ಸನಾತನ ಧರ್ಮ ನಶಿಸಿದರೆ ದೇಶಕ್ಕೆ ಉಳಿಗಾಲವಿಲ್ಲ


Team Udayavani, Jan 28, 2019, 7:20 AM IST

sanatana.jpg

ಚನ್ನರಾಯಪಟ್ಟಣ: ಸನಾತನ ಹಿಂದೂ ಧರ್ಮ ನಶಿಸಿದರೆ ದೇಶಕ್ಕೆ ಉಳಿಗಾಲವಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ, ಸಾಹಿತಿ ಪ್ರೊ. ಟಿ.ಎನ್‌.ಪ್ರಭಾಕರ್‌ ತಿಳಿಸಿದರು. ತಾಲೂಕಿನ ನವೋದಯ ಶಾಲಾ ಆವರಣದಲ್ಲಿ ನಡೆಯುತ್ತಿರುವ ತಾಲೂಕು ಬ್ರಾಹ್ಮಣ ಸಮ್ಮೇಳನದಲ್ಲಿ ಧಾರ್ಮಿಕ ಆಚರಣೆಗಳಲ್ಲಿ ವೈಜ್ಞಾನಿಕ ಮಹತ್ವ ವಿಷಯವಾಗಿ ನಡೆದ ಯುವ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಶ್ವದ ಇತರೆ ದೇಶಗಳು ಭಾರತವನ್ನು ಗುರುತಿಸು ತ್ತಿರುವುದು ಸನಾತನ ಸಂಪ್ರದಾಯದಿಂದ. ಹಿಂದೂ ಧರ್ಮವನ್ನು ಹಾಳು ಮಾಡಲು ಸ್ವಯಂ ಘೋಷಿತ ಬುದ್ಧಿಜೀವಿಗಳು ಮುಂದಾಗುತ್ತಿದ್ದಾರೆ ಎಂದು ಆಪಾದಿಸಿದರು.

ಸಂಸ್ಕೃತಿ ಉಳಿಸಿ: ಸರ್ವರ ಏಳಿಗೆಗಾಗಿ ದೇವರಲ್ಲಿ ನಿತ್ಯ ಪ್ರಾರ್ಥನೆ ನಡೆಯುತ್ತಿರುವುದ ಭಾರತದ ಸನಾತನ ಧರ್ಮದಲ್ಲಿ. ಜಗತ್ತು ಬದಲಾಗಬೇಕು ಎನ್ನುವುದಕಕ್ಕಿಂತ ನಾವು ಬದಲಾಗಬೇಕು. ನಮ್ಮ ಸಂಪ್ರದಾಯ ಹಾಗೂ ಸಂಸ್ಕಾರವನ್ನು ಮೊದಲು ನಾವು ಆಚರಣೆ ಮಾಡುವ ಮೂಲಕ ಅದರ ಫ‌ಲವನ್ನು ಅನುಭವಿಸಬೇಕು, ಇತರರ ಮೇಲೆ ಅನಗತ್ಯವಾಗಿ ನಮ್ಮ ಸಂಪ್ರದಾಯವನ್ನು ಹೇರಬಾರದು ಎಂದು ತಿಳಿಸಿದರು.

ವಿಜ್ಞಾನದಿಂದ ಸಾಬೀತಾಗಿದ್ದು ಬದಲಾಗುತ್ತದೆ. ವೇದಾಂತ ವಿಜ್ಞಾನ ಎಂದಿಗೂ ಬದಲಾಗುವುದಿಲ್ಲ. ಧರ್ಮ ಉಳಿವಿಗಾಗಿ ವಿಜ್ಞಾನ ಇರಬೇಕು. ಇದರ ಬದಲಾಗಿ ಧಾರ್ಮಿಕ ವಿರೋಧಕ್ಕಾಗಿ ವಿಜ್ಞಾನವನ್ನು ಬಳಸಲಾಗುತ್ತಿದೆ. ನಿಜವಾದ ವಿಜ್ಞಾನ ಎಂದಿಗೂ ಸನಾತನ ಧರ್ಮವನ್ನು ವಿರೋಧಿಸುವುದಿಲ್ಲ. ವಿಜ್ಞಾನದ ಮುಖವಾಡ ಹಾಕಿರುವವರು ಹಿಂದೂ ಧರ್ಮವನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.

ಪ್ರಚಾರದ ಗೀಳು: ಧಾರ್ಮಿಕ ಆಚರಣೆಗಳಲ್ಲಿ ವೈಜ್ಞಾನಿಕ ಮಹತ್ವದ ಕುರಿತು ವಿಚಾರ ಮಂಡನೆ ಮಾಡಿದ ಮೈಸೂರು ಪ್ರಸನ್ನ ಪ್ರಕಾಶ್‌ ಯಾರನ್ನೂ ಹಿಂಸಿದರೆ ಇರುವವರು, ಸ್ತ್ರೀಗಳನ್ನು ಮಾತೃ ಸಮಾನ ವಾಗಿ ನೋಡುವುದು ಬ್ರಾಹ್ಮಣರ ಹುಟ್ಟುಗುಣ. ಬ್ರಾಹ್ಮಣ್ಯದ ಬಗ್ಗೆ ಸರಿಯಾಗಿ ತಿಳಿಯದ ವಿಚಾರವಾದಿ ಗಳು ಪ್ರಚಾರದ ಗೀಳಿಗೆ ಧರ್ಮವನ್ನು ವಿರೋಧಿಸುತ್ತಿದ್ದಾರೆ ಎಂದರು.

ಸಂಪ್ರದಾಯ ಬಿಡಬೇಡಿ: ನಮ್ಮ ವೇಷ ನಮ್ಮ ನಡತೆಯನ್ನು ತೋರಿಸುತ್ತದೆ. ವೈದಿಕ ವೇಷ ತೊಡಲು ನಾಚಿಕೆ ಪಡುವ ವ್ಯಕ್ತಿ ಧರ್ಮ ವಿರೋಧಿಯಾಗು ತ್ತಾನೆ. ತಾತ್ಸಾರ ಮನೋಭಾವದಿಂದ ನಾವೇ ನಮ್ಮ ಸಂಪ್ರದಾಯವನ್ನು ಕೈ ಬಿಡುವುದರಲ್ಲಿ ಅರ್ಥವಿಲ್ಲ, ಮನುಷ್ಯತ್ವದ ಪಾಠ ಹೇಳುವ ವಿಪ್ರ ತನ್ನ ಧರ್ಮವನ್ನು ಆಚರಣೆ ಮಾಡಬೇಕು ಎಂದರು.

ಮನು ಸ್ಮತಿ ಸುಟ್ಟರೆ ನಷ್ಟವಿಲ್ಲ: ಹಾಸನ ವಾಸವಿ ಶಾಲೆ ಪ್ರಾಂಶುಪಾಲ ಮಂಜುನಾಥ್‌ ಧಾರ್ಮಿಕ ಆಚರಣೆಗಳಲ್ಲಿ ವೈಜ್ಞಾನಿಕ ಮಹತ್ವದ ವಿಷಯ ಮಂಡನೆ ಮಾಡಿ, ದೇಶದಲ್ಲಿ ಭಗವದ್ಗೀತೆ ಹಾಗೂ ಮನುಸ್ಮತಿ ಸುಡುವುದಾಗಿ ಹೇಳುತ್ತಾರೆ ಇದರಿಂದ ನಷ್ಟ ಅನುಭವಿಸುವುದಿಲ್ಲ. ಈ ಎರಡು ಗ್ರಂಥ ಬರೆದ ಕತೃಗಳ ಬಗ್ಗೆ ದೇಶದಲ್ಲಿ ಹೆಚ್ಚು ಚರ್ಚೆ ಆಗುವುದಲ್ಲದೇ ಮುದ್ರಣದ ಸಂಖ್ಯೆ ಹೆಚ್ಚುತ್ತದೆ ಎಂದರು. ಗ್ರಂಥಗಳನ್ನು ಸುಡುವುದಾಗಿ ಹೇಳುವವರು ಈಗ ಮುದ್ರಣ ಗೊಂಡಿರುವ ಎಲ್ಲಾ ಕೃತಿಗಳನ್ನು ಖರೀದಿಸಿ ಸುಡುವ ಮನಸು ಮಾಡಲಿ ಎಂದು ಅವರು ಸವಾಲು ಹಾಕಿದರು.

ಮನುಸ್ಮತಿ ಅರ್ಥ ಮಾಡಿಕೊಳ್ಳಿ: ಮನುಸ್ಮತಿ ಓದಿ ಅರ್ಥ ಮಾಡಿಕೊಂಡವರು ಪರಿಸರ ಸಂರಕ್ಷಕರಾಗುತ್ತಾರೆ. ಮನು ಅಂದೇ ಪರಿಸರ ಮಾಲಿನ್ಯದ ಬಗ್ಗೆ ಬರೆದಿದ್ದ. ಒಂದು ವೇಳೆ ಮನುಸ್ಮತಿ ಓದಿ ಇತರರಿಗೆ ಮಾರ್ಗದರ್ಶನ ಮಾಡಿದ್ದರೆ ನದಿ, ಸಾಗರ ಸರೋವರಗಳಲ್ಲಿ ಜಲಮಾಲಿನ್ಯ ಆಗುತ್ತಿರಲಿಲ್ಲ. ಪುಣ್ಯ ಕ್ಷೇತ್ರಗಳಲ್ಲಿ ಸ್ವಚ್ಛತೆ ಮರಿಚಿಕೆಯಾಗಿ ಅಶುಚಿತ್ವ ತಾಂಡ ವಾಡುತ್ತಿರಲಿಲ್ಲ. ಇದೊಂದು ಬದುಕುವ ದಾರಿ ತೋರಿಸುತ್ತದೆ ಹಾಗೂ ಇತರರು ಬದುಕಲು ಅವಕಾಶ ಮಾಡಿಕೊಡುವ ಸತ್ವವಿದೆ ಎಂದರು.

ಸಮ್ಮೇಳನಾಧ್ಯಕ್ಷ ಎ.ಎಸ್‌.ಉಮೇಶ್‌, ಬ್ರಾಹ್ಮಣ ಯು ವೇದಿಕೆ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌, ಡಾ. ಸಿ.ಎನ್‌.ಶೇಷ ಶಯನ, ಅತ್ತಾವರ ರಾಮದಾಸ, ತಾಲೂಕು ಅಧ್ಯಕ್ಷ ತಿಮ್ಮಪ್ಪಯ್ಯ ಇತರರಿದ್ದರು.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.