ಹಾಲು ಉಕ್ಕೇರದಂತೆ ತಡೆಯಿರಿ ಈ ವಿಧಾನ ಅನುಸರಿಸಿ ನೋಡಿ
Team Udayavani, Mar 24, 2018, 3:53 PM IST
ಖೀರ್ ದೇಶಾದ್ಯಂತ ವಿವಿಧ ಮಾದರಿಯಲ್ಲಿ ತಯಾರಿಸಲಾಗುತ್ತದೆ. ಖೀರ್ಗೆ ಹೆಚ್ಚಾಗಿ ಹಾಲನ್ನೇ ಬಳಸುತ್ತೇವೆ. ಹಾಲು ಕುದಿಯಲು ಹೆಚ್ಚು ಸಮಯ ಬೇಕಾಗುತ್ತದೆ ಎಂದು ಬೇರೆ ಕೆಲಸದಲ್ಲಿ ತೊಡಗಿಕೊಂಡರೆ ಅದು ಉಕ್ಕೇರಿ ಅಡುಗೆ ಮನೆಯಲ್ಲ ಹರಡಿದ ಸಂದರ್ಭವೇ ಹೆಚ್ಚು. ಹೀಗಾಗಿ ಹೆಚ್ಚಿವರು ಒಲೆಯ ಮೇಲೆ ಹಾಲಿಟ್ಟರು ಎಂದರೆ ಅದು ಕುದಿಯುವ ತನಕ ಅದರ ಹತ್ತಿರವೇ ಇದ್ದು ಕಾಯತೊಡಗುತ್ತಾರೆ. ಆದರೆ ಹಾಲು ಒಲೆಯಲ್ಲಿಟ್ಟ ಮೇಲೆ ಅದರಲ್ಲೂ ಮುಖ್ಯವಾಗಿ ಖೀರ್ ಮಾಡುವಾಗ ಉಕ್ಕೇರುವುದನ್ನು ತಡೆಯಲು ಒಂದು ವಿಧಾನವಿದೆ.
ಹಾಲು ಕುದಿಯಲು ಅದರಲ್ಲೂ ತೆಳುವಾಗಿರುವ ಹಾಲನ್ನು ಗಟ್ಟಿಗೊಳಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಈ ಸಂದರ್ಭದಲ್ಲಿ ಹಾಲು ಹೆಚ್ಚಾಗಿ ಚೆಲ್ಲಿ ಹಾಳಾಗುತ್ತದೆ. ಹೀಗಾಗದೇ ಇರಲು ಹಾಲಿಗೆ ಕೊಂಚ ನೀರು ಸೇರಿಸಿ. ಅಂದರೆ ಸುಮಾರು ಅರ್ಧ ಲೀಟರ್ ಹಾಲಿಗೆ 1- 2 ಲೋಟ ನೀರು ಸೇರಿಸಿ. ಕುಕ್ಕರ್ನಲ್ಲಿಟ್ಟು ಮುಚ್ಚಳ ಇಡಿ. ವಿಶಲ್ ಇಡಬೇಡಿ. ಹಾಲು ಕುದಿಯುವಾಗ ವಿಶಲ್ ನಲ್ಲಿ ಗಾಳಿ ಹೊರಬರುತ್ತದೆ. ಒಳಗೆ ಕುದಿಯುತ್ತಿರುವ ಸದ್ದು ಕೇಳಿ ಬರುತ್ತದೆ. ಕುಕ್ಕರ್ ಇಲ್ಲ ವೆಂದಾದರೆ ಹಾಲು ಕುದಿಯಲು ದಪ್ಪ ತಳದ ಸ್ವಲ್ಪ ದೊಡ್ಡದಾದ ಮತ್ತು ಅಗಲವಾದ ಪಾತ್ರೆಯನ್ನು ಬಳಸಬಹುದು. ಇದರಿಂದ ಹಾಲು ಉಕ್ಕೇರಲು ತುಂಬಾ ಹೊತ್ತು ಬೇಕಾಗುತ್ತದೆ. ಹೀಗೆ ಆಗುವುದರಿಂದ ಹಾಲು ನಿಧಾನಕ್ಕೆ ಗಟ್ಟಿಯಾಗುತ್ತಾ ಬರುತ್ತದೆ ಮತ್ತು ಹಾಲು ಹೆಚ್ಚು ಮೇಲೆ ಉಕ್ಕುವುದೂ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ