ಸಮಾಜ ಹಿತದ ಕೆಲಸಕ್ಕೆ ಸದಾ ದೇವರ ಕೃಪ
Team Udayavani, Dec 3, 2017, 10:51 AM IST
ಮೂಲ್ಕಿ : ಸಮಾಜದ ಹಿತಕ್ಕಾಗಿ ಮಾಡುವ ಸೇವಾ ಕಾರ್ಯಕ್ರಮಗಳನ್ನು ದೇವರು ಇಷ್ಟ ಪಡುವುದಲ್ಲದೆ ಇಂತಹ ಕೆಲಸಗಳಿಗೆ ದೇವರ ಕೃಪೆಯೂ ಪೂರ್ಣವಾಗಿರುತ್ತದೆ ಎಂದು ಶ್ರೀ ಕಾಶೀಮಠಾಧೀಶ ಶ್ರೀ ಸಂಯಮೀಂದ್ರ ಸ್ವಾಮೀಜಿ ಅವರು ಹೇಳಿದರು. ಅವರು ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ಯಾತ್ರಿಗಳ ವಸತಿ ಕೇಂದ್ರ ಮಾಧವ ನಿವಾಸವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಾಶೀಮಠದ ಯತಿ ಪರಂಪರೆಗೆ ಬಹಳಷ್ಟು ಕಾಲದಿಂದ ಮೂಲ್ಕಿಯೊಂದಿಗೆ ನಿಕಟವಾದ ಸಂಪರ್ಕವಿದೆ. ಇಲ್ಲಿನ ಪ್ರತಿಯೊಬ್ಬರಿಗೂ ಒಳಿತಾಗಲಿ, ಸಮಗ್ರ ಅಭಿವೃದ್ಧಿ ಹೊಂದುವಂತಾಗಲಿ. ಮೂಲ್ಕಿಯ ಜನರಿಂದ ಮತ್ತಷ್ಟು ಸಮಾಜ ಹಿತ ಕೆಲಸಗಳು ನಡೆಯಲಿ ಎಂದು ಶ್ರೀಗಳು ಹರಸಿದರು.
ಇದೇ ಸಂದರ್ಭ ಯೋಜನೆಯ ದಾನಿಗಳಿಗೆ ಶ್ರೀಗಳು ಫಲ ಮಂತ್ರಾಕ್ಷತೆಯಿತ್ತು ಹರಸಿದರು. ಅರ್ಚಕ ವೃಂದ ಮತ್ತು ಆಡಳಿತ ಮಂಡಳಿಯ ಸರ್ವ ಸದಸ್ಯರನ್ನೂ ಶ್ರೀಗಳು ಆಶೀರ್ವದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Heavy Rain: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್ಮೆಂಟ್ನ ಗೋಡೆ ಕುಸಿದು 7 ಮಂದಿ ಸಾವು
ಚಿಕ್ಕಮಗಳೂರು: 436 ಗ್ರಾಮಗಳಲ್ಲಿ ಕುಡಿವ ನೀರಿನ ಅಭಾವ
ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು: ಕೃತಜ್ಞತೆ, ಗೌರವ
ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು
ಪ್ರಜ್ವಲ್ ಪ್ರಕರಣ ತನಿಖೆಯಲ್ಲಿದ್ದರೂ ಬಿಜೆಪಿಯಿಂದ ರಾಜಕೀಯ:ಸಚಿವ ಬಿ. ನಾಗೇಂದ್ರ