ಐಟಿ ರಿಟರ್ನ್ ಸಲ್ಲಿಕೆ ದುಪ್ಪಟ್ಟು ; ರಿಫ‌ಂಡ್‌ ಪ್ರಮಾಣ ಶೇ.80 ಹೆಚ್ಚು


Team Udayavani, Jul 30, 2018, 4:21 PM IST

it-returns-700.jpg

ಹೊಸದಿಲ್ಲಿ : ಕಳೆದ ವಾರಾಂತ್ಯದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಐಟಿ ರಿಟರ್ನ್ ಸಲ್ಲಿಸಿರುವವರ ಸಂಖ್ಯೆ ಕಳೆದ ಬಾರಿಗಿಂತ ಈ ಬಾರಿ ದುಪ್ಪಟ್ಟಾಗಿದೆ; ಈ ಬಾರಿ ಸುಮಾರು ಮೂರು ಕೋಟಿ ಜನರು ಐಟಿ ರಿಟರ್ನ್ ಸಲ್ಲಿಸಿರುವುದಾಗಿ ಇಲಾಖೆಯ ಮೂಲಗಳು ತಿಳಿಸಿವೆ. 

ತೆರಿಗೆ ಪಾವತಿದಾರರು ಮತ್ತು ಕನ್‌ಸಲ್ಟೆಂಟ್‌ಗಳ ಒತ್ತಡಕ್ಕೆ ಮಣಿದು ಸರಕಾರ ಐಟಿ ರಿಟರ್ನ್ ಸಲ್ಲಿಕೆಯ ಗಡುವನ್ನು ಆ.31ರ ವರೆಗೆ ವಿಸ್ತರಿಸಿದೆ. 

ಈ ಬಾರಿ ಐಟಿ ರಿಫ‌ಂಡ್‌ ಕೇಸುಗಳ ಸಂಖ್ಯೆ 65 ಲಕ್ಷ ದಾಟಿದ್ದು ಇದು ಶೇ.81ರಷ್ಟಾಗಿದೆ. ಕಳೆದ ವರ್ಷ ಐಟಿ ರಿಫ‌ಂಡ್‌ 57,551 ಕೋಟಿ ರೂ ಆಗಿತ್ತು. ಈ ಬಾರಿ ಅದು ಶೇ.35ರಷ್ಟು ಹೆಚ್ಚಿದ್ದು ಈ ವರಗಿನ ಐಟಿ ರಿಫ‌ಂಡ್‌ 77,700 ಕೋಟಿ ರೂ. ಆಗಿರುವುದಾಗಿ ಮೂಲಗಳು ತಿಳಿಸಿವೆ. 

ರಿಫ‌ಂಡ್‌ಗಳನ್ನು ಬಾಕಿ ಇರಿಸದೆ ಎಷ್ಟು ಸಾಧ್ಯವೋ ಅಷ್ಟು ಬೇಗನೆ ಇತ್ಯರ್ಥಪಡಿಸಬೇಕೆಂಬ ಎನ್‌ಡಿಎ ಸರಕಾರದ ಜನಸ್ನೇಹಿ ನೀತಿಯು ಹೊಸ ವ್ಯವಸ್ಥೆಯಲ್ಲಿನ ಚುರುಕಿನ ಪ್ರಕ್ರಿಯೆಗೆ ಪೂರಕವಾಗಿದೆ. 

ಈ ಬಾರಿ ಶೇ.60ರಷ್ಟು ಐಟಿ ರಿಟರ್ನ್ ಗಳು  ಆನ್‌ ಲೈನ್‌ ಮೂಲಕ ಸಲ್ಲಿಕೆಯಾಗಿವೆ. ಇಷ್ಟೂ ಪ್ರಮಾಣದ ರಿಟರ್ನ್ ಗಳನ್ನು ಈಗಾಗಲೇ ಸಂಸ್ಕರಿಸಲಾಗಿದೆ. 

ಈ ಬಾರಿ 1.25 ಕೋಟಿ ಹೊಸ ಆದಾಯ ತೆರಿಗೆ ಪಾವತಿದಾರರನ್ನು ಸೇರಿಸಿಕೊಳ್ಳುವುದು ಸರಕಾರದ ಗುರಿಯಾಗಿದೆ. ಕಳೆದ ವರ್ಷ 1.06 ಕೋಟಿ ಹೊಸ ಐಟಿ ಪಾವತಿದಾರರನ್ನು ಸೇರಿಸಿಕೊಳ್ಳಲಾಗಿತ್ತು. 

ತಡವಾಗಿ ಐಟಿ ರಿಟರ್ನ್ ಸಲ್ಲಿಸುವವರಿಗೆ ದಂಡ ಶುಲ್ಕ ಹೇರುವ ಸರಕಾರದ ಕ್ರಮದಿಂದಾಗಿ ಈ ಬಾರಿ ತ್ವರಿತ ಗತಿಯಲ್ಲಿ ಅತ್ಯಧಿಕ ಸಂಖ್ಯೆಯ ಐಟಿ ರಿಟರ್ನ್ ಗಳು  ಸಲ್ಲಿಕೆಯಾಗಿವೆ ಎಂದು ಮೂಲಗಳು ತಿಳಿಸಿವೆ. 

ಕಳೆದ ಗುರುವಾರದ ವರೆಗೆ ಸಲ್ಲಿಕೆಯಾಗಿರುವ ಇ-ಐಟಿ-ರಿಟರ್ನ್ ಸಂಖ್ಯೆ 3.07 ಕೋಟಿ . 2017ರ ಜು.26ರ ವರಗೆ ಸಲ್ಲಿಸಲ್ಪಟ್ಟಿದ್ದ ಐಟಿ ರಿಟರ್ನ್ಗಳ ಸಂಖ್ಯೆ 1.07 ಕೋಟಿ. ಎಂದರೆ ಈ ಬಾರಿ ಶೇ.82ರ ಹೆಚ್ಚಳವನ್ನು ಸಾಧಿಸಲಾಗಿದೆ.

2016-17ರ ಹಣಕಾಸು ವರ್ಷದಲ್ಲಿ ಸಲ್ಲಿಸಲಾಗಿದ್ದ ಐಟಿ ರಿಟರ್ನ್ ಸಂಖ್ಯೆ 1.4 ಕೋಟಿ; 2017-18ರ ಹಣಕಾಸು ವರ್ಷದಲ್ಲಿ ಸಲ್ಲಿಕೆಯಾಗಿರುವ ಐಟಿ ರಿಟರ್ನ್ ಸಂಖ್ಯೆ 2.96 ಕೋಟಿ. 

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.