ಇರಾನ್ನಲ್ಲಿ ದಿಗ್ಬಂಧಿತ ಆರು ಬೆಸ್ತರ ಬಿಡುಗಡೆ
Team Udayavani, Oct 16, 2018, 10:01 AM IST
ಬೈಂದೂರು: ಗಡಿ ಉಲ್ಲಂಘನೆಯ ಆರೋಪದಲ್ಲಿ ಇರಾನಿ ಪೊಲೀಸರಿಂದ ಬಂಧಿತರಾದ ಉತ್ತರ ಕನ್ನಡದ 17 ಮತ್ತು ಉಡುಪಿ ಜಿಲ್ಲೆಯ ಶಿರೂರು ಮೂಲದ ಓರ್ವ ಮೀನುಗಾರರ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗೆ ದುಬಾೖ ಕೆಎನ್ಆರ್ಐ ಸ್ಪಂದಿಸಿದೆ. ಇವರ ಪ್ರಯತ್ನದ ಬಳಿಕ ಆರು ಮಂದಿಯನ್ನು ಇರಾನ್ ಸರಕಾರ ಬಿಡುಗಡೆಗೊಳಿಸಿದ್ದು, ಉಳಿದವರನ್ನು ವಾರದೊಳಗೆ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ದುಬಾೖ ಮೂಲಗಳಿಂದ ತಿಳಿದುಬಂದಿದೆ.
ಜು. 27ರಂದು ದುಬಾೖಯಿಂದ ಮೀನುಗಾರಿಕೆಗೆ ತೆರಳಿದ ಶಿರೂರಿನ ಅಬ್ದುಲ್ ಹುಸೇನ್ ಸಹಿತ ಒಟ್ಟು 18 ಜನರನ್ನು ಅಕ್ರಮ ಗಡಿ ಪ್ರವೇಶದ ಆಪಾದನೆಯಲ್ಲಿ ಇರಾನಿ ಪೊಲೀಸರು ಬಂಧಿಸಿದ್ದರು. ಈ ವರದಿ “ಉದಯವಾಣಿ’ ಸಹಿತ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿದ “ನಮ್ಮ ಕುಂದಾಪ್ರ ಕನ್ನಡ ಬಳಗ’ದ ಗೌರವಾಧ್ಯಕ್ಷ ಹಾಗೂ ದುಬಾೖ ಕೆಎನ್ಆರ್ಐ ಅಧ್ಯಕ್ಷ ಪ್ರವೀಣಕುಮಾರ ಶೆಟ್ಟಿ ನೇತೃತ್ವದ ತಂಡ ದುಬಾೖಯಲ್ಲಿರುವ ಭಾರತೀಯ ಉಪ ರಾಯಭಾರಿ ಕಚೇರಿಗೆ ಭೇಟಿ ನೀಡಿ ಉಪ ರಾಯಭಾರಿ ವಿಪುಲ್ ಅವರೊಂದಿಗೆ ಸಮಾಲೋಚನೆ ನಡೆಸಿತ್ತು.
“ಭಟ್ಕಳ್’ ಸಂಘಟನೆಯ ಮುಖ್ಯಸ್ಥ ರಾದ ಸಯೀದ್ ಖಲೀಲ್, ಕೆಎನ್ಆರ್ಐ ಕಾರ್ಯಕಾರಿಣಿ ಸದಸ್ಯ ಮೊಹಮ್ಮದ್, ಕಾರ್ಯದರ್ಶಿ ಪ್ರಭಾಕರ ಅಂಬಲತೆರೆ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ