ಮರಕ್ಕೆ ಬೈಕ್ ಢಿಕ್ಕಿ : ಬಾಲಕ ಸಹಿತ ಮೂವರ ದಾರುಣ ಸಾವು
Team Udayavani, Jun 21, 2018, 5:29 PM IST
ಹತ್ರಾಸ್, ಉತ್ತರ ಪ್ರದೇಶ : ಹತ್ರಾಸ್ ಕೋತ್ವಾಲಿ ಪೊಲೀಸ್ ಠಾಣೆ ವ್ಯಾಪಿಗೆ ಒಳಪಡುವ ತರ್ಫಾರಾ ಗ್ರಾಮದಲ್ಲಿ ರಸ್ತೆ ಬದಿಯ ಮರಕ್ಕೆ ಮೋಟಾರ್ ಸೈಕಲ್ ಢಿಕ್ಕಿಯಾದ ಅವಘಡದಲ್ಲಿ ಓರ್ವ ಬಾಲಕ ಸೇರಿದಂತೆ ಮೂವರು ಅಸುನೀಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅತ್ಯಂತ ವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದ ಸವಾರನಿಗೆ ನಿಯಂತ್ರಣ ತಪ್ಪಿದ್ದೇ ಅವಘಡಕ್ಕೆ ಕಾರಣವಾಯಿತೆಂದು ತಿಳಿಯಲಾಗಿದೆ.
ಮೃತರನ್ನು ಅನ್ಶೂಲ್ (14), ಸಲ್ಮಾನ್ (22) ಮತ್ತು ವಿಷ್ಣು (24) ಎಂದು ಗುರುತಿಸಲಾಗಿರುವುದಾಗಿ ಪ್ರಭಾರ ಪೊಲೀಸ್ ಠಾಣಾಧಿಕಾರಿ ಜಿ ಎಸ್ ಪವಾರ್ ತಿಳಿಸಿದ್ದಾರೆ. ಅನ್ಶೂಲ್ ಸ್ಥಳದಲ್ಲೇ ಮೃತಪಟ್ಟರೆ ಸಲ್ಮಾನ್ ಮತ್ತು ವಿಷ್ಣು ಆಸ್ಪತ್ರೆಯಲ್ಲಿ ಕೊನೆಯುರಿಸಿರೆಳೆದರು.