ದಲಿತ ಸಂಘಟನೆಗಳು ಒಗ್ಗೂಡಿದಲ್ಲಿ ಹೋರಾಟಕ್ಕೆ ಶಕ್ತಿ
Team Udayavani, Mar 4, 2019, 7:43 AM IST
ಗೌರಿಬಿದನೂರು: ಜಲತಜ್ಞ ಕೆ.ನಾರಾಯಣ ಸ್ವಾಮಿಯವರು ದೀನದಲಿತರ, ದಮನಿತರ ಧ್ವನಿಯಾಗಿ ಸಮಾನತೆಗಾಗಿ ಬಡವರ ಶಿಕ್ಷಣಕ್ಕಾಗಿ ಶ್ರಮಿಸಿದವರು ಎಂದು ಬಾಗೇಪಲ್ಲಿಯ ಗೂಳೂರು ನಿಡುಮಾಮಿಡಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ವೀರಭದ್ರ ಚನ್ನ ಮಲ್ಲ ದೇಶಿಕೇಂದ್ರ ಮಹಾಸ್ವಾಮಿಹೇಳಿದರು.
ಇತ್ತೀಚೆಗೆ ನಿಧನರಾದ ಜಲತಜ್ಞ ಹಾಗೂ ನಿವೃತ್ತ ಜಂಟಿ ನಿರ್ದೇಶಕರಾಗಿದ್ದ ಪ್ರೊ.ಕೆ.ನಾರಾಯಣಸ್ವಾಮಿ ಅವರಿಗೆ ಗೌರಿಬಿದನೂರು ನಗರದ ಡಾ.ಎಚ್. ನರಸಿಂಹಯ್ಯ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ನಡೆಕಾರನಿಗೆ ನುಡಿ ನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನ್ಯಾಯಾಧೀಶ ವಿ.ಹನುಮಂತಪ್ಪ ಮಾತನಾಡಿ, ಕೆ.ರಾಯಣಸ್ವಾಮಿ ಸ್ವಾಮಿಯವರು ಅಂಬೇಡ್ಕರ್ ಅವರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ದಲಿತರ, ಶೋಷಿತರಿಗೆ ಶಿಕ್ಷಣ ಸಮಾನತೆಗಾಗಿ ನಿರಂತರ ಹೋರಾಟ ನಡೆಸಿದರು.
ದಲಿತರಿಗೆ ಶಿಕ್ಷಣ ನೀಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಎಂದರು. ದಲಿತ ಸಾಹಿತಿ ದೇವನೂರು ಮಹಾದೇವ ಅವರು ಮಾತನಾಡಿ, ದಶಕಗಳ ಒಡನಾಡಿಯಾಗಿದ್ದ ನಾರಾಯಣ ಸ್ವಾಮಿ, ಅವರ ದಿಗಂಬರ ಕವಿತೆಗಳು, ಕೃತಿಯನ್ನು ಓದುವ ಮೂಲಕ ನನಗೆ ಆತ್ಮೀಯರಾಗಿದ್ದರು ಎಂದರು.
ಕೆ.ನಾರಾಯಣ ಸ್ವಾಮಿ ಅವರ ಶಿಷ್ಯ ದಲಿತ ಮುಖಂಡ ಎಂ ವೆಂಕಟೇಶ್,ಪ್ರಗತಿಪರ ಚಿಂತಕ ಪ್ರೊ.ಬಿ.ಗಂಗಾಧರ ಮೂರ್ತಿ, ಕಾರ್ಯಕ್ರಮದಲ್ಲಿ ಸಾಹಿತಿ ಕೋಟಗಾನಹಳ್ಳಿ ರಾಮಯ್ಯ, ಸಿ.ಎಂ. ಮುನಿಯಪ್ಪ, ಪ್ರಗತಿಪರ ಚಿಂತಕ ಎನ್. ರಮೇಶ್ ಸೇರಿದಂತೆ ಅನೇಕರು ಕೆ. ನಾರಾಯಣ ಸ್ವಾಮಿ ಅವರ ಒಡನಾಟದ ಬಗ್ಗೆ ಮಾತನಾಡಿದರು.
ಹಿಂದುಳಿದ ವರ್ಗಗಳ ಆಯೋಗ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಮಾತನಾಡಿದರು.ಜಿಪಂ ಅಧ್ಯಕ್ಷ ಎಚ್ .ವಿ.ಮಂಜು ನಾಥ್, ವಾಲ್ಮೀಕ ನಾಯಕ ಸಂಘದ ಅಧ್ಯಕ್ಷ ಬಾಬಣ್ಣ, ಆರ್. ಅಶೋಕ್ ಕುಮಾರ್, ಪಿಚ್ಚಳ್ಳಿ ಶ್ರೀನಿವಾಸ್, ಮಾನಸ ಆಸ್ಪತ್ರೆ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ.ಶಶಿಧರ್ ಮುನಿರೆಡ್ಡಿ, ಲಕ್ಷ್ಮೀನಾರಾ ಯಣ, ಕೆ.ನಂಜುಂಡಪ್ಪ, ಸೋಮಯ್ಯ, ಚನ್ನಪ್ ನರಸಿಂಹಮೂರ್ತಿ, ಪಿ.ಜಿ.ವಿ.ಗಂಗಪ್ಪ, ನಾಗರಾಜಪ್ಪ, ವೆಂಕಟಸ್ವಾಮಿ, ವಿ. ನಾಗರಾಜು,ನಾರಾಯಣಸ್ವಾಮಿ ಅವರ ಪುತ್ರಿ ಎಚ್.ಎನ್.ಪದ್ಮ, ಕೆ.ಎಲ್.ವೇಣು ಗೋಪಾಲ್ ಇದ್ದರು. ದಲಿತ ಮುಖಂಡ ಸಿ.ಜಿ.ಗಂಗಪ್ಪ ಸ್ವಾಗತಿಸಿ ಡಾ.ಕೆ. ಪಿ.ನಾರಾಯಣಪ್ಪ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ