ಜೂ. 30: “ಮಲಬಾರ್‌ ರಿವರ್‌ ಕ್ರೂಸ್‌’ ಯೋಜನೆ ಉದ್ಘಾಟನೆ


Team Udayavani, Jun 21, 2018, 6:35 AM IST

20ksde3.jpg

ಕಾಸರಗೋಡು: ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಗಳ ಏಳು ನದಿಗಳನ್ನು ಸಂಯೋಜಿಸಿಕೊಂಡು ನದಿಗಳ ಮತ್ತು ಹಿನ್ನೀರುಗಳ ಮೂಲಕ ವಿಹಾರ ನೌಕಾಯಾನ ಪ್ರವಾಸೋದ್ಯಮ (ರಿವರ್‌ ಕ್ರೂಸ್‌ ಟೂರಿಸಂ) ರೂಪಿಸಲಾಗಿದ್ದು, ಜೂ. 30 ರಂದು ಪರಶ್ಶಿನಕಡವಿನಲ್ಲಿ ಮುಖ್ಯಮಂತ್ರಿ ಉದ್ಘಾಟಿಸುವರು.

ಮಲಬಾರ್‌ ರಿವರ್‌ ಕ್ರೂಸ್‌ ಟೂರಿಸಂ ಯೋಜನೆಯು ಜಾರಿಯಾಗುವುದ ರೊಂದಿಗೆ ಕಾಸರಗೋಡು ಜಿಲ್ಲೆಯ ಪ್ರವಾಸೋದ್ಯಮ ವಲಯದಲ್ಲಿ ಮತ್ತೂಂದು ಸಾಧನೆಯಾಗಲಿದೆ. ಜಿಲ್ಲೆಯ ಚಂದ್ರಗಿರಿ ನದಿಯಿಂದ ಆರಂಭಿಸಿ ಕವಾಯಿ ನದಿ ತನಕ ಕಾರ್ಯಗತಗೊಳಿಸುವ ನೂತನ ಯೋಜನೆಗಳು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಯೋಜನೆಗಳಾಗಿವೆ.

ಎಲ್ಲೆಲ್ಲಿ ಏನೇನು?
ಜಿಲ್ಲೆಯಲ್ಲಿ  ಹರಿಯುವ ಚಂದ್ರಗಿರಿ ನದಿಯಲ್ಲಿ  ಯಕ್ಷಗಾನ ಕ್ರೂಸ್‌ನಿಂದ ಆರಂಭಿಸಿ ಪೆರುಂಬಾ ನದಿಯಲ್ಲಿ  ಮ್ಯೂಸಿಕ್‌ ಕ್ರೂಸ್‌, ಕವಾಯಿ ಹಾಗೂ ವಲಿಯಪರಂಬ ಹಿನ್ನೀರುಗಳಲ್ಲಿ  ಹ್ಯಾಂಡೂÉಮ್‌ ಆ್ಯಂಡ್‌ ಹ್ಯಾಂಡಿಕ್ರಾಫ್ಟ್‌  ಕ್ರೂಸ್‌, ತೇಜಸ್ವಿನಿ ನದಿ ಯಲ್ಲಿ  ವಾಟರ್‌ ನ್ಪೋರ್ಟ್ಸ್ ಆ್ಯಂಡ್‌ ರಿವರ್‌ ಬಾತಿಂಗ್‌ ಕ್ರೂಸ್‌, ವಲಯಪರಂಬ ಹಿನ್ನೀರಿನಲ್ಲಿ  ಮಾದರಿ ರೆಸ್ಪಾನ್ಸಿಬಲ್‌ ಗ್ರಾಮ ಎಂಬ ಯೋಜನೆಗಳನ್ನು  ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

ಉತ್ತರ ಕೇರಳ ಅಭಿವೃದ್ಧಿ ಗುರಿ
ಮಲಬಾರ್‌ ಪ್ರದೇಶದ ಪ್ರವಾಸೋದ್ಯಮ ಕ್ಷೇತ್ರದಲ್ಲಿ  ಸಮಗ್ರ ಅಭಿವೃದ್ಧಿಯ ಉದ್ದೇಶ ದೊಂದಿಗೆ ಕೇರಳ ಸರಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯು ಅನುಷ್ಠಾನಕ್ಕೆ ತರುವ ಮಲಬಾರ್‌ ರಿವರ್‌ ಕ್ರೂಸ್‌ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಯೋಜನೆಯು ಜಾರಿಯಾಗುವುದರೊಂದಿಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ  ಉತ್ತರ ಕೇರಳ ಅಭಿವೃದ್ಧಿ ಹೊಂದಲಿದೆ.

ಮಲೆನಾಡು ಮಲಬಾರ್‌ ಕ್ರೂಸ್‌ ಪ್ರವಾಸೋದ್ಯಮ ಯೋಜನೆಯು ಪ್ರವಾಸೋದ್ಯಮ ವಲಯದಲ್ಲಿ  ವಿಭಿನ್ನವಾದ ಟೂರಿಸಂ ಬ್ರಾÂಂಡ್‌ ಆಗಲಿದೆ. ಪರಿಸರ ಸ್ನೇಹಿ ಪ್ರವಾಸೋದ್ಯಮ ಯೋಜನೆಯನ್ನು  ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಗ್ರೀನ್‌ ಆರ್ಕಿಟೆಕ್ಚ‌ರ್‌ ವಿನ್ಯಾಸ ಅನುಸಾರ ನಿರ್ಮಾಣ ಕಾಮಗಾರಿಗಳನ್ನು  ಯೋಜನೆಯಲ್ಲಿ ಒಳಪಡಿಸಲಾಗಿದೆ. ತ್ಯಾಜ್ಯ ನಿರ್ಮೂಲನಾ ವಿಧಾನಗಳನ್ನು  ಅವಲಂಬಿಸಿ ಮಾಲಿನ್ಯ ಮುಕ್ತ  ಪ್ರವಾಸೋದ್ಯಮ ಯೋಜನೆಯನ್ನು  ಕಾರ್ಯರೂಪಕ್ಕೆ ತರಲಾಗುವುದು.ಸ್ವೀವೇಜ್‌ ಟ್ರೀಟ್‌ಮೆಂಟ್‌ ಪ್ಲಾಂಟ್‌, ಬಯೋ ಟಾಯ್ಲೆಟ್‌ಗಳು, ಪ್ಲಾಸ್ಟಿಕ್‌ ತ್ಯಾಜ್ಯ ಸಂಸ್ಕರಣೆ ಇತ್ಯಾದಿಗಳನ್ನು  ಖಾತರಿಪಡಿಸಿ ಯೋಜನೆಯನ್ನು  ಜಾರಿಗೊಳಿಸಲಾಗು ವುದು. ಉತ್ತರ ಕೇರಳದ ನದಿಗಳಲ್ಲಿ  ನೌಕಾ ವಿಹಾರದೊಂದಿಗೆ ಅದಕ್ಕೆ ಹೊಂದಿಕೊಂಡು ಆಯಾ ಪ್ರದೇಶಗಳ ಇತಿಹಾಸ, ಸಂಸ್ಕೃತಿ, ಕಲೆಗಳು,  ಸಂಗೀತ, ಆಚಾರ, ಅನುಷ್ಠಾನ ಗಳು, ಆರಾಧನಾ ಕೇಂದ್ರಗಳು, ಕರಕುಶಲ, ನೈಸರ್ಗಿಕ ಸೌಂದರ್ಯ, ಆಹಾರ ಮತ್ತು  ಮಲಬಾರ್‌ನ ಎಲ್ಲ ಪ್ರವಾಸಿ ಆಕರ್ಷಣೆ ಗಳನ್ನು  ಇದರಲ್ಲಿ ಒಳಪಡಿಸಿ ಮಲಬಾರ್‌ ಕ್ರೂಸ್‌ ಟೂರಿಸಂ ರಚಿಸಲಾಗಿದೆ.

ಕಣ್ಣೂರಿನಲ್ಲಿ ಅಂ.ರಾ. ವಿಮಾನ ನಿಲ್ದಾಣ
ಕಣ್ಣೂರಿನಲ್ಲಿ  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶೀಘ್ರ ಕಾರ್ಯಾರಂಭ ಗೊಳ್ಳುವುದರೊಂದಿಗೆ ವಿದೇಶಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಲಿದೆ. ಮಾತ್ರವಲ್ಲದೆ ಈ ಯೋಜನೆಗಳ ಅನುಷ್ಠಾನದ ಮೂಲಕ ಮಲಬಾರಿನ ಅಸಂಖ್ಯಾತ ಮಂದಿ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವೂ ದೊರಕಲಿದೆ.

ಮಲಬಾರಿನ ಸಾಂಸ್ಕೃತಿಕ ಕಲಾರೂಪಕ 
ಪ್ರವಾಸೋದ್ಯಮದೊಂದಿಗೆ ಪರಂಪರಾಗತ ನೌಕರಿ ವಲಯಗಳಾದ ಮೀನುಗಾರಿಕೆ, ಭತ್ತ ಕೃಷಿ, ಕೈಮಗ್ಗ, ಕಂಚು – ಮಣ್ಣಿನ ಪಾತ್ರೆಗಳು ಮುಂತಾದವುಗಳನ್ನು  ಪ್ರವಾಸೋದ್ಯಮ ಯೋಜನೆಯ ಅಂಗವಾಗಿಸಿ ಅವುಗಳ ನಿರ್ಮಾಣ ಹಾಗೂ ಮಾರಾಟವನ್ನು  ಇದರ ಅಂಗವಾಗಿ ಅನುಷ್ಠಾನಕ್ಕೆ ತರಲಾಗುವುದು. ಅಡುಗೆ ವಿಧಾನಗಳು, ಮಲಬಾರಿನ ವಿಶೇಷ ಖಾದ್ಯಗಳು, ಸ್ಥಳೀಯ ಖಾದ್ಯಗಳನ್ನು  ಪ್ರವಾಸಿಗರಿಗೆ ಒದಗಿಸಲು ಮತ್ತು  ಪರಿಚಯಿಸಲು ತೀರ್ಮಾನಿಸಲಾಗಿದೆ. 

ಜಲ ಸಾರಿಗೆಯನ್ನು ಇದರ ಮೂಲಕ ಪ್ರಚಾರಕ್ಕೆ ತರಲು ಉದ್ದೇಶಿಸಲಾಗಿದೆ. ಮಲಬಾರಿನ ಸಾಂಸ್ಕೃತಿಕ ಕಲಾರೂಪಕಗಳಾದ ತೈಯ್ಯಂ, ಒಪ್ಪನ, ಕೋಲ್ಕಳಿ, ಪೂರಕಳಿ, ಯಕ್ಷಗಾನ ಮೊದಲಾದವುಗಳನ್ನು  ಯೋಜನೆಯಲ್ಲಿ ಸೇರಿಸಲಾಗಿದೆ. ಈ ಯೋಜನೆಗೆ ರಾಜ್ಯ ಸರಕಾರವು 50 ಕೋಟಿ ರೂ. ಒದಗಿಸಿದೆ. 100 ಕೋಟಿ ರೂ.ಕೇಂದ್ರ ಸರಕಾರದಿಂದ ಧನಸಹಾಯವಾಗಿ ನಿರೀಕ್ಷಿಸಲಾಗಿದೆ.ಯೋಜನೆಯು ಪೂರ್ಣಗೊಳ್ಳಲು 325 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.

ಟಾಪ್ ನ್ಯೂಸ್

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.