಾನಿ ಮಾರುವವ ಎಷ್ಟು ದುಡ್ಡು ಮಾಡಿರಬಹುದು ಎಂದು ಯೋಚಿಸಿದವರೇ ಒಂದು ರಾತ್ರಿ ರೆಸ್ಟೋರೆಂಟ್ ಬಾಗಿಲು ಹಾಕಿದ ಮೇಲೆ ಮುಖವಾಡ ಧರಿಸಿ ಕಳ್ಳತನಕ್ಕೆ ನುಗ್ಗಿದರು. ಕ್ಯಾಶ್ ಕೌಂಟರ್ನಲ್ಲಿ ಒಂದೇ ಒಂದು ರೂಪಾಯಿಯೂ ಇರಲಿಲ್ಲ. ಈ ಸಿಟ್ಟನ್ನೆಲ್ಲ ಬಿರಿಯಾನಿ ಮೇಲೆ ತೀರಿಸಿದ ಇಬ್ಬರೂ, ಹೊಟ್ಟೆ ಬಿರಿಯುವಂತೆ ತಿಂದರು. ಇನ್ನುಳಿದಿದ್ದನ್ನೆಲ್ಲ ಚೆಲ್ಲಾಡಿದರು. ಹೊಟ್ಟೆ ತಂಪಾಯಿತು. ಜೇಬು ತಂಪು ಮಾಡಿಕೊಳ್ಳೋಣ ಎಂದು ಕೊನೆಗೆ ಕ್ಯಾಶ್ ಕೌಂಟರಿನಲ್ಲಿದ್ದ ಲ್ಯಾಪ್ಟಾಪನ್ನೇ ಎತ್ತಿಕೊಂಡು ಹೊರಟರು.
ಬಿರಿಯಾನಿ ತಿಂದ ರಭಸಕ್ಕೆ ಮರುದಿನ ಮಧ್ಯಾಹ್ನ ಎಚ್ಚರಾದಾಗ ಲ್ಯಾಪ್ಟಾಪ್ ಮಾರಿ ಕಾಸು ಮಾಡಿಕೊಳ್ಳೋಣ ಎಂದು ಹೊರಟರೆ ಈ ಲ್ಯಾಪ್ಟಾಪ್ನ ಜಾಡು ಹಿಡಿದು ಬಂದ ಪೊಲೀಸರ ಕೈಗೆ ಸಿಕ್ಕಿಕೊಂಡಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್