ಅದಮ್ಯ ಕನಸುಗಾರನ ಆದರ್ಶ ಗ್ರಾಮ ರಾಗಿಹಳ್ಳಿ
Team Udayavani, Nov 13, 2018, 10:56 AM IST
ಆನೇಕಲ್: ಅನಂತ ಕುಮಾರ್ರ ಕನಸಿನ ಗ್ರಾಮದಲ್ಲೂ ಸೂತಕದ ಛಾಯೆ ಆವರಿಸಿತ್ತು. 4 ವರ್ಷಗಳಿಂದ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಅನಂತಕುಮಾರ್ ಆನೇಕಲ್ ತಾಲೂಕಿನ ರಾಗಿಹಳ್ಳಿ ಗ್ರಾಪಂ ಅನ್ನು ಆದರ್ಶ ಗ್ರಾಮವನ್ನಾಗಿಸಲು ಪಣ ತೊಟ್ಟಿದ್ದರು.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರುವ ರಾಗಿಹಳ್ಳಿ ಗ್ರಾಮ ತಾಲೂಕಿನಲ್ಲೇ ಅತ್ಯಂತ ಬಡ ಪಂಚಾಯ್ತಿಯಾಗಿ ಗುರುತಿಸಲಾಗಿದೆ. ಇಂತಹ ಗ್ರಾಮವನ್ನು ರಾಜ್ಯಕ್ಕೆ ಮಾದರಿಯಾಗಿ ಮಾಡಲು ಸಂಸದ ಅನಂತಕುಮಾರ್ ಉದ್ದೇಶಿಸಿದ್ದರು. ಸುತ್ತಲೂ ಕಾಡು ಆವರಿಸಿದ್ದು, ಸುಮಾರು 16 ಪುಟ್ಟ ಪುಟ್ಟ ಹಳ್ಳಿಗಳಿಂದ ಪಂಚಾಯ್ತಿ ಕೂಡಿತ್ತು. ಇಲ್ಲಿನ ವಾಸಿಗಳು ತೀರಾ ಹಿಂದುಳಿದಿದ್ದರಿಂದ ಸರ್ವತೋಮುಖ ಪ್ರಗತಿಗೆ ಮುಂದಾಗಲು ಇದೇ ಪಂಚಾಯ್ತಿಯನ್ನು ಆಯ್ಕೆ ಮಾಡಿಕೊಂಡಿದ್ದರು.
ಅನಂತ ಕುಮಾರ್ ಅವರು ರಾಗಿಹಳ್ಳಿ ಪಂಚಾಯ್ತಿಯನ್ನು ಆಯ್ಕೆ ಮಾಡಿ ಕೊಂಡ ಬಳಿಕ ಇಲ್ಲಿನ ಹಳ್ಳಿಗಳ, ಪ್ರತಿ ಕುಟುಂಬಗಳ ಬಗ್ಗೆ ಮಾಹಿತಿ ಕಲೆ ಹಾಕಿ ಅವರ ಪ್ರಗತಿಗೆ ಏನೆಲ್ಲಾ ಸೌಲಭ್ಯ ಕಲ್ಪಿಸಬೇಕು ಎಂಬುದರ ಬಗ್ಗೆ ಅಧ್ಯಯನ ಮಾಡಿಸಿ ಅದರಂತೆ ಹಂತ ಹಂತವಾಗಿ ಹಳ್ಳಿಗರ ಸೇವೆಗೆ ಮುಂದಾಗಿದ್ದರು.
ಆರಂಭದಲ್ಲಿ ರಸ್ತೆ ಪಕ್ಕದಲ್ಲಿ ಸಸಿ ನೆಟ್ಟು ಪೋಷಿಸುವುದು, ಪ್ರತಿ ಹಳ್ಳಿಗಳಲ್ಲಿ ಸ್ವತ್ಛತೆ ಬಗ್ಗೆ ಅರಿವು ಮೂಡಿಸಿ ಅಲ್ಲಲ್ಲಿ ಕಸದ ತೊಟ್ಟಿಗಳನ್ನು ಇಟ್ಟು ಸ್ವತ್ಛತೆಗೆ ಮೊದಲ ಆದ್ಯತೆ ನೀಡಿದ್ದರು. ನಂತರ ಸರ್ಕಾರಗಳಿಂದ ಸಿಗುವ ಸೌಲಭ್ಯಗಳನ್ನು ಹಳ್ಳಿಗರಿಗೆ ಕೊಡಿಸುವುದರ ಬಗ್ಗೆ ಚಿಂತನೆ ನಡೆಸಿ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಬಂದು ಸರ್ಕಾರಿ ಸೌಲಭ್ಯಗಳ ಬಗ್ಗೆ ನೇರವಾಗಿ ಮಾಹಿತಿ ಕೊಡಿಸಿ ಅರ್ಜಿ ಪಡೆಯುವ ವ್ಯವಸ್ಥೆ ಮಾಡಿದರು. ಹೀಗೆ ರಾಜ್ಯಕ್ಕೆ ಮಾದರಿಯಾಗಿ ಆದರ್ಶ ಗ್ರಾಮ ಮಾಡಲು ಪಣ ತೊಟ್ಟಿದ್ದ ಅನಂತ ಕುಮಾರ್ರ ಬಗ್ಗೆ ಅತಿ ಹೆಚ್ಚು ನಿರೀಕ್ಷೆಗಳನ್ನು ಸ್ಥಳೀಯರು ಇಟ್ಟು ಕೊಂಡಿದ್ದರು. ಇದರ ನಡುವೆ ಅವರ ಅಕಾಲಿಕ ನಿಧನದಿಂದ ಇಡೀ ಗ್ರಾಪಂ ಶೋಕ ಸಾಗರದಲ್ಲಿದೆ.
ಗ್ರಾಮಕ್ಕೆ ಬೆಳಕು ನೀಡಲು ಬಂದವರ ಬದುಕು ಕತ್ತಲೆಯಲ್ಲಿ ಲೀನವಾಯಿತೇ ಎಂಬಂತಾಗಿದೆ. ಇಲ್ಲಿನ ಗ್ರಾಮದ ಯುವ ಮುಖಂಡ ಮುನಿರಾಜು ಮಾತನಾಡಿ, ಅನಂತಕುಮಾರ್ ಅವರು ನಮ್ಮ ಗ್ರಾಮಕ್ಕೆ ಬಂದಾಗ ನಮಗೆ ಅವರ ಪರಿಚಯ ಆಗಿರಲಿಲ್ಲ. ಎಲ್ಲಾ ರಾಜಕಾರಣಿಗಳಂತೆ ಇವರೂ ಆಶ್ವಾಸನೆ ಕೊಟ್ಟು ಹೋಗುವವರು ಅಂದು ಕೊಂಡಿದ್ದೆವು. ಆದರೆ, ಅವರ ಕಾಳಜಿ, ಉದ್ದೇಶ ದೊಡ್ಡದಿತ್ತು. ಅವರ ಅಕಾಲಿಕ ಮರಣದಿಂದ ನೋವುಂಟಾಗಿದೆ. ನಮ್ಮ ಗ್ರಾಮವನ್ನು ಆದರ್ಶಮಯವಾಗಿಸುವ ಕನಸು ಕನಸಾಗಿಯೇ ಉಳಿಯಿತು ಎಂದು ನೊಂದು ನುಡಿದರು.
ಮಂಜುನಾಥ್ ಆನೇಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ