ಅಪ್ರಚೋದಿತ ದಾಳಿಗೆ ಉತ್ತರಿಸುವ ಹಕ್ಕು ನಮ್ಮ ಸೈನಿಕರಿಗೆ: ನಿರ್ಮಲಾ
Team Udayavani, Jun 5, 2018, 4:41 PM IST
ಹೊಸದಿಲ್ಲಿ : ಪಾಕಿಸ್ಥಾನದೊಂದಿಗೆ ಒಪ್ಪಿಕೊಂಡ ಪ್ರಕಾರ ರಮ್ಜಾನ್ ಕದನ ವಿರಾಮಕ್ಕೆ ಭಾರತ ಬದ್ಧವಿದೆ; ಆದರೆ ನಮ್ಮ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆದಲ್ಲಿ ಅದಕ್ಕೆ ತಕ್ಕುದಾದ ಉತ್ತರವನ್ನು ನೀಡುವ ಹಕ್ಕನ್ನು ನಾವು ನಮ್ಮ ಸೈನಿಕರಿಗೆ ನೀಡಿದ್ದೇವೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಸ್ಲಾಮಾಬಾದಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ನಮ್ಮ ಗಡಿಗಳನ್ನು ಕಾಯುವುದು ನಮ್ಮ ಕರ್ತವ್ಯ ಮತ್ತು ನಾವದನ್ನು ಸದಾ ಮಾಡುತ್ತಿರುತ್ತೇವೆ. ನಮ್ಮ ಮೇಲೆ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆದಾಗ ನಾವು ಸುಮ್ಮನಿರುವ ಪ್ರಶ್ನೆಯೇ ಇಲ್ಲ; ಅದಕ್ಕೆ ತಕ್ಕುದಾದ ಉತ್ತರವನ್ನು ನಾವು ನೀಡಿಯೇ ತೀರುತ್ತೇವೆ ಎಂದು ಸೀತಾರಾಮನ್ ಸುದ್ದಿ ಗೋಷ್ಠಿಯಲ್ಲಿ ಹೇಳಿದರು.
ಗಡಿಯಲ್ಲಿ ಕದನ ವಿರಾಮ ಏರ್ಪಡುವುದು ಬಹಳ ಮುಖ್ಯ.ಆದರೆ ಉಗ್ರ ದಾಳಿ ನಡೆದಾಗ ನಾವು ಸುಮ್ಮನಿರಲಾರೆವು. ಹಾಗೆಯೇ ನಮ್ಮ ವಿರುದ್ಧ ಉಗ್ರ ಕೃತ್ಯ ನಡೆಯುವ ತನಕ ಮಾತುಕತೆಯನ್ನು ನಡೆಸುವ ಪ್ರಶ್ನೆಯೇ ಇಲ್ಲ. ಭಯೋತ್ಪಾದನೆ ಮತ್ತು ಶಾಂತಿ ಮಾತುಕತೆಗೆ ಜತೆಜತೆಗೆ ಸಾಗಲಾರದು ಎಂದು ಸಚಿವೆ ಸೀತಾರಾಮನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್