ತರಕಾರಿ ಧಾರಣೆ ಗಗನಕ್ಕೆ : ಮತ್ತೆ ತತ್ತರಿಸಿದ ಜನತೆ


Team Udayavani, Aug 31, 2018, 6:00 AM IST

30ksde5.jpg

ಕಾಸರಗೋಡು: ಪ್ರಾಕೃತಿಕ ವಿಕೋಪದಿಂದ ಸಂಭವಿಸಿದ ನೆರೆ ಯಿಂದಾಗಿ ಕೇರಳದಲ್ಲಿ ತರಕಾರಿ ಧಾರಣೆ ಗಗನಕ್ಕೇರುತ್ತಿದೆ. ಕರ್ನಾಟಕದ ಕೊಡಗು ಮತ್ತು ಕೇರಳದ ವಯನಾಡಿನಲ್ಲಿ ನೆರೆಯಿಂದಾಗಿ ಭಾರೀ ಪ್ರಮಾಣದಲ್ಲಿ ಕೃಷಿ ನಾಶನಷ್ಟ ಸಂಭವಿಸಿದ ಪರಿಣಾಮವಾಗಿ ತರಕಾರಿ ಧಾರಣೆ ಗಗನಕ್ಕೇರುವ ಮೂಲಕ ಈಗಾಗಲೇ ತತ್ತರಿಸಿರುವ ಜನರ ಮೇಲೆ ಇನ್ನೊಂದು ಹೊಡೆತ ಬಿದ್ದಿದೆ.

ಬಹುತೇಕ ಕೃಷಿ ನಾಶ
ನೆರೆಯಿಂದಾಗಿ ಬಹುತೇಕ ಕೃಷಿ ನಾಶ-ನಷ್ಟ ಸಂಭವಿಸಿದ್ದು ಈ ಕಾರಣದಿಂದ ಕ್ಯಾರೆಟ್‌ ಸಹಿತ ಬಹುತೇಕ ಎಲ್ಲÉ ತರಕಾರಿಗಳ ಬೆಲೆಹೆಚ್ಚಳವಾಗಿದೆ. ಅದೇ ವೇಳೆ ಕೆಲವೊಂದು ತರಕಾರಿ ಧಾರಣೆ ಕುಸಿಯುತ್ತಿದೆ. ಕ್ಯಾರೆಟ್‌ ಧಾರಣೆ ಬಹಳಷ್ಟು ಗಗನಕ್ಕೇರಿದೆ. ವಾರದ ಹಿಂದೆ ಕ್ಯಾರೆಟ್‌ ಕಿಲೋ ಒಂದಕ್ಕೆ 34 ರೂ. ಇತ್ತು. ಇದೀಗ ಕಾಸರಗೋಡಿನಲ್ಲಿ ಈ ಧಾರಣೆ 80 ರೂ.ಗೇರಿದೆ. ಸಾಮಾನ್ಯವಾಗಿ ಲಿಂಬೆಗೆ ಮಳೆಗಾಲದಲ್ಲಿ ಧಾರಣೆ ಕುಸಿಯುವುದು ಸಾಮಾನ್ಯವಾಗಿದೆ. ಆದರೆ ಈ ಬಾರಿ ಲಿಂಬೆಗೆ ಧಾರಣೆ ಹೆಚ್ಚಳವಾಗಿದೆ. ಕಿಲೋ ಒಂದಕ್ಕೆ 40 ರೂ.ಯಿಂದ 60 ರೂ.ಗೇರಿದೆ. ಬೆಂಡೆ ಧಾರಣೆ 30 ರೂ.ಯಿಂದ 50 ರೂ.ಗೇರಿದೆ. ತೊಂಡೆಕಾಯಿ ಧಾರಣೆ 40 ರೂ. ಯಿಂದ 56 ಕ್ಕೇರಿದೆ. ಪಡುವಲ ಕಾಯಿ ಧಾರಣೆ 40 ರೂ.ಯಿಂದ 60 ರೂ.ಗೇರಿದೆ. ಕ್ಯಾಪ್ಸಿಕೋ ಧಾರಣೆ 60 ರೂ.ಯಿಂದ 80 ಕ್ಕೇರಿದೆ. ಗೆಣಸು ಧಾರಣೆ 20 ರೂ. ಯಿಂದ 30 ರೂ.ಗೇರಿದೆ.

ಇದೇ ವೇಳೆ ಟೊಮೆಟೋ ಧಾರಣೆ ಕುಸಿದಿದೆ. ಟೊಮೆಟೋ ಧಾರಣೆ 20 ರೂ.ಯಿಂದ 10ಕ್ಕಿಳಿದಿದೆ. ಇದರಿಂದ ಗ್ರಾಹಕರು ತಕ್ಕ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ಅಲಸಂಡೆ, ಸಣ್ಣ ನೀರುಳ್ಳಿ, ಹಸಿ ಮೆಣಸು, ಬಟಾಟೆ ಮೊದಲಾದವುಗಳ ಧಾರಣೆ ತಕ್ಕ ಮಟ್ಟಿಗೆ ಕುಸಿದಿದೆ. ಅದೇ ಸಂದರ್ಭದಲ್ಲಿ ಹಣ್ಣುಹಂಪಲು ಧಾರಣೆ ಗಗನಕ್ಕೇರುತ್ತಿದೆ. ಕದಳಿ, ನೇಂದ್ರ, ಮೈಸೂರು ಬಾಳೆ ಹಣ್ಣು ಮೊದಲಾದವುಗಳ ಧಾರಣೆ ಹೆಚ್ಚಳವಾಗಿದೆ. ಮೈಸೂರು ಕಿಲೋಗೆ 40 ರೂ. ಇದ್ದರೆ, ನೇಂದ್ರ ಕಿಲೋ ಒಂದಕ್ಕೆ 50 ರೂ. ಇದ್ದರೆ ಕದಳಿಗೆ 65 ರೂ. ಇದೆ. ಮುಸುಂಬಿಗೆ 60 ರೂ., ಆರೆಂಜ್‌ಗೆ 80 ರೂ., ದಾಳಿಂಬೆಗೆ 80 ರೂ., ದ್ರಾಕ್ಷೆಗೆ 80 ರೂ., ಚಿಕ್ಕುಗೆ 80 ರೂ. ಧಾರಣೆಯಿದೆ.

ಮೀನು ಧಾರಣೆ ಕುಸಿತ  
ಟ್ರಾಲಿಂಗ್‌ ಸಂದರ್ಭದಲ್ಲಿ ಮೀನಿನ ಧಾರಣೆ ಗಗನಕ್ಕೇರಿತು. ಆದರೆ ಟ್ರಾಲಿಂಗ್‌ ನಿಷೇಧ ಹಿಂದೆೆಗೆದುಕೊಂಡ ಬಳಿಕ ಕೆಲವು ದಿನಗಳಲ್ಲಿ ಮೀನಿನ ಧಾರಣೆಯಲ್ಲಿ ಮತ್ತೆ ಹೆಚ್ಚಳವಾಗಿತ್ತು. ಆದರೆ ದಿನಕಳೆದಂತೆ ಮೀನಿನ ಧಾರಣೆ ಕುಸಿಯುತ್ತಾ ಬಂದಿದೆ. ಸಮುದ್ರದಲ್ಲಿ ಭಾರೀ ಪ್ರಮಾಣದಲ್ಲಿ ಮೀನು ಲಭಿಸುತ್ತಿರುವುದರಿಂದ ಮೀನಿನ ಧಾರಣೆ ಕುಸಿಯಲು ಕಾರಣವಾಗಿದೆ ಎಂದು ಬೆಸ್ತರು ಹೇಳುತ್ತಿದ್ದಾರೆ. ಮೀನಿನ ಧಾರಣೆ ಕುಸಿತದಿಂದಾಗಿ ಬೆಸ್ತರಿಗೆ ಸೂಕ್ತ ಲಾಭ ಲಭಿಸುತ್ತಿಲ್ಲ. ಮೀನುಗಾರಿಕೆಗೆ ಹಾಕಿದ ಹಣವೂ ಲಭಿಸುತ್ತಿಲ್ಲ ಎಂಬುದು ಬೆಸ್ತರ ಅಂಬೋಣ.

ಕೇರಳದ ಕಾಸರಗೋಡು ಮತ್ತು ತಿರುವನಂತಪುರ ಹೊರತು ಪಡಿಸಿ 12 ಜಿಲ್ಲೆಗಳಲ್ಲಿ ಹಿಂದೆಂದೂ ಕಾಣದ ನೆರೆ ಮತ್ತು ಕರ್ನಾಟಕದ ಕೊಡಗಿನಲ್ಲಿ ಜಲ ಪ್ರಳಯದ ಹಿನ್ನೆಲೆಯಲ್ಲಿ ತರಕಾರಿ ಧಾರಣೆ ಹೆಚ್ಚಳವಾಗಿದೆ. ಇದರಿಂದಾಗಿ ತರಕಾರಿ ಮಾರಾಟ ಕೂಡಾ ಕುಸಿದಿದೆ. ತರಕಾರಿ ಖರೀದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಭಯವಾಗುತ್ತಿದೆ. ತರಕಾರಿ ಧಾರಣೆ ಹೆಚ್ಚಳದಿಂದ ಗ್ರಾಹಕರು, ವರ್ತಕರೂ ಸಾಕಷ್ಟು ತೊಂದರೆಗೆ ಸಿಲುಕಿದ್ದಾರೆ.
– ರಾಮಚಂದ್ರ
ತರಕಾರಿ ವ್ಯಾಪಾರಿ

ಟಾಪ್ ನ್ಯೂಸ್

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: 15 ಮಂದಿ ಆರೋಪಿಗಳು ಖುಲಾಸೆ

Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; 15 ಮಂದಿ ಆರೋಪಿಗಳು ಖುಲಾಸೆ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.