ನಕಾರಾತ್ಮಕ ಪ್ರತಿ ಸ್ಪಂದನೆಯೇಕೆ? : ಮಿತವ್ಯಯಕ್ಕೆ ಸಹಕರಿಸಿ


Team Udayavani, Sep 11, 2018, 6:00 AM IST

34.jpg

ರೈತರ ಸಾಲಮನ್ನಾ ಸೇರಿದಂತೆ ಸಮ್ಮಿಶ್ರ ಸರಕಾರದ ಎರಡೂ ಪಕ್ಷಗಳು ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸಬೇಕಾದರೆ ಅಪಾರ ಪ್ರಮಾಣದ ಸಂಪನ್ಮೂಲ ಅಗತ್ಯವಿರುವುದರಿಂದ ಸರಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸರಕಾರಿ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಆರ್ಥಿಕ ಮಿತವ್ಯಯ ಕ್ರಮಗಳಿಗೆ ಕರೆ ನೀಡಿದ್ದರು. ಆದರೆ ಅವರ ಸಹೋದ್ಯೋಗಿಗಳಿಂದಲೇ ಇದಕ್ಕೆ ನಕರಾತ್ಮಕವಾದ ಪ್ರತಿಸ್ಪಂದನ ವ್ಯಕ್ತವಾಗುತ್ತಿರುವುದು ಬೇಸರದ ಸಂಗತಿ. 

ಸಾಲಮನ್ನಾಕ್ಕಾಗಿಯೇ ಸುಮಾರು 50,000 ಕೋ. ರೂ. ಅಗತ್ಯವಿದೆ. ಇದರ ಜತೆಗೆ ಇತರ ಖರ್ಚು ವೆಚ್ಚಗಳೂ ಇದ್ದು ಇವುಗಳನ್ನೆಲ್ಲ ಪೂರೈಸುವಷ್ಟು ಹಣ ಖಜಾನೆಯಲ್ಲಿ ಇಲ್ಲ. ಅಲ್ಲದೆ ಈಗಾಗಲೇ ರಾಜ್ಯದ ಮೇಲೆ ಭಾರೀ ಪ್ರಮಾಣದ ಸಾಲದ ಹೊರೆ ಇರುವುದರಿಂದ ಹೊಸ ಸಾಲ ಪಡೆಯುವುದು ಕೂಡಾ ಅಪಾಯಕಾರಿ. ಈ ಹಿನ್ನೆಲೆಯಲ್ಲಿ ಮಿತವ್ಯಯ ಸಾಧಿಸಿ ಸರಕಾರಿ ಖಜಾನೆ ಮೇಲಿನ ಹೊರೆಯನ್ನು ತುಸುವಾದರೂ ತಗ್ಗಿಸುವುದು ಅಪೇಕ್ಷಣೀಯ. ಆದರೆ ಈಗ ಮುಖ್ಯಮಂತ್ರಿ ಮತ್ತು ವಿಧಾನ ಸಭಾಧ್ಯಕ್ಷರನ್ನು ಹೊರತುಪಡಿಸಿದರೆ ಬೇರೆ ಯಾರೂ ಮಿತವ್ಯಯ ಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣಿಸುತ್ತಿಲ್ಲ.

ಮಿತವ್ಯಯ ವಿಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅನುಸರಿಸಿದ ನಡೆ ಉಳಿದವರಿಗೆ ಮೇಲ್ಪಂಕ್ತಿಯಾಗುವಂತಿದೆ. ಅವರು ಮುಖ್ಯಮಂತ್ರಿಯ ವಾಸಕ್ಕೆ ಇರುವ ಸರಕಾರಿ ಬಂಗಲೆಗೆ ಹೋಗದೆ ಸ್ವಂತ ಮನೆಯಲ್ಲೇ ವಾಸವಾಗಿದ್ದಾರೆ ಮಾತ್ರವಲ್ಲದೆ ಓಡಾಟಕ್ಕೂ 
ಸ್ವಂತದ ಕಾರನ್ನೇ ಬಳಸುತ್ತಿದ್ದಾರೆ. ಇದು ಸರಕಾರಿ ಕಾರಿಗಿಂತ ದುಬಾರಿ ಬೆಲೆಯದ್ದು ಮತ್ತು ನಿರ್ವಹಣೆಯೂ ಅಧಿಕ ಎಂಬ ಟೀಕೆಗಳಿದ್ದರೂ ಉಳಿದ ಮುಖ್ಯಮಂತ್ರಿಗಳಂತೆ ಅಧಿಕಾರ ವಹಿಸಿಕೊಂಡ ಕೂಡಲೇ ಹೊಸ ಕಾರು ಖರೀದಿಸಲು ಮುಂದಾಗದೆ ಉಳಿದವರಿಗೆ ಮಾದರಿಯಾಗಿದ್ದಾರೆ. ಅಂತೆಯೇ ದಿಲ್ಲಿ ಮತ್ತಿತರೆಡೆಗಿನ ಪ್ರಯಾಣಕ್ಕೂ ಏರ್‌ ಇಂಡಿಯಾ ವಿಮಾನಗಳನ್ನೇ ಬಳಸುತ್ತಿದ್ದಾರೆ. ತೀರಾ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಖಾಸಗಿ ವಿಮಾನ ಏರುತ್ತಿದ್ದಾರೆ. ಜತೆಗೆ ವಿಧಾನಸೌಧದಲ್ಲಿದ್ದ ಕೆಲವು ಹೊರಗುತ್ತಿಗೆ ಸಿಬಂದಿಗಳನ್ನೂ ಕಡಿತಗೊಳಿಸಿದ್ದಾರೆ. 

ಹೊಸ ಸರಕಾರ ಬಂದ ಕೂಡಲೇ ಕಚೇರಿ ಮತ್ತು ಸರಕಾರಿ ಬಂಗಲೆಗಳ ನವೀಕರಣ, ಹೊಸ ಪೀಠೊಪಕರಣಗಳ ಖರೀದಿ ಎಂದೆಲ್ಲ ಸರಕಾರಕ್ಕೆ ನೂರಾರು ಕೋಟಿ ಖರ್ಚು ಬರುವುದು ಸಾಮಾನ್ಯ. ಆದರೆ ಈ ಸಲ ಕುಮಾರಸ್ವಾಮಿಯವರ ಬಿಗು ನಿಲುವಿನಿಂದಾಗಿ ಇವುಗಳಿಗೆಲ್ಲ ಕಡಿವಾಣ ಬಿದ್ದಿದೆ. ಅಂತೆಯೇ ಎಲ್ಲ ಇಲಾಖೆಗಳಿಗೂ ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲು ಸೂಚನೆ ಹೋಗಿದೆ. ಹೊಸ ವಾಹನ ಖರೀದಿಗೂ ಮುಖ್ಯಮಂತ್ರಿಗಳು ಬ್ರೇಕ್‌ ಹಾಕಿದ್ದಾರೆ. ಇದು ಸರಕಾರದೊಳಗಿರುವ ಕೆಲವರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಸರಕಾರ ಅಸ್ತಿತ್ವಕ್ಕೆ ಬಂದು 100 ದಿನಗಳಾಗಿದ್ದರೂ ಇನ್ನೂ ಮಿತವ್ಯಯದ ಕ್ರಮಗಳು ಜಾರಿಗೊಳ್ಳುತ್ತಿರುವ ಲಕ್ಷಣಗಳು ಕಾಣಿಸುತ್ತಿಲ್ಲ. 

ಈ ನಡುವೆ ಶಿಕ್ಷಣ ಇಲಾಖೆ ಮುಖ್ಯಮಂತ್ರಿಗಳ ಸೂಚನೆಯನ್ನು ಲೆಕ್ಕಿಸದೆ 116 ಹೊಸ ಕಾರುಗಳನ್ನು ಖರೀದಿಸಲು ಮುಂದಾಗಿರುವುದು ತಪ್ಪು ಸಂದೇಶವನ್ನು ರವಾನಿಸುವ ನಡೆ. ಈ ಪೈಕಿ 28 ಕಾರುಗಳ ಖರೀದಿಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 

ಹೊಸ ಕಾರು ಖರೀದಿಗೆ ಕನಿಷ್ಠ 10 ಕೋ. ರೂ. ಖರ್ಚಾಗಲಿದ್ದು, ರಾಜ್ಯದ ಆರ್ಥಿಕ ಪರಿಸ್ಥಿತಿ ತೀರಾ ನಾಜೂಕಾಗಿರುವ ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಈ ವೆಚ್ಚವನ್ನು ತಡೆದು ಉಳಿದ ಇಲಾಖೆಗಳಿಗೆ ಮಾದರಿಯಾಗಬಹುದಿತ್ತು. ಒಂದೆಡೆ ಶಿಕ್ಷಕರು ಮತ್ತು ಉಪನ್ಯಾಸಕರು ಸರಿಯಾದ ಸಮಯಕ್ಕೆ ವೇತನ ಸಿಗದೆ ಸಂಕಟ ಅನುಭವಿಸುತ್ತಿರುವಾಗ ಶಿಕ್ಷಣ ಇಲಾಖೆ ಹೊಸ ಕಾರುಗಳನ್ನು ಖರೀದಿಸಲು ಹೊರಟಿರುವುದು ವಿಪರ್ಯಾಸದ ನಡೆಯಂತೆ ಕಾಣಿಸುತ್ತದೆ. 

ಸಾಲಮನ್ನಾದ ಹೊರೆ ಒಂದೆಡೆಯಾದರೆ ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಉಂಟಾಗಿರುವ ನಾಶನಷ್ಟಗಳಿಗೆ ಹಾಗೂ ಕೆಲವು ಜಿಲ್ಲೆಗಳಲ್ಲಿ ಅನಾವೃಷ್ಟಿಯಿಂದಾಗಿ ಕಾಣಿಸಿಕೊಂಡಿರುವ ಬರಕ್ಕೆ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಹೊಣೆಗಾರಿಕೆಯೂ ಇದೆ. ಈ ಎಲ್ಲ ಕಾರ್ಯಗಳಿಗೆ ಭಾರೀ ಪ್ರಮಾಣದ ಹಣದ ಅಗತ್ಯವಿರುವುದರಿಂದ ಸರಕಾರಿ ಖರ್ಚು ವೆಚ್ಚಗಳಲ್ಲಿ ತುಸು ಬಿಗುಹಿಡಿತ ಸಾಧಿಸುವುದು ಅನಿವಾರ್ಯವೂ ಹೌದು. 

ಇದಕ್ಕೆ ವ್ಯತಿರಿಕ್ತವಾಗಿ ಕೆಲವು ಸಚಿವರು ಬಂಗಲೆ ನವೀಕರಣ, ಹೊಸ ವಾಹನ ಖರೀದಿ ಮತ್ತಿತರ ಪ್ರಸ್ತಾವನೆಗಳನ್ನು ಸರಕಾರಕ್ಕೆ ರವಾನಿಸಿ ಒತ್ತಡ ಹೇರುತ್ತಿರುವುದು ಸರಿಯಲ್ಲ. ಮುಖ್ಯಮಂತ್ರಿ ಕೈಗೊಂಡಿರುವ ಮಿತವ್ಯಯ ಕ್ರಮಗಳಲ್ಲಿ ಕೈಜೋಡಿಸುವ ಮೂಲಕ ರಾಜ್ಯದ ಆರ್ಥಿಕ ಸ್ಥಿತಿಯನ್ನು ಹಳಿಗೆ ತರುವ ಜವಾಬ್ದಾರಿ ಸರಕಾರದಲ್ಲಿರುವ ಎಲ್ಲರ ಮೇಲೂ ಇದೆ. ಹಣಕಾಸು ಖಾತೆ ಮುಖ್ಯಮಂತ್ರಿ ಕೈಯಲ್ಲಿ ಇದೆ ಎಂದ ಮಾತ್ರಕ್ಕೆ ಆರ್ಥಿಕ ಸ್ಥಿತಿಯನ್ನು ಸರಿತೂಗಿಸಿಕೊಂಡು ಹೋಗುವುದು ಅವರೊಬ್ಬರದ್ದೇ ಜವಾಬ್ದಾರಿ ಎಂಬ ಮನಸ್ಥಿತಿಯಿಂದ ಹೊರಬರಬೇಕು.

ಟಾಪ್ ನ್ಯೂಸ್

4-manjeshwara-1

Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Sirsi: ಕಲಿತ ಶಾಲೆಯಲ್ಲಿ ಮತದಾನ ಮಾಡಿದ ಮಾಜಿ ಸ್ಪೀಕರ್ ಕಾಗೇರಿ!

Sirsi: ಕಲಿತ ಶಾಲೆಯಲ್ಲಿ ಮತದಾನ ಮಾಡಿದ ಮಾಜಿ ಸ್ಪೀಕರ್ ಕಾಗೇರಿ!

3-hunsur

Hunsur: ಆನೆ ನಡೆದದ್ದೇ ದಾರಿ! ಆನೆ ದಾಳಿಗೆ ಬೈಕ್ ಜಖಂ, ಕಾಂಪೌಂಡ್ ಗೆ ಹಾನಿ

2-kushtagi

Polls:ಮತದಾನ ಮಾಡಲು ಬೈಕ್ ನಲ್ಲಿ ಬರುತ್ತಿದ್ದ ಯುವಕನಿಗೆ ಅಪರಿಚಿತ ವಾಹನ ಡಿಕ್ಕಿ; ಸವಾರ ಸಾವು

1-bantwala

Crime: ಮಂಗಳೂರಿನ ಅವಿವಾಹಿತ ಯುವಕ ಬಿಸಿರೋಡಿನಲ್ಲಿ ನೇಣುಬಿಗಿದು ಆತ್ಮಹತ್ಯೆ

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

ಮತದಾನಕ್ಕೆ ಬಿಸಿಲು ಅಡ್ಡಿಯಾಗದಿರಲಿ

Editorial:ಮಣಿಪುರ- ಒಡೆದ ಮನಸು‌ ಬೆಸೆಯುವ ಕಾರ್ಯವಾಗಲಿ

Editorial: ಮಣಿಪುರ- ಒಡೆದ ಮನಸು‌ ಬೆಸೆಯುವ ಕಾರ್ಯವಾಗಲಿ

Economy

ಉತ್ಪಾದನ ವಲಯದಲ್ಲಿ ಜಿಗಿತ: ಆರ್ಥಿಕತೆಗೆ ಮತ್ತಷ್ಟು ಬಲ

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

4-manjeshwara-1

Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

21

Rachana inder: ಮರ್ಡರ್‌ ಮಿಸ್ಟರಿ 4 ಎನ್‌ 6

Sandalwood: ರಿಲಯನ್ಸ್‌ ತೆಕ್ಕೆಗೆ ʼಜಡ್ಜ್ ಮೆಂಟ್‌ʼ

Sandalwood: ರಿಲಯನ್ಸ್‌ ತೆಕ್ಕೆಗೆ ʼಜಡ್ಜ್ ಮೆಂಟ್‌ʼ

Sirsi: ಕಲಿತ ಶಾಲೆಯಲ್ಲಿ ಮತದಾನ ಮಾಡಿದ ಮಾಜಿ ಸ್ಪೀಕರ್ ಕಾಗೇರಿ!

Sirsi: ಕಲಿತ ಶಾಲೆಯಲ್ಲಿ ಮತದಾನ ಮಾಡಿದ ಮಾಜಿ ಸ್ಪೀಕರ್ ಕಾಗೇರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.