ಸುಪ್ರೀಂ ಬಿಕ್ಕಟ್ಟು : ಸಂಧಾನ ?
Team Udayavani, Jan 15, 2018, 6:00 AM IST
ಹೊಸದಿಲ್ಲಿ: ಸುಪ್ರೀಂ ಕೋರ್ಟ್ನಲ್ಲಿ ಸದ್ಯ ಉಂಟಾಗಿರುವ ಬಿಕ್ಕಟ್ಟು ಸೋಮವಾರವೇ ಮುಕ್ತಾಯವಾಗುವ ಸಾಧ್ಯತೆ ಇದೆ. ಸೋಮವಾರ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ನ ಪೂರ್ಣಪೀಠ ಸಭೆ ನಡೆಸಲಿದ್ದು, ಇಲ್ಲಿ ಎಲ್ಲ ಜಡ್ಜ್ಗಳು ಭಾಗವಹಿಸಲಿದ್ದಾರೆ.
ನ್ಯಾಯವಾದಿಗಳ ಪರಮೋಚ್ಚ ಸಂಸ್ಥೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ)ದ ಏಳು ಮಂದಿ ಸಮಿತಿ ಸದಸ್ಯರು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾರನ್ನು ರವಿವಾರ ಸಂಜೆ 50 ನಿಮಿಷ ಕಾಲ ಭೇಟಿಯಾದ ಬಳಿಕ ಈ ಅಂಶ ವ್ಯಕ್ತವಾಗಿದೆ.
“ಈ ಸಭೆಯಲ್ಲಿ ಮುಖ್ಯ ನ್ಯಾಯಮೂರ್ತಿ ಪರವಾಗಿಯೇ ಹೆಚ್ಚಿನ ಅಭಿಪ್ರಾಯಗಳು ವ್ಯಕ್ತ ವಾಗಬಹುದು. ಹೀಗಾಗಿ ನಾಲ್ವರು ನ್ಯಾಯಮೂರ್ತಿಗಳು ಪ್ರಸ್ತಾವ ಮಾಡಿರುವ ಆಕ್ಷೇಪಗಳನ್ನು ಬಗೆಹರಿಸಲು ನ್ಯಾಯಾಲಯದ ಪೂರ್ಣ ಪೀಠ ಸಭೆ ಸೇರಬೇಕು ಎಂದು ಪ್ರತಿಪಾದಿಸಿಲ್ಲ’ ಎಂದು ಬಿಸಿಐ ಮೂಲಗಳು ತಿಳಿಸಿದ್ದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಇದೇ ವೇಳೆ ನ್ಯಾ| ಜೆ. ಚಲಮೇಶ್ವರ್ ಅವರನ್ನು ಡಿ. ರಾಜಾ ಭೇಟಿಯಾಗಿದ್ದು ರಾಜಕೀಯ ಪ್ರೇರಿತ ಎಂದು ಬಿಸಿಐ ಸದಸ್ಯ ಸಂತೋಷ್ಮಿಶ್ರಾ ಅವರು ಟೀಕಿಸಿದ್ದಾರೆ.
ಹತ್ತು ದಿನಗಳ ಅವಧಿ: ರವಿವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ದಿಲ್ಲಿ ಜಿಲ್ಲಾ ಬಾರ್ ಅಸೋಸಿಯೇಶನ್, ಹತ್ತು ದಿನಗಳ ಒಳಗಾಗಿ ಬಿಕ್ಕಟ್ಟು ಬಗೆಹರಿಯಬೇಕು. ಇಲ್ಲದಿದ್ದಲ್ಲಿ ಬೀದಿಗೆ ಇಳಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ದೇಶಾದ್ಯಂತ ಇರುವ ಬಾರ್ ಕೌನ್ಸಿಲ್ಗಳ ಜತೆ ಬಿಕ್ಕಟ್ಟಿನ ಬಗ್ಗೆ ಸಮಾಲೋಚನೆ ನಡೆಸುವುದಾಗಿಯೂ ಅದು ಹೇಳಿಕೊಂಡಿದೆ.
ಹಿಂದಿನದ್ದೇ ಪೀಠ: ಈ ನಡುವೆ ಆಧಾರ್, ಶಬರಿಮಲೆಗೆ ಮಹಿಳೆಯರ ಪ್ರವೇಶ, ಸಲಿಂಗಕಾಮ ವಿಚಾರ ಸೇರಿದಂತೆ 8 ಪ್ರಮುಖ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ನ ಸಾಂವಿಧಾನಿಕ ಪೀಠ 17ರಿಂದ ಮುಂದುವರಿಸಲಿದೆ. ಈ ಹಿಂದೆ ಇದ್ದ ನ್ಯಾಯಪೀಠವೇ ಅವುಗಳ ವಿಚಾರಣೆ ಮುಂದುವರಿಸಲಿದೆ.
ಮುಖ್ಯ ನ್ಯಾಯಮೂರ್ತಿ ಭೇಟಿ ಮಾಡಿದ ಎಸ್ಸಿಬಿಎ: ಸುಪ್ರೀಂ ಕೋರ್ಟ್ ನ್ಯಾಯವಾದಿಗಳ ಸಂಘ (ಎಸ್ಸಿಬಿಎ) ರವಿವಾರ ಸಂಜೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಭೇಟಿ ಮಾಡಿ ಸದ್ಯದ ಬಿಕ್ಕಟ್ಟಿನ ಬಗ್ಗೆ ಮಾತುಕತೆ ನಡೆಸಿದೆ. ಶನಿವಾರ ಸಭೆ ನಡೆಸಿ ಕೈಗೊಂಡಿದ್ದ ನಿರ್ಣಯಗಳ ಪ್ರತಿಯನ್ನು ಅವರಿಗೆ ನೀಡಿದೆ. ಎಸ್ಸಿಬಿಎ ನೀಡಿರುವ ವರದಿಯನ್ನು ಪರಿಶೀಲಿಸುವ ಭರವಸೆಯನ್ನು ಮುಖ್ಯ ನ್ಯಾಯಮೂರ್ತಿ ನೀಡಿದ್ದಾರೆ ಎಂದು ಸಂಘದ ಅಧ್ಯಕ್ಷ ವಿಕಾಸ್ ಸಿಂಗ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ