ಮಕ್ಕಳು ಸದಾ ಚಟುವಟಿಕೆಯಿಂದಿರಲಿ


Team Udayavani, Jul 1, 2018, 1:35 PM IST

ray-3.jpg

ದಾವಣಗೆರೆ: ವಿದ್ಯಾರ್ಥಿಗಳು ನಿಂತ ನೀರಾಗದೆ ಸದಾ ಒಂದಿಲ್ಲೊಂದು ಚಟುಚಟಿಕೆಯಿಂದ ಕೂಡಿದ್ದರೆ ಉನ್ನತಿ
ಸಾಧಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಬಾಲಮಂದಿರದ ಮಕ್ಕಳಿಗೆ ಕಿವಿಮಾತು ಹೇಳಿದ್ದಾರೆ.

ಶ್ರೀರಾಮ ನಗರದ ಸರ್ಕಾರಿ ಬಾಲಮಂದಿರದಲ್ಲಿ ಶನಿವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ
ಮಕ್ಕಳ ಹಕ್ಕುಗಳ ರಕ್ಷಣಾ ಘಟಕದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಬ್ಯಾಗು ಮತ್ತು ವಾಚು ವಿತರಿಸಿ ಮಾತನಾಡಿದ ಅವರು, ಮಕ್ಕಳು ಸದಾ ಚಟುವಟಿಕೆ‌ಯಿಂದ ಕೂಡಿರಬೇಕು. ಆಡಬೇಕು, ಓದಬೇಕು, ಕುಣಿಯಬೇಕು. ಆಗಲೇ ಭೌತಿಕ, ಬೌದ್ಧಿಕ ಉನ್ನತಿ ಸಾಧ್ಯ ಎಂದರು.

ನಿಮಗೆ ನೀಡಿರುವ ವಾಚ್‌ ನಲ್ಲಿರುವ ಮುಳ್ಳುಗಳು ಹೇಗೆ ಸದಾ ಚಲಿಸುತ್ತಿರುತ್ತವೆಯೋ ಹಾಗೆಯೇ ನೀವೂ ಸದಾ ಚಲನಸ್ಥಿತಿಯಲ್ಲಿರಬೇಕು. ಓದಲು, ಜೀವನದಲ್ಲಿ ಏನನ್ನಾದರೂ ಸಾಧಿಸಲು ಚಲಿಸಬೇಕು. ಚಲಿಸದೇ ಒಂದಡೆ ನಿಂತರೆ
ಅದು ಸತ್ತಂತೆಯೇ ಸರಿ. ಜೀವನ ಅಂದರೆ ಓಡುವುದು, ನಿಂತರೆ ಜೀವನದಲ್ಲಿ ಜಾಗ ಇಲ್ಲ. ನಾವು ನಿಷ್ಕ್ರಿಯರಾದರೆ ಪ್ರಪಂಚ ನಮ್ಮನ್ನು ಹೊರಹಾಕುತ್ತದೆ ಎಂದು ಅವರು ಕಿವಿಮಾತು ಹೇಳಿದರು.

ಯಾವುದೇ ಜೀವಂತ ವಸ್ತು ಚಲಿಸುತ್ತಿರಬೇಕು. ಬಿತ್ತಿದ ಬೀಜ ಮೊಳಕೆ ಬರುತ್ತಿದೆ ಅಂದರೆ ಅದು ಜೀವಂತವಾಗಿದೆ
ಎಂದರ್ಥ. ಮೊಳಕೆ ಚಿಗುರಬೇಕು, ಹೂವಾಗಬೇಕು. ಹೂ, ಹಣ್ಣು ಬಿಟ್ಟರೆ ಗಿಡದ ಶೋಭೆ ನೋಡಲು ಅಂದವಾಗಿರುತ್ತದೆ.  ಹಾಗೇ ಮಕ್ಕಳು ನಗುವ ಗಿಡಗಳಾಗಿರಬೇಕು. ಗಿಡಮರಗಳಂತೆ ಬೆಳೆಯಬೇಕು. ಸುವಾಸನೆ ಬೀರಬೇಕು ಹಾಗಾ ಗಬೇಕಾದರೆ, ಕಾಲವನ್ನು ಹೊಂದಿಸಿಕೊಳ್ಳಬೇಕು. ಸರಿದ ಕಾಲ ಮತ್ತೂಮ್ಮೆ ದೊರೆಯುವುದಿಲ್ಲ. ನಿಮಗೆ ನೀಡಿರುವ ವಾಚ್‌ನಲ್ಲಿರುವ ಮುಳ್ಳುಗಳು ಎಂದಿಗೂ ಹಿಂದೆ ಓಡುವುದಿಲ್ಲ. ಹಾಗೆ ನಾವುಗಳು ಜೀವನದಲ್ಲಿ ಹಿಂದೋಗದೆ ಮುಂದೆ ಸಾಗಬೇಕು ಎಂದು ಅವರು ಕಿವಿಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌, ಬಾಲಮಂದಿರದಲ್ಲಿರುವ ಮಕ್ಕಳು ನಾನಾ ಕಾರಣಗಳಿಂದ ಇಲ್ಲಿಗೆ ಬಂದು ದಾಖಲಾಗಿರುತ್ತಾರೆ. ಅವರು ಶ್ರದ್ಧೆಯಿಂದ ಅಭ್ಯಾಸ ಮಾಡಿ ಉತ್ತಮ ಜೀವನ ರೂಪಿಸಿಕೊಳ್ಳಬೇಕಿದೆ ಎಂದರು. 

ವಾರ್ತಾಧಿಕಾರಿ ಡಿ.ಅಶೋಕ್‌ಕುಮಾರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾಲ್ಲೂಕು ಸಿಡಿಪಿಓಗಳಾದ
ಮೈತ್ರಾದೇವಿ, ಭಾರತಿ ಬಣಕಾರ್‌, ಶಿವಲಿಂಗಪ್ಪ, ಸದಾನಂದ, ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಶೋಭಾ
ಟಿ.ಆರ್‌. ವೇದಿಕೆಯಲ್ಲಿದ್ದರು. 

ನಿಮಗೆ ನೀಡಿರುವ ವಾಚ್‌ನಲ್ಲಿರುವ ಮುಳ್ಳುಗಳು ಹೇಗೆ ಸದಾ ಚಲಿಸುತ್ತಿರುತ್ತವೆಯೋ ಹಾಗೆಯೇ ನೀವೂ ಸದಾ
ಚಲನಸ್ಥಿತಿಯಲ್ಲಿರಬೇಕು. ಓದಲು, ಜೀವನದಲ್ಲಿ ಏನನ್ನಾದರೂ ಸಾಧಿಸಲು ಚಲಿಸಬೇಕು. ಚಲಿಸದೇ ಒಂದಡೆ ನಿಂತರೆ ಅದು ಸತ್ತಂತೆಯೇ ಸರಿ. ಜೀವನ ಅಂದರೆ ಓಡುವುದು, ನಿಂತರೆ ಜೀವನದಲ್ಲಿ ಜಾಗ ಇಲ್ಲ. ನಾವು ನಿಷ್ಕ್ರಿಯರಾದರೆ ಪ್ರಪಂಚ ನಮ್ಮನ್ನು ಹೊರಹಾಕುತ್ತದೆ. 
 ಡಿ.ಎಸ್‌.ರಮೇಶ್‌, ಜಿಲ್ಲಾಧಿಕಾರಿ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.