ಫೋಕಸ್ ಇದ್ದರೆ ಸಕ್ಸಸ್ ಗ್ಯಾರಂಟಿ
Team Udayavani, Mar 21, 2018, 5:39 PM IST
ಏಕಾಗ್ರತೆಯ ಮಹತ್ವ ವಿದ್ಯಾರ್ಥಿ ದೆಸೆಯಲ್ಲಿಯೇ ಅರ್ಥವಾಗೋದು. ಪರೀಕ್ಷಾ ಕಾಲದಲ್ಲಿ ಏನನ್ನೂ ಗಮನವಿಟ್ಟು ಓದಲು ಸಾಧ್ಯವಾಗುತ್ತಿಲ್ಲ ಎಂದಾಗ ವಿದ್ಯಾರ್ಥಿಗಳಲ್ಲಿ ಆತಂಕ ಆರಂಭವಾಗುತ್ತದೆ. ಚೆನ್ನಾಗಿಯೇ ಪೂರ್ವ ತಯಾರಿ ಮಾಡಿದ್ದರೂ ಅಂತಿಮ ಕ್ಷಣದಲ್ಲಿ ಪರೀಕ್ಷೆ ಬರೆಯುವಾಗ ಏಕಾಗ್ರತೆ ಇಲ್ಲವೆಂದಾಗ ಗಾಬರಿಯಾಗಿ ಉತ್ತರಗಳು ಮರೆತು ಹೋಗಬಹುದು. ಹೀಗಾಗಿ ವಿದ್ಯಾರ್ಥಿಗಳು ಏಕಾಗ್ರತೆಯ ಮೇಲೆ ನಿಯಂತ್ರಣ ಸಾಧಿಸಬೇಕಾದದ್ದು ತುಂಬಾ ಅಗತ್ಯ.
ವಿದ್ಯಾರ್ಥಿಗಳಿಗೆ ಶಿಕ್ಷಕರು, ಹೆತ್ತವರು ಪದೇ ಪದೇ ಹೇಳುವ ಉತ್ತಮ ಕಲಿಕಾ ಮಾರ್ಗವೆಂದರೆ ಏಕಾಗ್ರತೆ. ಆ ಏಕಾಗ್ರತೆಯ ಸಾಧನೆ ಸುಮ್ಮನೆ ಬರುವುದಿಲ್ಲ. ಅದು ಸಿದ್ಧಿಸುವುದು ಧ್ಯಾನದಿಂದ. ಏಕಾಗ್ರತೆಯಿಂದ ಧ್ಯಾನ ಸಿದ್ಧಿಸುತ್ತದೆ. ಧ್ಯಾನದಿಂದ ಏಕಾಗ್ರತೆ ವೃದ್ಧಿಸುತ್ತದೆ. ಈ ಧ್ಯಾನ ಮತ್ತು ಏಕಾಗ್ರತೆ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಎಲ್ಲರಿಗೂ ಬೇಕು.
ಚದುರಿಹೋದ ಸೂರ್ಯರಶ್ಮಿಗಳನ್ನು ಮಸೂರದ ಮೂಲಕ ಕೇಂದ್ರೀಕರಿಸಿ ಶಾಖವನ್ನು, ಬೆಂಕಿಯನ್ನು ಉಂಟು ಮಾಡುವಂತೆ ಮನಸ್ಸಿನ ಚದುರಿದ ಶಕ್ತಿಗಳನ್ನು ಒಂದೆಡೆ ಸೇರಿಸುವುದೇ ಏಕಾಗ್ರತೆ.
ಇದನ್ನು ಹೇಳಲು, ಕೇಳಲು ಚಂದ. ಆದರೆ ಈ ಮಟ್ಟದ ಏಕಾಗ್ರತೆಯನ್ನು ಸಾಧಿಸುವುದು ಹೇಗೆ? ಭಗವದ್ಗೀತೆಯಲ್ಲಿ ಕೃಷ್ಣನಿಗೆ ಅರ್ಜುನ ಕೇಳಿದ ಪ್ರಶ್ನೆಯೂ ಇದೆ. ಇದಕ್ಕೆ ನೇರ, ಸರಳ ಉತ್ತರ- ಪ್ರಯತ್ನದಿಂದ. ಮತ್ತೆ ಮತ್ತೆ ಅಭ್ಯಾಸ ಮಾಡುವುದರಿಂದ. ಇಂದಿನ ವಿದ್ಯಾಭ್ಯಾಸದಲ್ಲಿ ಮಕ್ಕಳಿಗೆ ಬಹುತೇಕ ಎಲ್ಲ ವಿಚಾರಗಳನ್ನು ಕಲಿಸಲಾಗುತ್ತದೆ. ಆದರೆ ಏಕಾಗ್ರತೆ, ಧ್ಯಾನದ ಮಹತ್ವವನ್ನು ಬಿಟ್ಟು.ಉಸಿರಾಟವನ್ನು ಗಮನಿಸುವುದು ಅತ್ಯಂತ ಸರಳ ಏಕಾಗ್ರತಾ ಮಾರ್ಗ. ಉಸಿರು ನಮ್ಮ ಪ್ರಾಣ. ಹೀಗಾಗಿ ಅದನ್ನು ನಿಯಂತ್ರಿಸಬಲ್ಲೆವಾದರೆ ನಮ್ಮ ಇಡೀ ದೇಹ ಮತ್ತು ಮನಸ್ಸಿನ ಮೇಲೆ ನಾವು ಹತೋಟಿ ಪಡೆದಂತೆ.
ಉಸಿರಾಟವನ್ನು ನಿಯಂತ್ರಿಸಿ
ಎಲ್ಲರಲ್ಲೂ ಉಸಿರಾಟ ಎನ್ನುವುದು ಅಪ್ರಜ್ಞಾಪೂರ್ವಕ ಕ್ರಿಯೆಯಾಗಿ ಬಿಟ್ಟಿದೆ. ಆದರೆ ಅದನ್ನೇ ಗಮನವಿಟ್ಟು ಮಾಡಿದರೆ ಏಕಾಗ್ರತೆಯನ್ನು ಸಾಧಿಸಬಹುದು ಮತ್ತು ಧ್ಯಾನದ ಸ್ಥಿತಿಯನ್ನು ತಲುಪಬಹುದು. ಧ್ಯಾನವೆಂಬುದು ಏಕಾಗ್ರತೆಯ ಫಲಿತ. ಅದೊಂದು ಘನೀಕೃತ ಏಕಾಗ್ರತೆ. ಮನಸ್ಸಿನ ತೆರೆಗಳು ನಿಂತು ನಿಶ್ಚಲ ಸಮುದ್ರವಾದಂತೆ ಅದು. ಚಲನೆಯ ಎಲ್ಲ ಶಕ್ತಿಯು ಸಾರಸಂಗ್ರಹ ಹೊಂದಿದಂತೆ. ಇಂಥ ಧ್ಯಾನಶೀಲ ಮನಸ್ಸಿಗೆ ಏನನ್ನೂ ಸಾಧಿಸುವುದು ಸುಲಭ. ವಿದ್ಯಾರ್ಥಿ ದೆಸೆಯಲ್ಲಿ ಪರೀಕ್ಷೆ, ನೌಕರಿ ಸಂದರ್ಶನ, ಸಂಸಾರ ಹೀಗೆ ಬದುಕಿನ ಪ್ರತಿಯೊಂದು ಹಂತಗಳಲ್ಲೂ ಗೆಲುವು ಪಡೆಯಬಹುದು. ಏಕಾಗ್ರತೆಯನ್ನು ಸಾಧಿಸುವ ವ್ಯವಧಾನವಿದ್ದರೆ ಮಾತ್ರ.
ರಘು ವಿ., ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ