ಮುದ್ರಿತ ಪ್ರತಿಯಲ್ಲಿ ಉದ್ಯಮ ಪರವಾನಿಗೆ


Team Udayavani, Dec 22, 2018, 10:39 AM IST

bajpe.jpg

ಬಜಪೆ: ಗ್ರಾಮ ಪಂಚಾಯತ್‌ಗಳಲ್ಲಿ ಕಟ್ಟಡ ಹಾಗೂ ಉದ್ಯಮ ಪರವಾನಿಗೆ ಪತ್ರವನ್ನು ಕೈಬರಹ ಮೂಲಕ ನೀಡಲಾಗುತ್ತದೆ. ಆದರೆ ಬಜಪೆ ಗ್ರಾ.ಪಂ. ಕಾಗದ ರಹಿತ ಡಿಜಿಟಲ್‌ ಸೇವೆಗೆ ಮುಂದಾಗಿದೆ.  ಪರವಾನಿಗೆ ಪತ್ರವನ್ನು ಮುದ್ರಿತ ರೂಪದಲ್ಲಿ ನೀಡಲು ಹೊಸ ತಂತ್ರಾಂಶ ಅಳವಡಿಸಿಕೊಂಡಿದೆ. 

ಜನರಿಗೆ ಶೀಘ್ರ ಮತ್ತು ಪರಿಪೂರ್ಣ ಸೇವೆಗಳನ್ನು ಸುಲಭ ರೀತಿಯಲ್ಲಿ ನೀಡಲು ಬಜಪೆ ಗ್ರಾ.ಪಂ. ಆದ್ಯತೆ ನೀಡಿದೆ. ಆಡಳಿತಕ್ಕೆ ಆಧುನಿಕ ಸ್ಪರ್ಶ ನೀಡುವುದು, ಸುಲಭ ಸೇವೆಯ ಜತೆಗೆ ಪಾರದರ್ಶಕತೆ ಇದರ ಉದ್ದೇಶ.

ಗ್ರಾ.ಪಂ.ಗಳಲ್ಲಿ ಕಟ್ಟಡ ಹಾಗೂ ಉದ್ಯಮ ಪರವಾನಿಗೆ ಪತ್ರ ಕೈಬರಹ ದಲ್ಲಿ ನೀಡುವುದರಿಂದ ಅವು ಅಳಿಸಿ ಹೋಗುವ ಸಾಧ್ಯತೆ ಇರುತ್ತದೆ. ಅದನ್ನು ಬದಲಾವಣೆ ಮಾಡವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಇದಕ್ಕೆ ರಿಜಿಸ್ಟರ್‌ ಪುಸ್ತಕವನ್ನು ಕೂಡ ನಿರ್ವಹಿಸುವ ಅಗತ್ಯ ಗ್ರಾ.ಪಂ.ಗಿದೆ.

ಆದರೆ ಬಜಪೆ ಗ್ರಾ.ಪಂ. ಈ ಸಮಸ್ಯೆಯನ್ನು ಪರಿಹರಿಸಲು ಪರವಾನಿಗೆ ಪತ್ರವನ್ನು ಮುದ್ರಿತ ರೂಪದಲ್ಲಿ ನೀಡಲು ನಿರ್ಧರಿಸಿದೆ. ಅರ್ಜಿದಾರರು ಸಂಬಂಧಿಸಿದ ದಾಖಲೆಗಳನ್ನು ನೀಡಿದರೆ ಮುದ್ರಿತ ಪರವಾನಿಗೆ ಪತ್ರ ಪಡೆಯಬಹುದು.
ಈ ತಂತ್ರಾಂಶ ಅಳವಡಿಕೆಯಿಂದ ಅರ್ಜಿದಾರನ ಬಳಿಯಿದ್ದ ದಾಖಲೆ ಕಳೆದುಹೋದರೂ ಶುಲ್ಕ ಕಟ್ಟಿದರೆ ಇನ್ನೊಂದು ಪ್ರತಿ ಪಡೆಯಬಹುದು. ಪಂಚಾಯತ್‌ ಸಿಬಂದಿಗೂ ಕೈ ಬರಹದ ಶ್ರಮ ಕಡಿಮೆಯಾಗಲಿದೆ.

ಅರ್ಜಿದಾರರ ಸಮಯ ಉಳಿತಾಯವಾಗಲಿದೆ. ಪರವಾನಿಗೆದಾರನ ಭಾವಚಿತ್ರ ಸಹಿತ ಪತ್ರ ಸಿಗಲಿದೆ. ನೀಡಿದ ಅರ್ಜಿ ಯಾವ ಸ್ಥಿತಿಯಲ್ಲಿದೆ ಎಂದು ತಿಳಿಯಬಹುದು. ಇದಕ್ಕೆ ಮೇಲ್ವಿಚಾರಕ ಅಭಿಯಂತರರ ವಿವರ ನಮೂದಿಸಬೇಕಾಗಿದೆ. ಪ್ರಮಾಣ ಪತ್ರದ ಹಿಂದುಗಡೆ 11 ಶರ್ತ ಹಾಗೂ 4 ವಿಶೇಷ ಶರ್ತಗಳಿಗೆ ಬದ್ಧನಾಗಿರುವ ಬಗ್ಗೆ ಪರವಾನಿಗೆದಾರ ಸಹಿ ಹಾಕಬೇಕಾಗುತ್ತದೆ. ಒಂದು ತಿಂಗಳಲ್ಲಿ, ವರ್ಷದಲ್ಲಿ ಎಷ್ಟು ಪರವಾನಿಗೆಗಳನ್ನು ನೀಡಲಾಗಿದೆ ಎಂದು ಕ್ಷಣಾರ್ಧದಲ್ಲಿ ಹೇಳಬಹುದು. ನೀಡಿದ ಎಲ್ಲ ಪರವಾನಿಗೆಗಳ ಕಾಗದ ರಹಿತ  ದಾಖಲೆಗಳು ಪಂಚಾಯತ್‌ ತಂತ್ರಾಂಶದಲ್ಲಿ ದಾಖಲಾಗಿರುತ್ತವೆ.

ಸರಕಾರಿ ಸೇವೆ ಶೀಘ್ರ  ತಲುಪುವ ಉದ್ದೇಶ
ಪಂಚಾಯತ್‌ ವ್ಯವಸ್ಥೆಯು ಜನರಿಗೆ ಬಹಳ ಹತ್ತಿರದಲ್ಲಿರುವ ಸರಕಾರಿ ವ್ಯವಸ್ಥೆ. ಸರಕಾರಿ ಯೋಜನೆ ಮತ್ತು ಸವಲತ್ತುಗಳು ಪಾರದರ್ಶಕವಾಗಿ ಶೀಘ್ರವಾಗಿ ಜನರಿಗೆ ತಲುಪಿದರೆ, ಪಂಚಾಯತ್‌ನ ಮೇಲಿನ ಗೌರವ ಮತ್ತು ನಂಬಿಕೆ ಉಳಿಯುತ್ತದೆ. ಈ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿ, ಜನಸ್ನೇಹಿಯನ್ನಾಗಿಸುವುದು ಪಂಚಾಯತ್‌ ಆಡಳಿತ ಮಂಡಳಿಯ ಉದ್ದೇಶ. 
ಸಾಯೀಶ್‌ ಚೌಟ ಪಿಡಿಒ, ಬಜಪೆ ಗ್ರಾ.ಪಂ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.