ಶಿಶು ಜೀವ ಉಳಿಸಿದ ಮೋದಿ!
Team Udayavani, Mar 7, 2017, 3:45 AM IST
ನವದೆಹಲಿ: ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಪ್ರಧಾನಿ ಮೋದಿ, ಅಲ್ಲಿದ್ದುಕೊಂಡೇ ದೆಹಲಿಯಲ್ಲಿ ಮಗುವಿನ ಜೀವ ಉಳಿಸಿದ್ದಾರೆ! ಅಸ್ಸಾಂನ ಧೃವಜ್ಯೋತಿ ಕಲಿತಾರ 8 ದಿನದ ಹಸುಗೂಸಿನ ಶ್ವಾಸಕೋಶದಲ್ಲಿ ಗಂಭೀರ ಸಮಸ್ಯೆಯಿತ್ತು.
ಇದನ್ನು ಪತ್ತೆ ಹಚ್ಚಿದ ದಿಬ್ರೂಗಡ ನಗರದ ಆಸ್ಪತ್ರೆ ವೈದ್ಯರು, ಪರಿಸ್ಥಿತಿ ಕೈ ಜಾರುತ್ತಿದೆ ಎಂದರಿತು ಕೂಡಲೇ ಏರ್ ಆ್ಯಂಬುಲೆನ್ಸ್ನ ಮೂಲಕ ಮಗುವನ್ನು ದೆಹಲಿಯ ಗಂಗಾರಾಮ್ ಸ್ಪೆಷಾಲಿಟಿ ಆಸ್ಪತ್ರೆಗೆ ಕಳುಹಿಸಲು ನಿರ್ಧರಿಸಿದರು. ಸಂಜೆ 7.30ಕ್ಕೆ ಆ್ಯಂಬುಲೆನ್ಸ್ ಇಂದಿರಾಗಾಂಧಿ ವಿಮಾನನಿಲ್ದಾಣದಲ್ಲಿ ಇಳಿಯಲಿತ್ತು. ದೆಹಲಿ ಟ್ರಾಫಿಕ್ ಜಾಮ್ ಅರಿತ ಆಸ್ಪತ್ರೆಯ ವೈದ್ಯರು “ದ ಡೈಲಿ ಮೇಲ್’ನ ವರದಿಗಾರರೊಬ್ಬರಿಗೆ ಈ ವಿಷಯ ತಿಳಿಸಿ, “ಆ ಸಮಯದಲ್ಲಿ ವಿಮಾನ ನಿಲ್ದಾಣದಿಂದ ಆಸ್ಪತ್ರೆಯವರೆಗಿನ ಟ್ರಾಫಿಕ್ ಕ್ಲಿಯರ್ ಮಾಡಿಸೋಕ್ಕೆ ಸಾಧ್ಯವೇ?’ ಎಂದು ಕೇಳಿದ್ದಾರೆ. ಕೂಡಲೇ ಈ ವರದಿಗಾರ ದೆಹಲಿ ಪೊಲೀಸ್ ವಿಶೇಷ ಆಯುಕ್ತರಿಗೆ (ಟ್ರಾಫಿಕ್) ಈ ಬಗ್ಗೆ ಮನವಿ ಮಾಡಿ, ಅದರ ಪ್ರತಿಯನ್ನು ಪ್ರಧಾನಿ ಮೋದಿಯವರ ವೈಯಕ್ತಿಕ ಇಮೇಲ್ಗೂ ಕಳುಹಿಸಿದ್ದಾರೆ.
ವಾರಾಣಸಿಯಲ್ಲಿ ಪ್ರಚಾರದಲ್ಲಿದ್ದ ಪ್ರಧಾನಿ ಇ-ಮೇಲ್ ಓದಿ ಕಚೇರಿಗೆ ಮಾಹಿತಿ ನೀಡಿದರು. ಅದರಂತೆ ಎಲ್ಲವೂ ನಡೆದು, ಮಗುವಿನ ಪ್ರಾಣ ಉಳಿಯಿತು.
ಬ್ಯಾಟರಿ ಆಫ್ ಆಗ್ತಿತ್ತು!
ಮಗುವಿಗೆ ಜೀವಾಧಾರವಾಗಿದ್ದ ವೆಂಟಿಲೇಟರ್ನ ಬ್ಯಾಟರಿ ಇನ್ನೂ 7 ನಿಮಿಷ ತಡವಾಗಿದ್ದರೆ ಆಫ್ ಆಗುತ್ತಿತ್ತು. ಟ್ರಾಫಿಕ್ನಿಂದಾಗಿ ಸಂಚಾರಕ್ಕೆ ತೊಂದರೆಯಾಗಿದ್ದರೆ ಪ್ರಾಣಕ್ಕೆ ಅಪಾಯವಿತ್ತು ಎನ್ನುತ್ತಾರೆ ವೈದ್ಯರು. ಮಗುವಿನ ಜೀವ ಉಳಿಸಿದ್ದಕ್ಕೆ ಪೋಷಕರು ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ