ಮೃತರಲ್ಲಿ ಬೆಳ್ತಂಗಡಿಯ ನಾಲ್ವರು
Team Udayavani, Jan 14, 2018, 4:04 PM IST
ಬೆಳ್ತಂಗಡಿ: ಹಾಸನದ ಶಾಂತಿಗ್ರಾಮದಲ್ಲಿ ಶನಿವಾರ ಮುಂಜಾನೆ ಕೆಎಸ್ಆರ್ಟಿಸಿ ಐರಾವತ ಬಸ್ ಹಳ್ಳಕ್ಕೆ ಬಿದ್ದು ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಏಳು ಮಂದಿಯ ಪೈಕಿ ನಾಲ್ವರು ಬೆಳ್ತಂಗಡಿ ತಾಲೂಕಿನವರು. ಇವರಲ್ಲಿ ಮೂವರು ಒಂದೇ ಕುಟುಂಬಕ್ಕೆ ಸೇರಿದವರು.
ನೆರಿಯಾ ಗ್ರಾಮದ ಗಂಡಿಬಾಗಿಲು ದೇವಗಿರಿ ಪುತ್ತೋಟ್ ಪೊರವಿಲ್ ನಿವಾಸಿಗಳಾದ ಜಾರ್ಜ್ ಯಾನೆ ಬೇಬಿ ಮತ್ತು ಸುಜಾ ದಂಪತಿಯ ಪುತ್ರ ಬಿಜೋ ಜಾರ್ಜ್ (27), ವಿನು ಅವರ ಪತ್ನಿ ಸೋನಿಯಾ (27), ದೇವಸ್ಯ ಅವರ ಪುತ್ರಿ ಡಯಾನಾ ಪಿ.ಡಿ. (20) ಹಾಗೂ ಕನ್ಯಾಡಿಯ ಶ್ರೀರಾಮ ಕ್ಷೇತ್ರದ ಬಳಿಯ ಸೌಭಾಗ್ಯ ನಿಲಯ ನಿವಾಸಿ ಸಿಂಡಿಕೇಟ್ ಬ್ಯಾಂಕ್ನ ಉದ್ಯೋಗಿಯಾಗಿದ್ದ ದಿ| ಎಂ. ರಾಮದಾಸ್ ಪ್ರಭು ಅವರ ಏಕೈಕ ಪುತ್ರ ಎಂ. ರಾಕೇಶ್ ಪ್ರಭು (26) ಮೃತಪಟ್ಟವರು. ಮೃತ ಸೋನಿಯಾ ಅವರ ಪತಿ ವಿನು ಥಾಮಸ್ (32) ಗಂಭೀರ ಗಾಯಗೊಂಡಿದ್ದಾರೆ. ಅವರ ತಲೆ, ಕೈಗೆ ತೀವ್ರ ಗಾಯವಾಗಿದೆ; ಕಿಡ್ನಿಗೂ ಏಟು ಬಿದ್ದಿದೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಬ್ಬಕ್ಕೆ ಬರುತ್ತಿದ್ದವರು: ನೆರಿಯ ಗ್ರಾಮದ ಗಂಡಿ ಬಾಗಿಲಿನ ದೇವಗಿರಿಯ ಸೈಂಟ್ ಥಾಮಸ್ ಚರ್ಚ್ನಲ್ಲಿ ಶನಿವಾರ ಹಾಗೂ ರವಿವಾರ ವಾರ್ಷಿಕ ಹಬ್ಬ ಆಯೋಜನೆ ಯಾಗಿತ್ತು. ಈ ಹಬ್ಬದಲ್ಲಿ ಪಾಲ್ಗೊಳ್ಳಲು ಅವರು ಬೆಂಗಳೂರಿ
ನಿಂದ ಊರಿಗೆ ಬರುತ್ತಿರುವಾಗ ಅವಘಡ ಸಂಭವಿಸಿದೆ.
ಗಾಢ ಮೌನ: ಅಷ್ಟೇನೂ ಸಿರಿತನದ ಕುಟುಂಬವಲ್ಲದ ಇವರ ಅಗಲುವಿಕೆ ಊರಿನವರಲ್ಲೂ ವಿಷಾದ ಛಾಯೆ ಮೂಡಿಸಿದೆ. ಸಾಧಾರಣ ಹಂಚಿನ ಮನೆ ಹೊಂದಿರುವ ಇವರ ಮನೆಗೆ ಜನ ಆಗಮಿಸುತ್ತಿದ್ದರೂ ಮನೆಯವರಿಗೆ ತಡವಾಗಿ ವಿಷಯ ತಿಳಿಸಲಾಗಿದೆ. ಡಯಾನಾ, ಬಿಜೋ ಜಾರ್ಜ್ ಹಾಗೂ ಗಾಯಾಳು ವಿನು ಥಾಮಸ್ ಅವರು ಒಂದೇ ಕುಟುಂಬಕ್ಕೆ ಸೇರಿ ದವರಾಗಿದ್ದು ಈ ಮನೆಗಳ ಪರಿಸರವೇ ಅಗಾಧ ಮೌನದಿಂದ ಆವರಿಸಿದೆ. ಊರಿನಲ್ಲಿ ವಾರ್ಷಿಕ ಜಾತ್ರೆಯ ಸಂಭ್ರಮ ಮರೆ ಯಾಗಿದೆ. ಸಂಬಂಧಿಕರ ಮುಖದಲ್ಲಿ ನೋವಿನ ಕಳೆಯಿತ್ತು. ಬಂಧುಗಳು ಅಳುನುಂಗುತ್ತಿದ್ದರು. ಸ್ನೇಹಿತರು ಕಣ್ಣೀರು ಹಾಕುತ್ತಿದ್ದರು. ರವಿವಾರ ಅಂತ್ಯ ಸಂಸ್ಕಾರ ನಡೆಯಲಿದೆ. ಶಾಸಕ ಕೆ. ವಸಂತ ಬಂಗೇರ, ಜಿ.ಪಂ. ಸದಸ್ಯ ನಮಿತಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮೊದಲಾ ದವರು ಭೇಟಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ