ಬಜೆಟ್ ಹಲ್ವಾ ರೆಡಿ…
Team Udayavani, Jan 21, 2018, 12:27 PM IST
ಮುಂದಿನ ಹಣಕಾಸು ವರ್ಷದ ಬಜೆಟ್ ತಯಾರಿ ಪ್ರಕ್ರಿಯೆ ಶನಿವಾರ ಆರಂಭವಾಗಿದ್ದು, ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ತಯಾರಿಯಲ್ಲಿ ತೊಡಗಿರುವ ಅಧಿಕಾರಿಗಳಿಗೆ ಸಾಂಪ್ರದಾಯಿಕ ಹಲ್ವಾವನ್ನು ಹಂಚಿದರು. ಹಣಕಾಸು ಖಾತೆ ಸಹಾಯಕ ಸಚಿವ ಶಿವಪ್ರತಾಪ್ ಶುಕ್ಲಾ, ವಿತ್ತ ಕಾರ್ಯದರ್ಶಿ ಹಸ್ಮುಖ್ ಅದಿಯಾ ಕೂಡ ಉಪಸ್ಥಿತರಿದ್ದರು. ಫೆ.1ರಂದು ಬಜೆಟ್ ಮಂಡನೆಯಾಗಲಿದೆ.