ಕೆರೆ-ಕಟ್ಟೆಗಳು ಖಾಲಿ.. ಖಾಲಿ…
Team Udayavani, Feb 23, 2019, 11:36 AM IST
ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ತಾಲೂಕಿನ ಹಲವು ಕೆರೆಗಳು ಸಂಪೂರ್ಣ ಬತ್ತಿ ಬರಿದಾಗಿವೆ. ಗಜೇಂದ್ರಗಡದಾದ್ಯಂತ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದೆ. ಇದು ರೈತಾಪಿ ವಲಯದಲ್ಲಿ ತಳಮಳ ಮೂಡಿಸಿದೆ.
ಗಜೇಂದ್ರಗಡ: ಸಮರ್ಪಕ ಮಳೆ ಬಾರದ ಹಿನ್ನೆಲೆ ತಾಲೂಕಿನ ಹಲವು ಗ್ರಾಮಗಳ ಜನತೆಯ ಜಲ ಜೀವನಾಡಿಯಾಗಿರುವ ರೈತ ಕಾಯಕ ಕೆರೆಗಳು ಸಂಪೂರ್ಣ ಬತ್ತಿ ಬರಿದಾಗಿವೆ. ತಾಲೂಕಿನಾದ್ಯಾಂತ ಹಿಂದೆಂದು ಕಂಡರಿಯದ ರೀತಿಯಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದೆ. ಕೆರೆ-ಕಟ್ಟೆಗಳು ಹಾಗೂ ಹಳ್ಳ-ಕೊಳ್ಳಗಳು ನೀರಿಲ್ಲದೇ ಒಣಗಿ ನಿಂತಿರುವ ದೃಶ್ಯ ಎಲ್ಲೆಡೆ ಕಂಡುಬರುತ್ತಿದೆ. ಬಯಲುಸೀಮೆ ನಾಡಿನಲ್ಲಿ ಆವರಿಸಿರುವ ಬರದ ಕರಿನೆರಳಿನಿಂದಾಗಿ ಕೆರೆಗಳು ಕಾಲಗರ್ಭ ಸೇರುವ ಹಂತ ತಲುಪಿರುವುದು ರೈತಾಪಿ ವಲಯದಲ್ಲಿ ತಳಮಳ ಮೂಡಿಸಿದೆ.
ಸಮೀಪದ ಬೆಣಚಮಟ್ಟಿ, ನಾಗರಸಕೊಪ್ಪ, ಜಿಗೇರಿ, ಕುಂಟೋಜಿ, ನಾಗೇಂದ್ರಗಡ, ದಿಂಡೂರು ಗ್ರಾಮ ಸೇರಿ ತಾಲೂಕಿನಲ್ಲಿರುವ ರೈತ ಕಾಯಕ ಕೆರೆಗಳು ಬತ್ತಿವೆ. ಈ ಕೆರೆಗಳು ಸುತ್ತಲಿನ ಸಾವಿರಾರು ಎಕರೆ ಹೊಲಗಳಿಗೆ ಜೀವನಾಡಿಯಾಗಿವೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಕೆರೆಗಳಲ್ಲಿ ನೀರು ಸಂಗ್ರಹವಾಗಿಲ್ಲ. ಇನ್ನು ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿ ಕುಡಿಯುವ ನೀರಿಗಾಗಿ ನಿತ್ಯ ಪರದಾಡುವಂತಾಗಿದೆ. ಇದರಿಂದ ಜಾನುವಾರುಗಳ ಸ್ಥಿತಿಯಂತೂ ಹೇಳತೀರದು. ಅಲ್ಲದೇ ಕುರಿ-ಮೇಕೆಗಳು ನೀರಿಗಾಗಿ ತೋಟಗಳಲ್ಲಿರುವ ಪಂಪ್ಸೆಟ್ ಬಳಿ ನಿರ್ಮಿಸಿ ನೀರಿನ ತೊಟ್ಟಿಗಳನ್ನು ಹುಡುಕಬೇಕಿದೆ.
ದೊಡ್ಡಮೇಟಿ ಕನಸಿನ ಕೆರೆ: ತಲಾ ತಲಾಂತರಗಳಿಂದಲೂ ಮಳೆ ಆಶ್ರಿತ ಬೆಸಾಯವನ್ನೇ ಅವಲಂಬಿಸಿ ಸಂಕಷ್ಟದ ಬದುಕನ್ನು ಸಾಗಿಸುತ್ತಿರುವ ಈ ಭಾಗದ ರೈತ ಸಮುದಾಯದ ಕೃಷಿ ಶ್ರೀಮಂತಗೊಳಿಸಬೇಕೆಂದು ಮಹತ್ವಾಕಾಂಕ್ಷೆ ಹೊಂದಿದ್ದ ಅಂದಿನ ಶಾಸಕ ದಿ| ಅಂದಾನಪ್ಪ ದೊಡ್ಡಮೇಟಿ 1970ರ ದಶಕದಲ್ಲಿ ಸಣ್ಣ ನಿರಾವರಿ ಇಲಾಖೆ ವತಿಯಿಂದ ಸಮೀಪದ ನಾಗರಸಕೊಪ್ಪ, ಜಿಗೇರಿ, ಬೆಣಸಮಟ್ಟಿ, ಕುಂಟೊಜಿ, ನಾಗೇಂದ್ರಗಡ ಪಾರ್ವತಿಕೊಳ್ಳ, ದಿಂಡೂರ ಸೇರಿ ತಾಲೂಕಿನಲ್ಲಿ ಹಲವಾರು ಬೃಹತ್ ಕೆರೆಗಳನ್ನು ನಿರ್ಮಿಸಿದ್ದರು. ಇದರಿಂದ 80 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಭೂ ಪ್ರದೇಶ ನೀರಾವರಿಯಿಂದ ಕಂಗೊಳಿಸುತ್ತಿತ್ತು. ಆದರಿಂದ ಮಳೆಯ ಅಭಾವದಿಂದ ರೈತ ಕಾಯಕ ಕೆರೆಗಳು ಬರಿದಾಗಿವೆ.
ರೈತ ಕಾಯಕ ಕೆರೆಗಳ ವಿಸ್ತೀರ್ಣ : ಜಿಗೇರಿ ಕೆರೆ 151 ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು, 22.41 ಎಂಸಿಎಫ್ (ಮಿಲಿಯನ್ ಕ್ಯೂಬಿಕ್ ಫೀಟ್) ನೀರು ಸಂಗ್ರಹ ಸಾಮರ್ಥ್ಯ ಜೊತೆ 34.80 ಹೆಕ್ಟೇರ್ ಹಿನ್ನೀರ ಸಂಗ್ರಹ ಸಾಮರ್ಥ್ಯ ಹೊಂದಿದೆ. ನಾಗೇಂದ್ರಗಡ ಕೆರೆ 101 ಹೆಕ್ಟೇರ್ ವಿಸ್ತೀರ್ಣವಿದ್ದು, 12.83 ಎಂ.ಸಿ.ಎಫ್ ನೀರು ಸಂಗ್ರಹ ಸಾಮರ್ಥ್ಯ ಮತ್ತು 54.83 ಹಿನ್ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ನಾಗರಸಕೊಪ್ಪ ಕೆರೆ 254 ಹೆಕ್ಟೇರ್ ವಿಸ್ತೀರ್ಣವಿದ್ದು, 18.37 ಎಂಸಿಎಫ್ ನೀರು ಸಂಗ್ರಹ ಸಾಮರ್ಥ್ಯ, 28.02 ಹೆಕ್ಟೇರ್ ಹಿನ್ನೀರು ಸಾಮರ್ಥ್ಯ ಹೊಂದಿದೆ. ಪಾರ್ವತಿಕೊಳ್ಳ ಕೆರೆ-93 ಹೆಕ್ಟೇರ್ ವಿಸ್ತೀರ್ಣವಿದ್ದು, 11.50 ಎಂ.ಸಿ.ಎಫ್ ನೀರು ಸಂಗ್ರಹ ಸಾಮರ್ಥ್ಯ ಹಾಗೂ 21.63 ಹೆಕ್ಟೇರ್ ಹಿನ್ನೀರು ಸಂಗ್ರಹ ಸಾಮರ್ಥ್ಯವಿದೆ.
ಬೆಣಚಮಟ್ಟಿ ಕೆರೆ 174 ಹೆಕ್ಟೇರ್ ವಿಸ್ತೀರ್ಣವಿದ್ದು, 10.11 ಎಂ.ಸಿ.ಎಫ್ ನೀರು ಸಂಗ್ರಹ ಸಾಮರ್ಥ್ಯ ಮತ್ತು 22 ಹೆಕ್ಟೇರ್ ಹಿನ್ನೀರು ಸಾಮರ್ಥ್ಯ ಹೊಂದಿದೆ. ಇಂತಹ ಬೃಹತ್ ಪ್ರಮಾಣದಲ್ಲಿ ನೀರು ಸಂಗ್ರಹ ಮತ್ತು ಹಿನ್ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆರೆಗಳು ಇಂದು ಬತ್ತಿ ಬರಿದಾಗಿ ಕಾಲಗರ್ಭ ಸೇರುವ ಹಂತಕ್ಕೆ ತಲುಪಿವೆ.
ಕಳೆದ ನಾಲ್ಕಾರು ವರ್ಷದಿಂದ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಳೆ ಆಗದ ಹಿನ್ನೆಲೆಯಲ್ಲಿ ಕೆರೆಗಳು ಸಂಪೂರ್ಣವಾಗಿ ಬತ್ತಿವೆ. ಜೊತೆಗೆ ಬಿಸಿಲಿನ ಬೇಗೆಗೆ ಜಮೀನಿನಲ್ಲಿ ಕೊರೆಯಿಸಿದ ಬೋರ್ವೆಲ್ ನಲ್ಲಿಯೂ ನೀರಿನ ಸಾಂದ್ರತೆ ಕ್ಷೀಣಿಸುತ್ತಿದೆ. ಹೀಗೆ ಮುಂದುವರೆದರೆ ಹನಿ ನೀರಿಗೂ ಪರದಾಡುವುದರಲ್ಲಿ ಸಂದೇಹವೇ ಇಲ್ಲ.
ಬಸಪ್ಪ ಕಲ್ಲಿಗನೂರ, ರೈತ
ಕೃಷ್ಣಾ ಬಿಸ್ಕಿಂನ ವಿದ್ಯುತ್ತಿಕರಣ ಕಾಮಗಾರಿ ಈಗಾಗಲೇ ಮುಗಿಯುವ ಹಂತದಲ್ಲಿದೆ. ಅಲ್ಲಿಂದ ಹರಿ ಬಿಡುವ ನೀರು ಹೆಚ್ಚುವರಿಯಾಗಿ ಕಲಾಲಬಂಡಿಗೆ ಬರುತ್ತದೆ. ಆ ನೀರನ್ನು ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಭಾಗದ ಕೆರೆಗಳಿಗೆ ತುಂಬಿಸುವ ಕಾರ್ಯಕ್ಕೆ ಜನಪ್ರತಿನಿಧಿಗಳು ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಯೋಜನೆ ರೂಪಿಸಲು ಮುಂದಾಗದಿದ್ದರೆ ಉಗ್ರ ಹೋರಾಟ ಮಾಡಲಾಗುವುದು.
ಎಂ.ಎಸ್. ಹಡಪದ, ಸಿಪಿಐ(ಎಂ) ಮುಖಂಡ
ಡಿ.ಜಿ. ಮೋಮಿನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ