ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ
Team Udayavani, Feb 10, 2018, 12:37 PM IST
ಅಫಜಲಪುರ: ಸರ್ಕಾರ ವಸತಿ ನಿಲಯಗಳಲ್ಲಿನ ಮಕ್ಕಳಿಗೆ ಸಾಕಷ್ಟು ಅನುದಾನ ನೀಡುತ್ತಿದೆ. ಆದರೆ ವಸತಿ ನಿಲಯದ ಮುಖ್ಯ ಅಡುಗೆಯವರ ನಿರ್ಲಕ್ಷéದಿಂದ ಮಕ್ಕಳು ಕಳಪೆ ಗುಣಮಟ್ಟದ ಆಹಾರ ಸೇವಿಸುವಂತಾಗಿದೆ ಎಂದು ಬಡದಾಳ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ತಾಲೂಕಿನ ಬಡದಾಳ ಗ್ರಾಮದ ಬಿಸಿಎಂ ವಸತಿ ನಿಲಯದಲ್ಲಿ ಸುಮಾರು ದಿನಗಳಿಂದ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಸುಮಾರು ದಿನಗಳಿಂದ ಮಕ್ಕಳು ಸಮಸ್ಯೆ ಯಾರಿಗೂ ಹಂಚಿಕೊಂಡಿಲ್ಲ. ಆದರೆ ಈಗ ತೊಗರಿ ಬೆಳೆ, ಕಡಲೆ ಬೆಳೆಯಲ್ಲಿ ಹುಳ ತುಂಬಿಕೊಂಡಿವೆ. ಹುಳ ತುಂಬಿಕೊಂಡ ಬೆಳೆ ಕಾಳಿನಿಂದ ಸಾಂಬಾರ ಮಾಡಿ ಹಾಕಲಾಗುತ್ತಿದೆ. ತರಕಾರಿ ಹಾಕುತ್ತಿಲ್ಲ. ಊಟ ಸರಿಯಾಗಿಲ್ಲ ಎಂದು ಮಕ್ಕಳು ಹೇಳಿದರೆ ಮುಖ್ಯ ಅಡುಗೆರಾದ ಬಸವರಾಜ ಪೂಜಾರಿ ಹೆದರಿಸುತ್ತಿದ್ದಾರೆ ಎಂದು ಗ್ರಾಮಸ್ಥರಾದ ವಿನೋದ ಅತನುರ, ಹಸನಸಾಬ್ ಮುಲ್ಲಾ, ಹಣಮಂತ ತೋಟನಾಕ, ಲಕ್ಷ್ಮೀಪುತ್ರ ಮಾತಾರಿ ಆರೋಪಿಸಿದ್ದಾರೆ.
ಬಡದಾಳ ಗ್ರಾಮದ ಬಿಸಿಎಂ ವಸತಿ ನಿಲಯಕ್ಕೆ ಸ್ವಂತ ಕಟ್ಟಡವಿಲ್ಲ. ಈಗ ಹೊಸ ಕಟ್ಟಡ ಕಾಮಗಾರಿ ನಡೆದಿದೆ. ಕಳೆದ ಏಳೆಂಟು ವರ್ಷಗಳಿಂದ ನಮ್ಮ ಮನೆಯಲ್ಲಿ ಬಾಡಿಗೆ ನೀಡಿದ್ದೇನೆ. ನಾನು ಮಕ್ಕಳ ಮೇಲಿನ ಕಾಳಜಿಯಿಂದ ಅನೇಕ ಬಾರಿ ಊಟ ಪರಿಶೀಲಿಸುತ್ತಿರುತ್ತೇನೆ. ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಈ ಕುರಿತು ಸಾಕಷ್ಟು ಬಾರಿ ಮುಖ್ಯ ಅಡುಗೆದಾರ
ಬಸವರಾಜ ಪೂಜಾರಿಗೆ ಎಚ್ಚರಿಸಿದ್ದರೂ ಪ್ರಯೋಜನವಾಗಿಲ್ಲ. 20 ವರ್ಷಗಳಿಂದ ನಾನಿಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಯಾರು
ಏನು ಮಾಡುತ್ತಾರೆ ಎಂದು ಬಸವರಾಜ ಪೂಜಾರಿ ಪ್ರಶ್ನಿಸುತ್ತಾನೆ. ವಾರದೊಳಗೆ ಬಸವರಾಜ ಪೂಜಾರಿಯನ್ನು ಇಲ್ಲಿಂದ ತೆಗೆದು
ಹಾಕಬೇಕು ಎಂದು ವಸತಿ ನಿಲಯಕ್ಕೆ ಬಾಡಿಗೆ ನೀಡಿದ ಮನೆ ಯಜಮಾನ ಭೀಮಶಾ ಸವಳಿ ಹೇಳುತ್ತಾರೆ.
ವಸತಿ ನಿಲಯಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ ನಿಲಯ ಪಾಲಕ ಗಂಗಾಧರ, ನಾನು ಅನೇಕ ಬಾರಿ ಮಕ್ಕಳ ಬಾಯಿಂದ ಬಸವರಾಜ ಪೂಜಾರಿ ದುರ್ವರ್ತನೆ ಬಗ್ಗೆ ಕೇಳಿದ್ದೇನೆ. ಹೀಗಾಗಿ ಈ ಬಾರಿ ಅವನ ಉದ್ದಟತನದ ಬಗ್ಗೆ ಮೇಲಾಧಿಕಾರಿಗಳಿಗೆ ಪತ್ರ ಬರೆಯುತ್ತಿದ್ದೇನೆ ಎಂದು ಹೇಳಿದರು.
ಗ್ರಾಮಸ್ಥರಾದ ರಾಜು ಮೇತ್ರಿ, ಚಂದ್ರಕಾಂತ ಮಾತಾರಿ, ಹಣಮಂತ ಆನೂರ ಹಾಗೂ ವಸತಿ ನಿಲಯದ ಮಕ್ಕಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ