ಗಾಂಧಿಯಂತೆ ಮಾಡು ಇಲ್ಲವೇ ಮಡಿ ಹೋರಾಟ: ರೈತರಿಗೆ ಅಣ್ಣಾ ಕರೆ
Team Udayavani, Nov 23, 2017, 7:37 PM IST
ಜಗತ್ಸಿಂಗ್ಪುರ , ಒಡಿಶಾ: ಮಹಾತ್ಮ ಗಾಂಧೀಜಿಯವರು ಬ್ರಿಟಿಷರು ವಿರುದ್ಧ ಹೋರಾಡಿದಂತೆ ರೈತರು ತಮ್ಮ ಹಕ್ಕುಗಳಿಗಾಗಿ ಮಾಡು ಇಲ್ಲವೇ ಮಡಿ ಎಂಬ ರೀತಿಯಲ್ಲಿ ಹೋರಾಡಬೇಕು ಎಂದು ಪ್ರಖ್ಯಾತ ಸಮಾಜ ಸೇವಕ ಅಣ್ಣಾ ಹಜಾರೆ ಕರೆ ನೀಡಿದ್ದಾರೆ.
ರೈತರ ಸಂಪೂರ್ಣ ಅವಗಣನೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳೇ ಕಾರಣ ಎಂದು ಆರೋಪಿಸಿದ ಅಣ್ಣಾ ಹಜಾರೆ, ರೈತರು ತಮ್ಮ ಪ್ರತಿಭಟನ ಧ್ವನಿಯನ್ನು ಏರಿಸಿದ ಹೊರತು ಅವರಿಗೆ ಯಾವುದೇ ನ್ಯಾಯ ಸಿಗದು ಎಂದು ಹೇಳಿದರು.
ಹಜಾರೆ ಅವರು ಇಲ್ಲಿಂದ ರಾಜ್ಯದ ರಾಜಧಾನಿ ಭುವನೇಶ್ವರದಿಂದ ಸುಮಾರು 90 ಕಿ.ಮೀ. ದೂರದಲ್ಲಿರುವ ಜಗತ್ಸಿಂಗ್ ಪುರದಲ್ಲಿ ನಡೆದ ಜೈ ಕಿಸಾನ್ ಸಮಾವೇಶ್ ನಲ್ಲಿ ಮಾತನಾಡುತ್ತಿದ್ದರು.
ಕಳೆದ ಶತಮಾನದ ಐವತ್ತರ ದಶಕದಲ್ಲಿ ರಾಜ್ಯವನ್ನು ಆಳಿದ ಮಾಜಿ ಮುಖ್ಯಮಂತ್ರಿ ನಭಕೃಷ್ಣ ಚೌಧರಿ ಅವರ ಜನ್ಮ ವರ್ಷಾಚರಣೆ ಪ್ರಯುಕ್ತ ಜೈ ಕಿಸಾನ್ ಸಮಾವೇಶವನ್ನು ಏರ್ಪಡಿಸಲಾಗಿತ್ತು.