ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ
Team Udayavani, Mar 23, 2018, 7:42 PM IST
ಕುಮಟಾ: ಕತಗಾಲದ ಸಾಗಡಿಬೇಣದ ಮಹಾಸತಿ ದೇವಸ್ಥಾನದಲ್ಲಿ ಮೂರೂರಿನ ಮಹಾಗಣಪತಿ ಯಕ್ಷಗಾನ ಮಂಡಳಿ ಕಲಾಕಾರರು ಹಾಗೂ ಇತರ 25ಕ್ಕೂ ಹೆಚ್ಚು ಹಿರಿಕಿರಿಯ ಕಲಾವಿದರಿಂದ ದೇವಿಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು. ಹಿರಿಯ ಕಲಾವಿದ ಅನಂತ ಹಾವಗೋಡಿ ಬ್ರಹ್ಮ ಹಾಗೂ ರಾಮ ಹೆಗಡೆ ಮಹಿಷಾಸುರನ ಪಾತ್ರದಲ್ಲಿ ಮಿಂಚಿದರು. ಗುರು ಹಾವಗೋಡಿ, ವಿಷ್ಣು ಭಟ್ಟ ಮೂರೂರು ಮುಂತಾದವರು ಉತ್ತಮ ಕುಣಿತ ಮತ್ತು ಮಾತುಗಾರಿಕೆಯಿಂದ ರಂಜಿಸಿದರು.
ಹಿಮ್ಮೇಳದಲ್ಲಿ ಭಾಗವತರಾಗಿ ಕತಗಾಲದ ಶ್ರೀಧರ ಭಟ್ಟ, ಮೃದಂಗ ವಾದಕರಾಗಿ ಮೂರೂರಿನ ನರಸಿಂಹ ಭಟ್ಟ, ಚಂಡೆ ವಾದಕರಾಗಿ ಸಾಂತೂರಿನ ಗಜಾನನ ಹೆಗಡೆ ಉತ್ತಮವಾಗಿ ನಿರ್ವಹಿಸಿದರು. ವಿಶೇಷವಾಗಿ ವೇದಿಕೆಯ ಎಡಭಾಗದಲ್ಲಿ ದೇವಿ ಆಸೀನವಾಗುವಂತೆ ಸಾಲಂಕಾರ ತೊಟ್ಟಲನ್ನು ನಿರ್ಮಿಸಲಾಗಿತ್ತು. ಮಧು-ಕೈಟಭ ಮುಂತಾದ ರಾಕ್ಷಸರ ವಧೆಯಾದಾಗಲೆಲ್ಲ ರಂಗಸ್ಥಳದ ಮುಂಭಾಗದಲ್ಲಿ ಕುಂಬಳಕಾಯಿ ಒಡೆಯುವ ಪದ್ಧತಿ ನೆರೆದವರಲ್ಲಿ ಕುತೂಹಲ ಮೂಡಿಸಿತು. ಯಕ್ಷಗಾನಕ್ಕೆ ಕೆಡಿಸಿಸಿ ಬ್ಯಾಂಕ್ ಆರ್ಥಿಕ ಸಹಾಯ ನೀಡಿದ್ದು, ಗಜಾನನ ಗಂಗೂ ಗೌಡ ಹಾಗೂ ಕುಟುಂಬದವರು ಸಂಯೋಜಿಸಿದ್ದರು. ಡಾ| ಕೆ. ಗಣಪತಿ ಭಟ್ಟ, ರಾಮಾ ಗೋಪಾಲ ಭಟ್ಟ, ಮಾಣಿ ಗೌಡ, ಉಮೇಶ ಭಟ್ಟ, ಸುಗ್ಗಿ ಗೌಡ, ಸಾವಿತ್ರಿ ಶಿವ ಹೆಗಡೆ, ಕೃಷ್ಣಾನಂದ ವೆರ್ಣೇಕರ, ಸಂತೋಷ ಗೌಡ, ಹುಲಿಯಮ್ಮ ಗೌಡ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’
PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ