ಅಪಾಯದ ಸ್ಥಿತಿಯಲ್ಲಿದೆ ಕುಂಟಾರು ತೂಗು ಸೇತುವೆ


Team Udayavani, Aug 29, 2018, 1:30 AM IST

thugu-sethuve-28-8.jpg

ಕುಂಟಾರು: ಕುಂಟಾರು ಶ್ರೀ ಮಹಾವಿಷ್ಣು ದೇವಸ್ಥಾನದ ಸಮೀಪ ಪಯಸ್ವಿನಿ ನದಿಗೆ ಅಡ್ಡಲಾಗಿ ಕಟ್ಟಿರುವ ತೂಗು ಸೇತುವೆ ಅಪಾಯದ ಸ್ಥಿತಿಯಲ್ಲಿದೆ. ಜನರು ತೆರಳಲೆಂದು ಮಾಡಿರುವ ಈ ತೂಗು ಸೇತುವೆಯ ಮೇಲಿನಿಂದ ದ್ವಿಚಕ್ರ ವಾಹನಗಳು ಸಂಚರಿಸುತ್ತಿವೆ. ಪರಿಣಾಮ ಸೇತುವೆಯಲ್ಲಿರುವ ಸಿಮೆಂಟು ಶೀಟಿನ ಸ್ಲ್ಯಾಬ್‌ಗಳು ಮುರಿಯುತ್ತಿವೆ.

120 ಮೀ. ಉದ್ದದ ಈ ತೂಗು ಸೇತುವೆಯನ್ನು 1998ರಲ್ಲಿ ಅಂದಾಜು ಮೊತ್ತ 21 ಲ.ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ದೇಲಂಪಾಡಿ ಗ್ರಾ.ಪಂ. ಸಹಕಾರ ಹಾಗೂ ಕಾರಡ್ಕ ಗ್ರಾ.ಪಂ. 1 ಲ.ರೂ ಸಹಾಯಧನವನ್ನು ಸೇತುವೆ ನಿರ್ಮಾಣಕ್ಕೆ ನೀಡಿತ್ತು. ಕುಂಟಾರಿನಿಂದ ಮಣಿಯೂರು ಪ್ರದೇಶಕ್ಕೆ ಹೋಗಲು ಸಮೀಪದ ಸಂಪರ್ಕ ಮಾರ್ಗವಾಗಿ ಈ ತೂಗುಸೇತುವೆ ಉಪಕಾರಿಯಾಗಿದೆ. ವಾಹನಗಳ ಸಂಚಾರದಿಂದ ಈ ಸೇತುವೆ ಅಪಾ ಯದ ಹಂತಕ್ಕೆ ತಲುಪಿದೆ. ಹತ್ತಿರದಲ್ಲಿ ಬದಲಿ ಮಾರ್ಗವಿಲ್ಲದ ಕಾರಣದಿಂದ ಈ ತೂಗು ಸೇತುವೆಯನ್ನು ದ್ವಿಚಕ್ರ ವಾಹನ ಸವಾರರು ಕೂಡ ಅವಲಂಬಿಸಿದ್ದಾರೆ. ಜನರನ್ನು ಪಕ್ಕದೂರಿಗೆ ಸಂಪರ್ಕಿಸಲು ಸುಲಭ ಮಾರ್ಗವಾದ ಈ ತೂಗು ಸೇತುವೆಯು ಕುಂಟಾರು ಹಾಗೂ ಮಣಿಯೂರು ಗ್ರಾಮಸ್ಥರ ಅಸಮಾಧಾ ನಕ್ಕೆ ಕಾರಣವಾಗಿದೆ. ನಡೆದಾಡಲು ಮಾತ್ರ ಯೋಗ್ಯವಾಗಿದ್ದ ಕುಂಟಾರು ತೂಗು ಸೇತುವೆಯಲ್ಲಿ ಸಾಮಾನು, ಸರಂಜಾಮುಗಳನ್ನು ಒಯ್ಯಲು ಸಾಧ್ಯವಾಗುವುದಿಲ್ಲ. ಹಾಗೆಯೇ ದ್ವಿಚಕ್ರ ವಾಹನಗಳ ಚಾಲನೆಯಿಂದ ಸೇತುವೆಯ ಸ್ಲ್ಯಾಬ್‌ಗಳು ಮುರಿದು ಹೋಗಿರುವ ಕಾರಣ ಮಕ್ಕಳ ಜೊತೆ ಸಂಚರಿಸಲು ಕೂಡ ಹೆದರಿಕೆಯಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಸೇತುವೆಯ ದುರಸ್ತಿ ಕಾರ್ಯಕ್ಕೆ ದೇಲಂಪಾಡಿ ಗ್ರಾ.ಪಂ. 5 ಲಕ್ಷ ರೂ. ಹಣವನ್ನು ತೆಗೆದಿರಿಸಿದೆ. 40 ಹೊಸ ಸಿಮೆಂಟು ಶೀಟುಗಳನ್ನು ಗ್ರಾ.ಪಂ. ಖರೀದಿಸಿದೆ. ಮುರಿದು ಹೋಗಿರುವಲ್ಲಿ ಹೊಸ ಶೀಟುಗಳನ್ನು ಜೋಡಿಸುವ ಕಾರ್ಯವನ್ನು ಪಂಚಾಯತ್‌ ನಡೆಸಲಿದೆ.

ಸೇತುವೆ ನಿರ್ಮಾಣಕ್ಕೆ ಆಗ್ರಹ
ತೂಗು ಸೇತುವೆಯು ಕಾಸರಗೋಡಿಗೆ ಹೋಗುವ ಹೆದ್ದಾರಿಯನ್ನು ಸಂಪರ್ಕಿಸಲು ಹತ್ತಿರದ ದಾರಿಯಾಗಿರುವುದರಿಂದ ಗ್ರಾಮಸ್ಥರು ಇದನ್ನೇ ಅವಲಂಬಿಸಿದ್ದಾರೆ. ಅಲ್ಲದೆ, ದ್ವಿಚಕ್ರ ವಾಹನಗಳನ್ನೂ ಸೇತುವೆ ಮೇಲೆ ಒಯ್ಯುತ್ತಿದ್ದಾರೆ, ಅದೂ ಇಬ್ಬರು – ಮೂವರು ಕುಳಿತು. ಇದರಿಂದ ಸೇತುವೆ ಅಪಾಯದಲ್ಲಿದೆ. ಸುಮಾರು ಒಂದು ಸಾವಿರ ಜನಸಂಖ್ಯೆ ಇದ್ದು, ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ಯೋಗ್ಯವಾದ ಪೂರ್ಣ ಪ್ರಮಾಣದ ದೊಡ್ಡ ಸೇತುವೆಯೊಂದನ್ನು ನಿರ್ಮಿಸಿಕೊಡಿ ಎಂದು ಗ್ರಾಮಸ್ಥರು ಬೇಡಿಕೆ ಮುಂದಿಟ್ಟಿದ್ದಾರೆ.

ಮಕ್ಕಳೂ ಓಡಾಡುತ್ತಾರೆ
ಮಣಿಯೂರು ಮತ್ತು ಚರ್ಲಿಕೈ ಪರಿಸರದಿಂದ ಶಾಲಾ ಮಕ್ಕಳು ಇದೇ ತೂಗು ಸೇತುವೆಯಲ್ಲಿ ಹೋಗುವುದರಿಂದ ಅಪಾಯದ ತೀವ್ರತೆ ಹೆಚ್ಚಿದೆ. ಕೆಲಸಕ್ಕೆಂದು ಮುಳ್ಳೇರಿಯ, ಕಾಸರಗೋಡು ನಗರಕ್ಕೆ ಹೋಗುವ ಜನರು ಇದರಲ್ಲಿ ಸಂತರಿಸುತ್ತಾರೆ. ಇಲ್ಲವೆಂದಲ್ಲಿ ದೂರದ ಹಾದಿ ಪಾಂಡಿ-ಅಡೂರು ಮಾರ್ಗವಾಗಿ ತೆರಳಬೇಕಾಗುತ್ತದೆ.

ಅಪಾಯದ ಹಂತಕ್ಕೆ
ದ್ವಿಚಕ್ರ ವಾಹನಗಳ ಅತಿಯಾದ ಓಡಾಟದಿಂದ ತೂಗು ಸೇತುವೆ ಅಪಾಯದ ಹಂತಕ್ಕೆ ತಲುಪಿದೆ. ಮೊದಲು ಈ ಸೇತುವೆ ಉಪಯೋಗಿಸುವವರು ಕಾಳಜಿ ವಹಿಸಿಕೊಳ್ಳಬೇಕು. ವಾಹನಗಳು ಸಾಗಲು ಬೇರೊಂದು ಸೇತುವೆ ನಿರ್ಮಿಸುವುದು ಒಳ್ಳೆಯದು. 
– ನವೀನ್‌, ಗ್ರಾಮಸ್ಥ

ರಕ್ಷಣೆಗೆ ಸಹಕರಿಸಿ
ತೂಗು ಸೇತುವೆಯಿಂದ ಜನರಿಗೆ ಅನುಕೂಲವಾಗಿದೆ. ಇದರ ರಕ್ಷಣೆಗೆ ಸ್ಥಳೀಯರು ಕೂಡ ಸಹಕರಿಸಬೇಕು. ತೂಗು ಸೇತುವೆಯ ರಿಪೇರಿಗಾಗಿ ದೇಲಂಪಾಡಿ ಗ್ರಾ.ಪಂ. ಕಳೆದ ವರ್ಷವೇ 5 ಲಕ್ಷ ರೂ. ಹಣ ತೆಗೆದಿರಿಸಿದೆ. ಮಳೆಗಾಲ ಮುಗಿದೊಡನೆ ರಿಪೇರಿ ಕಾರ್ಯ ನಡೆಸುತ್ತೇವೆ.
– ಗಂಗಾಧರ, ದೇಲಂಪಾಡಿ ಗ್ರಾ.ಪಂ. ಸದಸ್ಯ

— ಶಿವಪ್ರಸಾದ್‌ ಮಣಿಯೂರು

ಟಾಪ್ ನ್ಯೂಸ್

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.