‘ಕುರಾನ್ಗೆ ಬದ್ಧವಾಗಿರದ ತ್ರಿವಳಿ ತಲಾಕ್ ಮಸೂದೆ ಒಪ್ಪಿತವಲ್ಲ’
Team Udayavani, Dec 27, 2017, 7:34 PM IST
ಲಕ್ನೋ : ಲೋಕಸಭೆಯಲ್ಲಿ ಇದೇ ಡಿ.28ರ ಗುರುವಾರದಂದು ಮಂಡಿಸಲ್ಪಡುವ ತ್ರಿವಳಿ ತಲಾಕ್ ನಿಷೇಧ ಮಸೂದೆಯು ಒಂದೊಮ್ಮೆ ಪವಿತ್ರ ಗ್ರಂಥ ಕುರಾನ್ ಮತ್ತು ದೇಶದ ಸಂವಿಧಾನಕ್ಕೆ ಅನುಗುಣವಾಗಿ ಇಲ್ಲದಿದ್ದಲ್ಲಿ ಅದು ನಮಗೆ ಸ್ವೀಕಾರಾರ್ಹವಲ್ಲ ಎಂದು ಕೆಲವು ಮುಸ್ಲಿಂ ಮಹಿಳಾ ಸಂಘಟನೆಗಳು ಇಂದು ಬುಧವಾರ ಹೇಳಿವೆ.
”ನಿಕಾಹ್ (ಮದುವೆ) ಅನ್ನುವುದು ಒಂದು ಒಪ್ಪಂದ. ಅದನ್ನು ಯಾರೇ ಮುರಿದರೂ ಅವರಿಗೆ ಶಿಕ್ಷೆಯಾಗಬೇಕು. ಹಾಗಿದ್ದರೂ ಪ್ರಸ್ತಾವಿತ ತ್ರಿವಳಿ ತಲಾಕ್ ಮಸೂದೆ ಒಂದೊಮ್ಮೆ ಕುರಾನ್ ಮತ್ತು ದೇಶದ ಸಂವಿಧಾನಕ್ಕೆ ಅನುಗುಣವಾಗಿ ಇಲ್ಲದಿದ್ದಲ್ಲಿ ಅದನ್ನು ಯಾವುದೇ ಮುಸ್ಲಿಂ ಮಹಿಳೆ ಸ್ವೀಕರಿಸುವುದಿಲ್ಲ” ಎಂದು ಆಲ್ ಇಂಡಿಯಾ ವಿಮೆನ್ ಪರ್ಸನಲ್ ಲಾ ಬೋರ್ಡ್ (ಎಐಎಂಡಬ್ಲ್ಯುಪಿಎಲ್ಬಿ) ಅಧ್ಯಕ್ಷೆ ಶಾಯಿಸ್ತಾ ಅಂಬರ್ ಹೇಳಿದ್ದಾರೆ.
“ಪ್ರಸ್ತಾವಿತ ಮಸೂದೆಯ ಕರಡನ್ನು ಅಖೀಲ ಭಾರತ ಮುಸ್ಲಿಂ ಖಾಸಗಿ ಕಾನೂನು ಮಂಡಳಿ,ಎಐಎಂಡಬ್ಲ್ಯುಪಿಎಲ್ಬಿ, ಜಮಾತ್ ಇಸ್ಲಾಮಿ, ಜಮೀಯತ್ ಉಲ್ಮಾ ಎ ಹಿಂದ್ ಮತ್ತು ತಲಾಕ್ ನೀಡಲ್ಪಟ್ಟಿರುವ ಮುಸ್ಲಿಂ ಮಹಿಳೆಯರ ಪರವಾಗಿ ಕೆಲಸ ಮಾಡುತ್ತಿರುವ ಸಂಘಟನೆಗಳಿಗೆ ತೋರಿಸುವಂತೆ ನಾನು ಕಾನೂನು ಆಯೋಗಕ್ಕೆ ಪತ್ರ ಬರೆದಿದ್ದೇನೆ. ಅಗತ್ಯವೆಂದು ಕಂಡು ಬಂದರೆ ಆ ಬಗ್ಗೆ ನಿಮ್ಮೊಂದಿಗೆ ಚರ್ಚಿಸುತ್ತೇವೆ ಎಂಬ ಉತ್ತರ ನನಗೆ ಬಂದಿದೆ; ಆದರೆ ಈ ವರೆಗೂ ಅದು ನಡೆದಿಲ್ಲ” ಎಂದು ಶಾಯಿಸ್ತಾ ಅಂಬರ್ ಹೇಳಿದರು.
“ಈ ಸ್ಥಿತಿಗೆ ಎಐಎಂಪಿಎಲ್ಬಿ ಕಾರಣ; ಯಾಕೆಂದರೆ ಅದು ಎಂದೂ ತ್ರಿವಳಿ ತಲಾಕ್ ಅನ್ನು ಗಂಭೀರವಾಗಿ ಪರಿಗಣಿಸುವ ಗೋಜಿಗೇ ಹೋಗಿಲ್ಲ; ಈಗಂತೂ ಅದು ತುಂಬಾ ತಡವಾಗಿದೆ’ ಎಂದು ಶಾಯಿಸ್ತಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ