ಕೆನಡಾ ಪ್ರಧಾನಿಯನ್ನುನಿರ್ಲಕ್ಷಿಸಲಾಗುತ್ತಿದೆಯೇ?
Team Udayavani, Feb 20, 2018, 12:25 PM IST
ನವದೆಹಲಿ: ವಿಶ್ವದ ಯಾವುದೇ ನಾಯಕ ಭಾರತಕ್ಕೆ ಬಂದಾಗಲೂ ಶಿಷ್ಟಾಚಾರ ಬದಿಗಿರಿಸಿ ಅವರನ್ನು ಆತ್ಮೀಯವಾಗಿ ಸ್ವಾಗತಿಸುವ ಪ್ರಧಾನಿ ಮೋದಿ ಈ ಬಾರಿ ಒಂದು ವಾರದ ಭಾರತ ಪ್ರವಾಸಕ್ಕೆಂದು ಆಗಮಿಸಿರುವ ಕೆನಡಾ ಪ್ರಧಾನಿ ಮತ್ತವರ ಕುಟುಂಬವನ್ನು ಏಕೆ ಆ ರೀತಿ
ಸ್ವಾಗತಿಸಿಲ್ಲ ಎಂಬ ಬಗ್ಗೆ ಪ್ರಶ್ನೆಗಳು ಮೂಡತೊಡಗಿವೆ.
ಕೆನಡಾದ ಮಾಧ್ಯಮಗಳಲ್ಲೂ ಈ ಬಗ್ಗೆ ಚರ್ಚೆಗಳು ಶುರುವಾಗಿವೆ. ಕೆನಡಾದಲ್ಲಿ ಖಲಿಸ್ತಾನ ಪರ ಧ್ವನಿಗೆ ಪ್ರಧಾನಿ ಜಸ್ಟಿನ್ ಟ್ರಾಡ್ನೂ ಹಾಗೂ ಅವರ ಸರ್ಕಾರ ಬೆಂಬಲ ನೀಡುತ್ತಿರುವುದೇ ಭಾರತದ ಕೋಪಕ್ಕೆ ಕಾರಣ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ಹಿಂದೆಯೇ ಜಸ್ಟಿನ್
ಸಂಪುಟದ ಇಬ್ಬರು ಸಿಖ್ ಸಚಿವರೂ ಪ್ರತ್ಯೇಕತಾವಾದಿ ಖಲಿಸ್ತಾನಿಗಳಿಗೆ ಬೆಂಬಲ ಘೋಷಿಸಿದ್ದಾರೆ. ಈ ಬಗ್ಗೆ ಕಳೆದ ವರ್ಷ ಪ್ರಧಾನಿ ಜಸ್ಟಿನ್ಗೆ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಖಾರವಾದ ಪತ್ರವನ್ನೂ ಬರೆದಿದ್ದರು. ಜತೆಗೆ, ಕೆನಡಾದ ಸಿಖ್ ಸಚಿವರು ಭಾರತಕ್ಕೆ ಬಂದಾಗ
ಅವರನ್ನು ಭೇಟಿಯಾಗಲೂ ಅಮರೀಂದರ್ ನಿರಾಕರಿಸಿದ್ದರು.
ಇದೀಗ ಸ್ವತಃ ಜಸ್ಟಿನ್ ಕುಟುಂಬ ಭಾರತದಲ್ಲಿದ್ದು, ಅವರಿಗೆ ನೀಡಬೇಕಾದ ಪೂರ್ಣಪ್ರಮಾಣದ ಆತಿಥ್ಯ ಸಿಗುತ್ತಿಲ್ಲ ಎನ್ನಲಾಗಿದೆ. ಇದರ ನಡುವೆಯೇ, ಅಮರೀಂದರ್ ಅವರು ಬುಧವಾರ ಜಸ್ಟಿನ್ ಜತೆ ಮಾತುಕತೆ ನಡೆಸಲಿದ್ದು, ಪ್ರತ್ಯೇಕತಾವಾದಿಗಳ ವಿಚಾರವೂ ಪ್ರಸ್ತಾಪವಾಗುವ
ಸಾಧ್ಯತೆಯಿದೆ. ಸೋಮವಾರ ಜಸ್ಟಿನ್ ಅವರು ಅಹ್ಮದಾಬಾದ್ನ ಐಐಎಂನಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!