ಶ್ರೀಗಂಧ ಕಳವು ತಡೆಗೆ ಬಂದಿದೆ ಮೈಕ್ರೋಚಿಪ್‌!


Team Udayavani, Aug 9, 2018, 6:00 AM IST

sandalwood-tree.jpg

ಧಾರವಾಡ: ಕರುನಾಡಿನ ಹೆಸರಿನೊಂದಿಗೆ ಥಳಕು ಹಾಕಿಕೊಂಡಿರುವ ಗಂಧದ ಘಮ (ಶ್ರೀಗಂಧದ ಗಿಡ,ಮರ) ಈಗ ರಾಜ್ಯದ ಯಾವ ಜಿಲ್ಲೆಯಲ್ಲೂ ಉಳಿ ದುಕೊಂಡಿಲ್ಲ. ಹೀಗಾಗಿ ಮತ್ತೆ ಗಂಧದ ಉತ್ಪಾದನೆ ಹೆಚ್ಚಿಸಲು ನೂತನ ಸಮ್ಮಿಶ್ರ ಸರ್ಕಾರ ಸಜ್ಜಾಗಿದ್ದು, ತಂತ್ರಜ್ಞಾನ ಬಳಸಿಕೊಂಡು ರೈತರು ಗಂಧ ಬೆಳೆಯುವಂತೆ ಮಾಡಲು ಹೊಸ ಯೋಜನೆ ರೂಪಿಸುತ್ತಿದೆ.

ಹಾಡಹಗಲೇ ಮನೆಯಂಗಳದ ಗಂಧದ ಮರವನ್ನೇ ಕದ್ದುಕೊಂಡು ಹೋಗುವ ಈ ದಿನಗಳಲ್ಲಿ ರೈತರ ಹೊಲದಲ್ಲಿ ಗಂಧ ಬೆಳೆಸುವ ಯತ್ನವನ್ನು ಸರ್ಕಾರ ಮಾಡುತ್ತಿದೆ. ಅದಕ್ಕಾಗಿ ಪ್ರತಿ ಗಂಧದ ಗಿಡಗಳಲ್ಲಿಯೂ ಮೈಕ್ರೋಚಿಪ್‌ ಮತ್ತು ಗಿಡಕ್ಕೆ ಕೊಡಲಿ ಏಟು ಬೀಳುತ್ತಿದ್ದಂತೆಯೇ ಅದನ್ನು ಬೆಳೆದವರಿಗೆ ಸಿಗ್ನಲ್‌ ರವಾನಿಸುವ ತಂತ್ರಜ್ಞಾನವನ್ನು ಇನ್‌ ಸ್ಟಿಟ್ಯೂಟ್‌ ಆಫ್‌ ವುಡ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಸಂಸ್ಥೆ ಸಲಹೆ ಮೇರೆಗೆ ಶೀಘ್ರವೇ ರೈತರ ಹೊಲಕ್ಕೆ ಪೂರೈಸಲು ಸಜ್ಜಾಗಿದೆ.

1950ರಲ್ಲಿ ಪ್ರತಿ ಚದರ ಕಿ.ಮೀ.ಕಾಡಿನಲ್ಲಿ ಕನಿಷ್ಠ 300-400 ಗಂಧದ ಗಿಡಗಳಿದ್ದವು. ಕಳ್ಳರ ಕಾಟದಿಂದಾಗಿ ಇಂದು ಪ್ರತಿ 4 ಚ.ಕಿ.ಮೀ. ಕಾಡಿನಲ್ಲಿ ಒಂದು ಶ್ರೀಗಂಧದ ಗಿಡವಿದೆಯಷ್ಟೇ. ಹೀಗಾಗಿ ಸರ್ಕಾರ ಶ್ರೀಗಂಧವನ್ನು ಬೆಳೆಸಲು ಉತ್ತೇಜನ ನೀಡುತ್ತಿದೆ. ರೈತರಿಗೆ ಮೈಕ್ರೋಚಿಪ್‌, ಸಿಗ್ನಲ್‌ ಚಿಪ್‌, ಡಬಲ್‌ಬಾರಲ್‌ ಗನ್‌ ಮತ್ತು ಅಗತ್ಯ ಬಿದ್ದರೆ ಹತ್ತು ವರ್ಷದ ನಂತರ ಸಿ.ಸಿ. ಕ್ಯಾಮರಾಗಳನ್ನು ಪೂರೈಸುವ ಚಿಂತನೆ ನಡೆಸಿದೆ.

ಮೈಕ್ರೋಚಿಪ್‌ ಅಳವಡಿಕೆ: ಧಾರವಾಡ, ಬೆಳಗಾವಿ, ಹಾವೇರಿ, ಉತ್ತರ ಕನ್ನಡ, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳ ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ಪ್ರಸಕ್ತ ವರ್ಷ 1.3 ಲಕ್ಷ ಗಂಧದ ಸಸಿಗಳನ್ನು ಬೆಳೆಸಲಾಗಿತ್ತು. ಆದರೆ ಈ ಪೈಕಿ ಅರ್ಧದಷ್ಟು ಸಸಿಗಳು ಕೂಡ ರೈತರ ಹೊಲ ಸೇರಿಲ್ಲ. ಇದನ್ನು ಅರಿತ ಅರಣ್ಯ ಇಲಾ ಖೆಯು ಆಯಾ ಜಿಲ್ಲಾ ಕೇಂದ್ರಗಳಿಗೆ
ರೈತರನ್ನು ಕರೆಯಿಸಿಕೊಂಡು ಅವರಿಗೆ ಗಂಧ ಬೆಳೆದರೆ ಆಗುವ ಉಪಯೋಗದ ಕುರಿತು ಮನವರಿಕೆ ಮಾಡುತ್ತಿದೆ. ಗಂಧದ ಬೆಳೆಯನ್ನು ಕಳ್ಳರಿಂದ ರಕ್ಷಿಸಿಕೊಳ್ಳಲು ಉಚಿತವಾಗಿ ಮೈಕ್ರೋಚಿಪ್‌ ನೀಡುವ ಕುರಿತು ಕೂಡ ಅಭಯ ನೀಡುತ್ತಿದೆ.

ಚಿಪ್‌ ಮತ್ತು ಸಿಗ್ನಲ್‌ ತಂತ್ರಜ್ಞಾನ: ಎಳೆಯ ಗಂಧದ ಗಿಡದಲ್ಲಿ ಮೈಕ್ರೋಚಿಪ್‌ (ಒಂದು ಇಂಚು ಚದರಳತೆ ಯದ್ದು)ಅನ್ನು ತೊಗಟೆ ಕಿತ್ತು ಅದರಡಿ ಇರಿಸಲಾಗುತ್ತದೆ. ಕೆಲವು ತಿಂಗಳಲ್ಲಿ ಅದರ ಸುತ್ತಲು ಮತ್ತೆ ಗಿಡದ ತೊಗಟೆ ಬೆಳೆದು ಗಂಧದ ಒಡಲು ಸೇರುತ್ತದೆ. ಆ ಬಳಿಕ ಆ ಗಿಡವನ್ನು ಯಾರೇ ಕತ್ತರಿಸಿಕೊಂಡು ಹೋದರೂ ಅದು ಎಲ್ಲಿದೆ ಎನ್ನುವುದನ್ನು ಸಿಗ್ನಲ್‌ ಮೂಲಕ ಪತ್ತೆ ಹಚ್ಚಬಹುದು. ಕಳ್ಳರನ್ನು ಸುಲಭವಾಗಿ ಹಿಡಿಯಬಹುದು.

ಆದರೆ ಇಲ್ಲಿ ಗಂಧದ ಗಿಡವನ್ನು ಕಡಿಯುವಾಗಲೇ ರಕ್ಷಣೆ ಮಾಡುವುದು ಅಸಾಧ್ಯ. ಅದಕ್ಕಾಗಿ ಇನ್‌ಸ್ಟಿಟ್ಯೂಟ್‌ ಆಫ್‌ ವುಡ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಸಂಸ್ಥೆಯು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗಂಧದ ಗಿಡಕ್ಕೆ ಕೊಡಲಿ ಏಟು ಬೀಳುತ್ತಿದ್ದಂತೆಯೇ ಅದರ ಮಾಲೀಕರಿಗೆ ಸಂದೇಶ ನೀಡುವ ತಂತ್ರಜ್ಞಾನ ವೃದಿಟಛಿಪಡಿಸುತ್ತಿದೆ. ಈ ಕುರಿತು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ಭಾರತೀಯ ವಿಜ್ಞಾನ ಸಂಸ್ಥೆ ಯೊಂದಿಗೂ ಚರ್ಚಿಸಿದ್ದು, ಕೆಲವೇ ತಿಂಗಳಲ್ಲಿ ಅತ್ಯಂತ ಅಗ್ಗದ ದರದಲ್ಲಿ ಇದನ್ನು ಗಂಧ ಬೆಳೆಯುವ ರೈತರಿಗೆ ತಲುಪಿಸಲು ಚಿಂತನೆ ನಡೆಸಿದ್ದಾರೆ.

ಗಂಧಗ್ರಾಮಕ್ಕೆ ಚಿಂತನೆ: ಇನ್ನೊಂದೆಡೆ ರೈತ ಸಮೂಹಕ್ಕೆ ಯಥೇ ಚ್ಚವಾಗಿ ಅಂದರೆ, ಇಡೀ ಗ್ರಾಮವನ್ನೇ “ಶ್ರೀಗಂಧ ಗ್ರಾಮ’ ಎಂದು ಘೋಷಣೆ ಮಾಡಿ ಎಲ್ಲರ ಹೊಲ, ಮನೆ, ಖಾಲಿ ಜಾಗದಲ್ಲಿಯೂ ಶ್ರೀಗಂಧ ಬೆಳೆಸುವ ಹೊಸ ಪ್ರಯೋಗ ಉತ್ತಮ ಎನ್ನುವ ಚಿಂತನೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳದ್ದು. ಹಿಂದೆ ಮಲೆನಾಡಿನಲ್ಲಿ ತೇಗದ ನಾಟಾ ಕಳುವು ತಡೆಯುವುದು ಕಷ್ಟವಾಗಿದ್ದಾಗ ಅರಣ್ಯ ಇಲಾಖೆ, ರೈತರ ಹೊಲದಲ್ಲಿ ಯಥೇಚ್ಚವಾಗಿ ತೇಗ ಬೆಳೆಸಿತ್ತು. ಇದೇ
ಮಾದರಿಯನ್ನು ಶ್ರೀಗಂಧಕ್ಕೆ ಅಳವಡಿಸಲು ಅರಣ್ಯ ಇಲಾಖೆ ಪ್ರಯತ್ನ ನಡೆಸಿದೆ.

ಪಶ್ಚಿಮಘಟ್ಟ ಪ್ರದೇಶದಲ್ಲಿ ಬೆಳೆಯುವಷ್ಟು ಗುಣಮಟ್ಟದ ಶ್ರೀಗಂಧ ಜಗತ್ತಿನ ಯಾವ ಭಾಗದಲ್ಲಿಯೂ ಬೆಳೆಯಲು ಸಾಧ್ಯವಿಲ್ಲ. ಹೀಗಾಗಿ ಗಂಧ ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ದೇವೆ.
– ಮಂಜುನಾಥ, ಸಿಸಿಎಫ್‌, ಧಾರವಾಡ ವಿಭಾಗ

ಶ್ರೀಗಂಧ ಬೆಳೆದ ನಂತರ ಅದನ್ನು ಕಾಯುವುದು ಕಷ್ಟ. ಕದ್ದರೆ ಅದಕ್ಕೆ ವಿಮೆ ಕೊಡಿಸಬೇಕು. ಇಲ್ಲವೇ ಅದನ್ನು ಸರ್ಕಾರವೇ ಕಾಯುವ ವ್ಯವಸ್ಥೆಯಾಗಬೇಕು.
– ಈರಣ್ಣ ಕಾಳೆ, ರೈತ

– ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.