1971ರ ಯುದ್ಧ ನೆನಪು ಮಾಡಿ; ಪಾಕ್ಗೆ ವೆಂಕಯ್ಯ ನಾಯ್ಡು ವಾರ್ನಿಂಗ್
Team Udayavani, Jul 23, 2017, 3:28 PM IST
ಹೊಸದಿಲ್ಲಿ : ಉಗ್ರರಿಗೆ ನೆರವು ನೀಡುವ ವಿಚಾರದಲ್ಲಿ ಪಾಕಿಸ್ಥಾನ ವಿರುದ್ಧ ಎನ್ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ವೆಂಕಯ್ಯ ನಾಯ್ಡು ಕಿಡಿ ಕಾರಿದ್ದಾರೆ.
ಕಾರ್ಗಿಲ್ ಪರಾಕ್ರಮ ಪರೇಡ್ ಕಾರ್ಯಕ್ರಮದಲ್ಲಿ ಮಾಡತನಾಡಿದ ನಾಯ್ಡು ‘ಪಾಕ್ ಉಗ್ರರಿಗೆ ನೆರವು ನೀಡುವುದನ್ನು ಬಿಡಬೇಕು. 1971 ರ ಯುದ್ಧದಲ್ಲಿ ಏನಾಗಿದೆ ಎಂದು ನೆನಪು ಮಾಡಿಕೊಳ್ಳಿ. ಉಗ್ರವಾದವನ್ನು ಪೋಷಿಸುವುದರಿಂದ ನಿಮ್ಮ ಅಭಿವೃದ್ಧಿ ಸಾಧ್ಯವಿಲ್ಲ’ ಎಂದರು.
‘ಮಾನವತೆಯ ವಿರೋಧಿ ಉಗ್ರವಾದ,ಅದನ್ನು ಪಾಕ್ ಧರ್ಮದಲ್ಲಿ ಬೆರೆಸಿದೆ ಮತ್ತು ದುರದೃಷ್ಟವಷಾತ್ ರಾಜನೀತಿಯನ್ನಾಗಿಸಿಕೊಂಡಿದೆ’ ಎಂದರು.
‘ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಪುನಃರುಚ್ಚರಿಸಿದ ಅವರು ಒಂದು ಇಂಚು ಭೂಮಿಯನ್ನು ಪಾಕ್ಗೆ ಬಿಟ್ಟುಕೊಡುವ ಪ್ರಶ್ನೆ ಇಲ್ಲ’ ಎಂದರು.
‘ನಮ್ಮದು ಶಾಂತಿ ಬಯಸುವ ದೇಶ, ಯುದ್ಧ ನಮಗೆ ಬೇಡ.ಆದರೆ ತಾಳ್ಮೆ ಕೆಡಿಸುವ ಯತ್ನ ಮಾಡಿದರೆ ನಮ್ಮ ಸೈನಿಕರು ದಿಟ್ಟ ಉತ್ತರ ನೀಡಲಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.
1971 ರಲ್ಲಿ ಬಾಂಗ್ಲಾ ವಿಮೋಚನೆ ಗಾಗಿ 13 ದಿನಗಳ ಕಾಲ ನಡೆದ ಯುದ್ಧದಲ್ಲಿ ಪಾಕ್ ಸೋತು ಸುಣ್ಣವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ