ಕ್ಯಾನ್ಸರ್ ಪತ್ತೆಗೆ ಹೊಸ ತಂತ್ರಜ್ಞಾನ
Team Udayavani, Apr 10, 2018, 6:00 AM IST
ನವದೆಹಲಿ: ಸ್ತನ ಕಾನ್ಸರ್ ಪತ್ತೆಗೆ ಹಾಲಿ ಇರುವ ಮ್ಯಾಮೋಗ್ರಫಿಗಿಂತ ಅತ್ಯಂತ ಪರಿಣಾಮಕಾರಿಯಾದ ಇನಾರೆಡ್ ಥರ್ಮೋಗ್ರಫಿ (ಐಆರ್ಟಿ) ಎಂಬ ತಂತ್ರಜ್ಞಾನವನ್ನು ರೋಪರ್ ಐಐಟಿಯಲ್ಲಿನ ವಿಜ್ಞಾನಿಗಳ ತಂಡ ಸಂಶೋಧಿಸಿದೆ. ದೇಶೀಯವಾಗಿ ರೂಪು ಗೊಂಡಿರುವ ಈ ತಂತ್ರಜ್ಞಾನದಿಂದ ನಿಗದಿತ ದೂರದಿಂದಲೇ ಕ್ಯಾನ್ಸರ್ ಕೋಶಗಳನ್ನು ಪತ್ತೆ ಹಚ್ಚಲು, ಯಾವುದೇ ನೋವಿಲ್ಲದೆ, ತ್ವರಿತ ಫಲಿತಾಂಶ ಪಡೆಯಲು ಸಾಧ್ಯವಿದ್ದು, ಹಾಲಿ ಚಾಲ್ತಿಯಲ್ಲಿರುವ ಮ್ಯಮೋಗ್ರಫಿಗಿಂತಲೂ ಪರಿಣಾಮಕಾರಿಯಾಗಿ, ಜನರ ಕೈಗೆಟಕುವ ಬೆಲೆಯಲ್ಲಿ ಕ್ಯಾನ್ಸರ್ ಪತ್ತೆ ಸಾಧ್ಯವಿದೆ ಎಂದು ಸಂಶೋಧಕರಲ್ಲೊಬ್ಬರಾದ ರವಿಬಾಬು ಮುಲವೀಸಲ ತಿಳಿಸಿದ್ದಾರೆ.
ತಪಾಸಣೆ ಹೇಗೆ?: ಬಾಧಿತ ಅಂಗದ ಮೇಓಲೆ ಥರ್ಮಲ್ ಸ್ಟಿಮುಲಸ್ ಎಂಬ ಲೇಪನ ಹಚ್ಚಲಾಗುತ್ತದೆ. ನಂತರ, ಬಾಧಿತ ಪ್ರದೇಶವನ್ನು ಐಆರ್ಟಿ ಯಂತ್ರದ ಮೂಲಕ ಪರಿಶೀಲಿಸಲಾಗುತ್ತದೆ. ಇನಾರೆಡ್ ಕಿರಣಗಳು ವನ್ನು ಮುಟ್ಟಿದ ಕೂಡಲೇ ಆ ಜಾಗದಲ್ಲಿ 2ರಿಂದ 3 ಡಿಗ್ರಿ ಉಷ್ಣಾಂಶ ಉತ್ಪತ್ತಿ ಯಾಗುತ್ತದೆ. ಇದರಿಂದ, ಕಿರಣಗಳು ಬಾಧಿತ ಪ್ರದೇಶದಲ್ಲಿನ ಮಾಹಿತಿಯನ್ನು ಹೊತ್ತು ತಂದು ಯಂತ್ರದಲ್ಲಿ ದಾಖಲಿಸುತ್ತವೆ.
ಪ್ರಯೋಜನ: ಸದ್ಯ ದೇಹದಲ್ಲಿ ಸಾಮಾನ್ಯ ಜೀವಕೋಶಗಳಂತಿದ್ದು, ಮುಂದೆ ಕ್ಯಾನ್ಸರ್ ಆಗಿ ಪರಿವರ್ತನೆಗೊಳ್ಳುವ ಜೀವಕೋಶಗಳನ್ನು ಬೇಗನೇ ಪತ್ತೆ ಹಚ್ಚುತ್ತದೆ. ಇಂಥ ಕೋಶಗಳನ್ನು ಪತ್ತೆ ಹಚ್ಚುವುದು ಮ್ಯಾಮೋ ಗ್ರಫಿಯಲ್ಲಿ ಸಾಧ್ಯವಿಲ್ಲ. ಮ್ಯಾಮೊಗ್ರಫಿ ಪರೀಕ್ಷೆಯಲ್ಲಿರುವ ಅಪಾಯಕಾರಿ ಅಯೋ ನೈಸಿಂಗ್ ವಿಕಿರಣ ಇದರಲ್ಲಿಲ್ಲ. ಐಆರ್ಟಿ ಪರೀಕ್ಷೆ ಒಂದಕ್ಕಿಂತ ಹೆಚ್ಚು ಬಾರಿ ಮಾಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ