ಸಂಸ್ಕೃತ: ನೆನಪು ಶಕ್ತಿ ಹೆಚ್ಚಳ
Team Udayavani, Jan 18, 2018, 6:00 AM IST
ವಾಷಿಂಗ್ಟನ್: ಸಂಸ್ಕೃತ ಭಾಷೆಯಲ್ಲಿರುವ ವೇದ ಮಂತ್ರಗಳನ್ನು ಪಠಿಸಿದರೆ ನೆನಪಿನ ಶಕ್ತಿ ಹೆಚ್ಚಲಿದೆ! ಹೀಗಂಥ ನಾವು ಹೇಳುತ್ತಿಲ್ಲ. ಸ್ವತಃ ನರರೋಗ ಶಾಸ್ತ್ರಜ್ಞರ ಅಧ್ಯಯನ ವರದಿಯಲ್ಲೇ ಇದು ಉಲ್ಲೇಖವಾಗಿದೆ. ಹೌದು. ವೇದ ಮಂತ್ರಗಳನ್ನು ಪಠಣ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚಲಿದೆ ಎಂದು ಅಮೆರಿಕದ ನರರೋಗ ಶಾಸ್ತ್ರಜ್ಞ ಜೇಮ್ಸ್ ಹಾರ್ಟ್ಜೆಲ್ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಈ ಅಧ್ಯ ಯನಕ್ಕೆ “ಸಂಸ್ಕೃತ ಎಫೆಕ್ಟ್ ‘ ಎಂದು ಕರೆದಿರುವ ಜೇಮ್ಸ್, ವೇದ ಮಂತ್ರಗಳನ್ನು ಪಠಣ ಮಾಡುವಾಗ ಜ್ಞಾಪಕ ಪ್ರಕ್ರಿಯೆ ನಡೆಯುವ ಮಿದುಳಿನ ಭಾಗ ವಿಸ್ತಾರಗೊಳ್ಳುತ್ತದೆ. ಇದು ಅಲ್ಪ ಮತ್ತು ದೀರ್ಘಕಾಲೀನ ಜ್ಞಾಪನ ಶಕ್ತಿ ಯನ್ನು ವೃದ್ಧಿಸುವಂತೆ ಮಾಡಲಿದೆ ಎಂದು ತಮ್ಮ ವರದಿಯಲ್ಲಿ ವಿವರಿಸಿದ್ದಾರೆ.
ಹಾರ್ಟ್ಜೆಲ್ ಅವರು ಸಂಸ್ಕೃತ ಹಾಗೂ ಟಿಬೆಟನ್ ಅನ್ನು ಕ್ರಮವಾಗಿ ಹಾರ್ವರ್ಡ್, ಕೊಲಂಬಿಯಾ ವಿವಿಗಳು ಮತ್ತು ಟ್ರೆಂಟೋ ವಿವಿ ಯಿಂದ ನ್ಯೂರೋಸೈನ್ಸ್ ಪದವಿ ಪಡೆದಿದ್ದಾರೆ.
ಈ ಅಧ್ಯಯನಕ್ಕೆ ಹಾರ್ಟ್ಜೆಲ್ಗೆ ಹರಿಯಾಣದ ರಾಷ್ಟ್ರೀಯ ಮಿದುಳು ಸಂಶೋಧನಾ ಕೇಂದ್ರ (ಎನ್ಬಿಆರ್ಸಿ)ದ ಡಾ| ತನ್ಮಯನಾಥ್, ಡಾ| ನಂದಿನಿ ಚಟರ್ಜಿ ಸಿಂಗ್ ಕೂಡ ಸಹಕರಿಸಿದ್ದಾರೆ. ಈ ಅಧ್ಯಯನಕ್ಕೆ ದಿಲ್ಲಿಯ ವೇದಿಕ್ ಪಂಡಿತ್ ಶಾಲೆಯ ಶುಕ್ಲ ಯಜುರ್ವೇದ ಪಂಡಿತರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.
ಈ ಪಂಡಿತರು ಸತತ 7 ವರ್ಷಗಳವರೆಗೆ ಶುಕ್ಲ ಯಜುರ್ವೇದವನ್ನು ಪಠಣ ಮಾಡಿದ್ದರು. ಇನ್ನೊಂದೆಡೆ ಸಮೀಪದ ಕಾಲೇಜಿನಿಂದ 21 ಸಾಮಾನ್ಯ ಯುವಕರನ್ನು ಆಯ್ಕೆ ಮಾಡಿಕೊಳ್ಳ ಲಾಗಿತ್ತು. ಎಲ್ಲರೂ ಸರಾಸರಿ 22 ವರ್ಷದ ಯುವಕರಾಗಿದ್ದು, ಇವರ ಮಿದುಳಿನ ಸ್ಕ್ಯಾನಿಂಗ್ ಮಾಡಿ ಅಧ್ಯಯನ ನಡೆಸಿದಾಗ ಈ ಅಂಶಗಳು ಬೆಳಕಿಗೆ ಬಂದಿವೆ. ಆಗ ವೇದಾಧ್ಯಯನ ಮಾಡಿದ ಪಂಡಿತರ ಮಿದುಳು ಸಾಮಾನ್ಯ ಯುವಕರಿಗಿಂತ ಹೆಚ್ಚು ಹಿಗ್ಗಿರುವುದು ಕಂಡುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ