ಬೇಡಿಕೆ ಈಡೇರುವವರೆಗೆ ಧರಣಿ
Team Udayavani, Jan 24, 2019, 9:00 AM IST
ಬೀಳಗಿ: ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಕಳೆದ ಏಳು ದಿನಗಳಿಂದ ಧರಣಿ ನಡೆಸುವ ಮೂಲಕ ಪ್ರತಿಭಟಿಸುತ್ತಿದ್ದರೂ ಇದುವರೆಗೆ ನಮ್ಮ ಬೇಡಿಕೆ ಈಡೇರುವ ಸ್ಪಷ್ಟ ಲಕ್ಷಣ ಗೋಚರಿಸುತ್ತಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೆ ಧರಣಿ ಸತ್ಯಾಗ್ರಹದಿಂದ ಹಿಂದೆ ಸರಿಯುವುದಿಲ್ಲ ಎಂದು ಕೈಮಗ್ಗ ನೇಕಾರ ಸಂಘಟನೆಯವರು ತಿಳಿಸಿದ್ದಾರೆ.
ಪಟ್ಟಣದ ಕೆಎಚ್ಡಿಸಿ ಕಚೇರಿ ಎದುರು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕೈಮಗ್ಗ ನೇಕಾರ ಸಂಘಟನೆಯ ನೂರಾರು ಜನ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಬುಧವಾರ ಏಳನೇ ದಿನಕ್ಕೆ ಕಾಲಿಟ್ಟಿದೆ.
ಈ ವೇಳೆ ಮಾತನಾಡಿದ ಪ್ರಮುಖರು, ಧರಣಿ ಸತ್ಯಾಗ್ರಹ ಸ್ಥಳಕ್ಕೆ ಈಗಾಗಲೇ ಸ್ಥಳೀಯ ಶಾಸಕ ಮುರುಗೇಶ ನಿರಾಣಿ ಸೇರಿದಂತೆ ಹಲವಾರು ಜನಪ್ರತಿನಿಧಿಗಳು ಮತ್ತು ಗಣ್ಯರು ಭೇಟಿ ನೀಡಿ ಧರಣಿಗೆ ಬೆಂಬಲ ಸೂಚಿಸುವ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿರುವುದು ಅಭಿನಂದನೀಯ. ನೇಕಾರರ ಈ ದು:ಸ್ಥಿತಿಗೆ ಮೂಲ ಕಾರಣರಾದ ಕೆಎಚ್ಡಿಸಿ ನಿಗಮದ ಎಂಡಿ ಸ್ಥಳಕ್ಕೆ ಆಗಮಿಸಿ ಯಾವುದೇ ಭರವಸೆ ನೀಡದಿರುವುದು ನೋವಾಗಿದೆ. ನೇಕಾರರ ಸಮಸ್ಯೆಗೆ ಕಾರಣರಾದ ನಿರ್ಲಕ್ಷ್ಯ ಧೋರಣೆಯ ಎಂಡಿ ವರ್ಗಾವಣೆಯಾಗಬೇಕು. ನೇಕಾರರಿಗೆ ಬಿಮ್ ಹಾಗೂ ನೂಲು ಪೂರೈಕೆ ಮಾಡಬೇಕು ಮತ್ತು ದುಡಿಮೆಗೆ ತಕ್ಕಂತೆ ಸೂಕ್ತ ವೇತನ ನೀಡಬೇಕು. ಹಾಗೂ ಇದುವರೆಗೆ ಆದ ಹಾನಿಯನ್ನು ಭರಿಸಬೇಕೆಂದು ಪ್ರತಿಭಟನಾ ನಿರತ ನೇಕಾರ ಮುಖಂಡರು ಒತ್ತಾಯಿಸಿದರು.
ಜ. 25ರೊಳಗೆ ನಿಗಮದ ಎಂಡಿ ಅವರು ಸ್ಥಳಕ್ಕಾಗಮಿಸಿ ಸ್ಪಷ್ಟ ಭರವಸೆ ನೀಡದೇ ಹೋದಲ್ಲಿ ಮುಂದಿನ ಹೋರಾಟದ ಸ್ವರೂಪ ಬೇರೆಯಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ನೇಕಾರ ಮುಖಂಡ ದೇವೇಂದ್ರ ಕೋಟಿ, ಶಿವಲಿಂಗಪ್ಪ ಬಾದರದಿನ್ನಿ, ಗಂಗಪ್ಪ ಬಾಡಗಿ, ಶೇಖಪ್ಪ ಕುಂದರಗಿ, ಭಾಗವ್ವ ಮಾದರ, ಇಂದ್ರವ್ವ ಚಲವಾದಿ, ಶಂಕ್ರಪ್ಪ ಕೊಣ್ಣೂರ, ನಾಗಪ್ಪ ಬಾಡಗಿ, ಗೀತಾ ಚಲವಾದಿ, ಮಂಜುಳಾ ಮಾದರ, ಚಂದ್ರಕಲಾ ಚಲವಾದಿ, ಶಂಕ್ರಪ್ಪ ಜಾಡಗೌಡರ, ಶಿವಪ್ಪ ಬಾಳಿಗಿಡದ, ಸುರೇಶ ಕೊಪ್ಪಳ, ಮಲ್ಲವ್ವ ಸಿಂಹಾಸನ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?