ಕೆರೆ ಹೂಳೆತ್ತದ್ದರಿಂದ ನಿವಾಸಿಗಳಿಗೆ ನೆರೆ ಭೀತಿ


Team Udayavani, Jun 24, 2018, 6:00 AM IST

2306kdpp6a.jpg

ಕುಂದಾಪುರ: ಪುರಸಭೆಯ ವಾರ್ಡ್‌ ಸಂಖ್ಯೆ 6 ರ ಮೀನು ಮಾರುಕಟ್ಟೆ ವಾರ್ಡ್‌ನ ಸಸಿಹಿತ್ಲು ವಠಾರದಲ್ಲಿರುವ ಕೆರೆಯ ಹೂಳನ್ನು ಹಲವು ವರ್ಷಗಳಿಂದ ಎತ್ತದೇ ಇರುವುದರಿಂದ ಈ ಪರಿಸರದಲ್ಲಿ ನೆರೆ ಭೀತಿ ಆವರಿಸಿದೆ. 

ಕೆರೆಯ ಹೂಳೆತ್ತಲು ವಾರ್ಡಿನ ನಾಗರಿಕರು ಮನವಿ ಮಾಡಿದರೂ, ಪುರಸಭೆ ಮಾತ್ರ ಯಾವುದೇ ಗಮನವೇ ಕೊಟ್ಟಿಲ್ಲ. ಒಂದು ಬಾರಿ ಹೂಳೆತ್ತುವ ಸಂಬಂಧ ಪುರಸಭೆ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದ್ದರೂ, ಆ ಪ್ರಯತ್ನ ಅರ್ಧದಲ್ಲೇ ನಿಂತು ಹೋಯಿತು. 

20 ವರ್ಷದಿಂದ ಹೂಳೆತ್ತಿಲ್ಲ
ಕಳೆದ 20 ವರ್ಷಗಳಿಂದ ಈ ಕೆರೆಯ ಹೂಳೆತ್ತಿಲ್ಲ. ಕೆರೆಯ ಹೂಳೆತ್ತಿದಲ್ಲಿ ಈ ಭಾಗದ ಬಾವಿಗಳ ಅಂತರ್ಜಲ ಮಟ್ಟವಾದರೂ ಏರಿಕೆಯಾಗುತ್ತಿತ್ತು ಎನ್ನುವುದು ಇಲ್ಲಿನವರ ಅಭಿಪ್ರಾಯ. 

ಸರಿಯಾದ ರಸ್ತೆಯೇ ಇಲ್ಲ
ಮೀನು ಮಾರುಕಟ್ಟೆ ಬಳಿಯಿಂದ ಸಸಿಹಿತ್ಲು ವಠಾರದವರೆಗೆ ರಸ್ತೆಯಿದ್ದು, ಆದರೆ ಅಲ್ಲಿಂದ ಮುಂದೆ ಸರಿಯಾದ ರಸ್ತೆ ಇಲ್ಲ. ಇದರಿಂದ ಮುಂದಿನ ಮನೆಗಳ ಸಂಪರ್ಕಕ್ಕೆ ಸಮಸ್ಯೆಯಾಗಿದೆ. 
 
ಚರಂಡಿಯೂ ಇಲ್ಲ
ಮೀನು ಮಾರುಕಟ್ಟೆಯ ಕೊಳಚೆ ನೀರೆಲ್ಲ ಹರಿದು ಹೋಗುವ ಚರಂಡಿ ಕೇವಲ ಅರ್ಧದದವರೆಗೆ ಮಾತ್ರವಿದೆ. ಆದ್ದರಿಂದ ಇಲ್ಲಿ ಮಲಿನ ನೀರು ರಸ್ತೆಯಲ್ಲೇ ಹರಿದುಹೋಗುವಂತಾಗಿದೆ. ಇದರಿಂದ ನಡೆದಾಡುವುದೂ ಕಷ್ಟಕರವಾಗಿದೆ. 

ಅನುದಾನವಿಲ್ಲ
ಕೆರೆಯ ಅಭಿವೃದ್ಧಿಗೆ ಯೋಜನೆ ಸಿದ್ದಪಡಿಸಿ, ಪಕ್ಕದಲ್ಲೇ ಗಾರ್ಡನ್‌ ಕೂಡ ಮಾಡುವ ಕರಡನ್ನು ಸಿದ್ದಪಡಿಸಿ ಸುಮಾರು 28 ಲಕ್ಷ ರೂ. ಅನುದಾನಕ್ಕಾಗಿ ಎಲ್ಲ ಕಡೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ ಆಡಳಿತದಿಂದ ಸಕರಾತ್ಮಕ  ಸ್ಪಂದನೆ ಸಿಗದೇ  ಕೆರೆಯ ಅಭಿವೃದ್ಧಿಯಾಗಿಲ್ಲ. ರಸ್ತೆ ವಿಸ್ತರಣೆಗೂ ಸಿಗುವ 3 ಲಕ್ಷ ರೂ. ಅನುದಾನ ಸಾಕಾಗುತ್ತಿಲ್ಲ. 
– ಶ್ರೀಧರ ಶೇರೆಗಾರ್‌, ಸ್ಥಳೀಯ ವಾರ್ಡ್‌ ಸದಸ್ಯರು

ಕೆರೆಯ ಹೂಳೆತ್ತಿಲ್ಲ
ಇಲ್ಲಿ ಸರಿಯಾದ ಚರಂಡಿಯೇ ಇಲ್ಲ. ಇದರಿಂದ ನೀರೆಲ್ಲ ರಸ್ತೆಯಲ್ಲಿಯೇ ಹರಿಯುತ್ತಿದೆ. ಅದಕ್ಕಿಂತಲೂ ಕೊಳಚೆ ನೀರೆಲ್ಲ ಹರಿಯುವುದರಿಂದ ನಡೆದಾಡುವ ರಸ್ತೆಯೂ ಗಲೀಜಾಗಿದೆ. ಈ ಕೆರೆಯ ಹೂಳೆತ್ತಿಲ್ಲ. ಅದರ ಸುತ್ತ ಪೊದೆ, ಗಿಡ- ಗಂಟಿಗಳು ಬೆಳೆದಿರುವುದರಿಂದ ಈಗ ಇಲ್ಲಿ ಕೆರೆ ಇದೆಯೆಂಬುದೇ ಗೊತ್ತಾಗುವುದಿಲ್ಲ. ಅಪಾಯಗಳು ಸಂಭವಿಸುವ ಮುನ್ನ ಆಡಳಿತ ಎಚ್ಚೆತ್ತುಕೊಳ್ಳಬೇಕು. 
– ಉಮೇಶ, ಸಸಿಹಿತ್ಲು ನಿವಾಸಿ

ನಿತ್ಯ ಸಂಕಷ್ಟ 
ಸಸಿಹಿತ್ಲು ವಠಾದಲ್ಲಿ ಸರಿಯಾದ ರಸ್ತೆಯೇ ಇಲ್ಲ. ಇರುವ ರಸ್ತೆಗಳೂ ಸಂಪೂರ್ಣ ಕೆಟ್ಟುಹೋಗಿದ್ದು, ಇದರಿಂದ  ನಿತ್ಯ ಸಂಕಷ್ಟ  ಅನುಭವಿಸುತ್ತಿದ್ದೇವೆ. ಈ ಕುರಿತಂತೆ ಪುರಸಭೆ ಇನ್ನಾದರೂ ಗಂಭೀರವಾಗಿ ಪರಿಗಣಿಸಲಿ.
– ಸಬಿತಾ, ಸ್ಥಳೀಯರು

ಮನೆಗಳಿಗೆ ತೊಂದರೆ
ಪ್ರತೀ ವರ್ಷ ಮಳೆಗಾಲದಲ್ಲಿ ಕೆರೆಯ ನೀರು ನಿಲ್ಲುವುದರಿಂದ ಈ ಭಾಗದ ಮನೆಗಳಿಗೆ ತೊಂದರೆಯಾಗುತ್ತಿದೆ. ಚರಂಡಿಗಳಲ್ಲಿ ಕಸ ತುಂಬಿದ್ದು, ಕೆಲವು ಕಡೆಗಳಲ್ಲಿ  ಮಾತ್ರ ಚರಂಡಿಗಳನ್ನು ಸ್ವತ್ಛ ಮಾಡಿದ್ದಾರೆ. 
– ಸುಧಾಕರ, ಸ್ಥಳೀಯರು

ರಸ್ತೆ ಸರಿಯಿಲ್ಲ
ವಾರ್ಡಿನಲ್ಲಿ   ಮೋರಿಯೂ ಇಲ್ಲದ ಕಾರಣ ನೀರು ರಸ್ತೆ ಯಲ್ಲಿಯೇ ಹರಿಯುತ್ತದೆ. ಇದರಿಂದಾಗಿ ಹಲವೆಡೆ ರಸ್ತೆ ಗಳೂ ಸರಿ ಇಲ್ಲ. ಸಸಿಹಿತ್ಲು ಕೆರೆಯ ಹೂಳೆತ್ತುವಿಕೆ ಹಾಗೂ ರಸ್ತೆ ವಿಸ್ತರಣೆಯನ್ನು ಮಾಡಿಕೊಡಲಿ. 
– ಸುರೇಶ, ಸ್ಥಳೀಯರು

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.