ಕುಡುಪು ದೇವಸ್ಥಾನ 108 ಮಹಾ ಆಶ್ಲೇಷಾ ಬಲಿ
Team Udayavani, Feb 22, 2018, 2:13 PM IST
ಮಂಗಳೂರು: ಸಮಗ್ರವಾಗಿ ಜೀರ್ಣೋದ್ಧಾರಗೊಂಡಿರುವ ಪ್ರಸಿದ್ಧ ನಾಗಾರಾಧನ ಕ್ಷೇತ್ರ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ವಿಶೇಷ ದಿನವಾದ ಪಂಚಮಿಯಂದು ಮಂಗಳವಾರ 108 ಮಹಾ ಆಶ್ಲೇಷಾ ಬಲಿ ಪೂಜೆಯು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಕೆ. ಕೃಷ್ಣರಾಜ ತಂತ್ರಿಗಳ ಪೌರೋಹಿತ್ಯದಲ್ಲಿ ನಡೆಯಿತು.
ನಗ್ರಿ ಗೋಪಾಲಕೃಷ್ಣ ಸಾಮಗ, ಸುಬ್ರಹ್ಮಣ್ಯ ಕ್ಷೇತ್ರದ ಹಿಂದಿನ ಅರ್ಚಕ ಕೇಶವ ಜೋಗಿತ್ತಾಯ ಉಪಸ್ಥಿತರಿದ್ದರು. ರಾತ್ರಿ ದೇವರಿಗೆ ಮಹಾಪೂಜೆಯಾದ ಅನಂತರ ಉತ್ಸವ ಬಲಿ ಸಂಪನ್ನಗೊಂಡಿತು. ಮಧ್ಯಾಹ್ನ ನಾಗದೇವರಿಗೆ ವಿಶೇಷ ಕಲಶಾಭಿಷೇಕ ಮಹಾ ತಂಬಿಲ ಸೇವೆ, ಕಲ್ಪೋಕ್ತ ಪೂಜೆ, ಬ್ರಹ್ಮಚಾರಿ ಆರಾಧನೆ ನಡೆದು ಮಹಾ ಅನ್ನಸಂತರ್ಪಣೆ ಜರಗಿತು.